ಬೊಗಳೆ ರಗಳೆ

header ads

ಬೊಗಳೆಗೆ ಅತ್ಯುತ್ತಮ ವರದಿ ಪ್ರಶಸ್ತಿ!

ಬೊಗಳೆ ರಗಳೆ ತಂಡಕ್ಕೆ ಅತ್ಯುತ್ತಮ ಒದರಿಗಾರಿಕೆ ಎಂಬ ಪ್ರಶಸ್ತಿ ನೀಡಲು ನಿರ್ಧರಿಸಲಾಗಿದೆ ಎಂದು ತಿಳಿದುಬಂದಿದೆ.

ಇದಕ್ಕೆ ಕಾರಣ, ಅದು ಪ್ರಕಟಿಸಿರುವ "ಪಂದ್ಯವೇ ಡಿಕ್ಲೇರ್" ಎಂಬ ಅತ್ಯುತ್ತಮ ತನಿಖಾ ವರದಿ. ಈಗಾಗಲೇ ಬೊಗಳೆ ಬಿಟ್ಟದ್ದೆಲ್ಲಾ ನಿಜವಾಗತೊಡಗಿರುವುದರಿಂದ ತೀವ್ರವಾಗಿ ಕಳವಳಗೊಂಡಿರುವ ಬೊಗಳೆ ಬ್ಯುರೋ, ಎಲ್ಲಾ ಬಿಟ್ಟವ ದೇಶಕ್ಕೆ ದೊಡ್ಡವ ಎಂಬ ಮಾತಿಗೆ ಬದ್ಧವಾಗಿ, ಎಲ್ಲಾ ಬಿಟ್ಟು ಬಿಡಲು ತೀರ್ಮಾನಿಸುವ ಯೋಚನೆ ಮಾಡುತ್ತಿದೆ ಎಂದು ನಂಬಲನರ್ಹ ಮೂಲಗಳು ತಿಳಿಸಿವೆ.

ಇದು ಬೊಗಳೆಯ ಭವಿಷ್ಯವಾಣಿ ಬ್ಯುರೋಗೆ ಸಂದ ಅಗೌರವ ಎಂದು ಸೊಂಪಾದ ಕರು ತಿಳಿಸಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

8 ಕಾಮೆಂಟ್‌ಗಳು

  1. "ಸುಳ್ಳು ನಮ್ಮಲಿಲ್ಲವಯ್ಯಾ, ಸುಳ್ಳೇ ನಮ್ಮನೆ ದೇವರು", ಎಂದು ಘೋಷಿಸಿದ ನಿಮ್ಮ ಭವಿಷ್ಯವಾಣಿಗಳನ್ನೇ ಸತ್ಯ ಮಾಡಿಬಿಟ್ಟ ಅರಾಜಕಾರಣಿಗಳ ಕರಾಮತ್ತು ಮೆಚ್ಚುವಂಥಾದ್ದಲ್ಲವೇ, ಸೊಂಪಾದ ಕರುವೆ?

    ಪ್ರತ್ಯುತ್ತರಅಳಿಸಿ
  2. ಸುಧೀಂದ್ರರೆ,

    ನೀವು ಅರಾಜಕಾರಣಿಗಳನ್ನು ಬೆಂಬಲಿಸುತ್ತಿರುವುದು ನೋಡಿ ನಮ್ಮ ಸೊಂಪಾಗಿ ಬೆಳೆದ ಕರು ತೀರಾ ಭಯಭೀತರಾಗಿದ್ದಾರೆ.

    ಆದ ಕಾರಣ ಬೊಗಳೆಯ ಇಂದಿನ ವರದಿ ನೋಡಿ ಕೈಚಪ್ಪಾಳೆ ತಟ್ಟಿ ಕುಣಿಯದಂತೆ ನಿಮಗೆ ನಿರ್ದೇಶಿಸಲಾಗಿದೆ.

    ಪ್ರತ್ಯುತ್ತರಅಳಿಸಿ
  3. ಮಹಾಂತೇಶರೆ,

    ವದಿಯೋಗೌಡ್ರು ಪ್ರಶಸ್ತಿ ಕೊಡೋವರೆಗೂ ಕೈ ಮುಂದೆ ಮಾಡುತ್ತಾರೆ, ಆವಾಗ ನಾವೇ ಗಬಕ್ಕನೇ ಎಳೆದುಕೊಳ್ಳದಿದ್ದಲ್ಲಿ, ಬಿಜೆಪಿಗಾದ ಗತಿಯೇ ಆಗುವುದು ಖಂಡಿತ.

    ಪ್ರತ್ಯುತ್ತರಅಳಿಸಿ
  4. ದಿನೇಶ್ ಅವರೆ, ಸ್ವಾಗತ.

    ಒದರಿದ್ದು ಚೆನ್ನಾಗಿದೆ ಅಂತ ನೀವು ಮುಖಕ್ಕೆ ಮಸಿ ಬಳಿದಂತೆ ಹೇಳಿಬಿಟ್ಟಿದ್ದೀರಿ. ಅದಕ್ಕೆ ಧನ್ಯವಾದ ನೀಡದಿದ್ದರೆ ಹೇಗೆ!!!

    ಪ್ರತ್ಯುತ್ತರಅಳಿಸಿ
  5. ಅವಾರ್ಡ್ ಸಿಕ್ಕಿದ್ದು ಬೊಗಳೆ ಆಗಿರಲೂಬಹುದು ಅದು ಬೇರೆ ವಿಷಯ... ಅಂದ ಹಾಗೆ ಅವಾರ್ಡ್ ಸಿಕ್ಕಿತೆಂದು ಬೊಗಳೆ ಬಿಡುವುದನ್ನು ನಿಲ್ಲಿಸಿದರೆ ನೀವು ಮುಲ ತತ್ವವನ್ನು ಮರೆತಂತೆ..

    ಪ್ರತ್ಯುತ್ತರಅಳಿಸಿ
  6. ಓ ಮನಸ-ವೀ ಮನಸಿನವರೆ,

    ಮತ್ತೆ ಮತ್ತೆ ಬೊಗಳೆ ಅಂತ ಹೇಳಿ ರೇಗಿಸುತ್ತಿರುವುದಕ್ಕೆ ಧನ್ಯವಾದ. ಅವಾರ್ಡ್ ಸಿಕ್ಕ ತಕ್ಷಣ ಬೊಗಳೆ ಬಿಡುವುದನ್ನು ನಿಲ್ಲಿಸಲು ನಾವೇನು ಟಿ-20 ಕಪ್ ಗೆದ್ದು ಕ್ರಿಕೆಟ್ ಮರೆತ ಭಾರತ ತಂಡದಂತೆ ಅಂತ ತಿಳಿದುಕೊಂಡಿರಾ????

    ಪ್ರತ್ಯುತ್ತರಅಳಿಸಿ

ಏನಾದ್ರೂ ಹೇಳ್ರಪಾ :-D