tag:blogger.com,1999:blog-253467342024-03-07T23:36:34.528+05:30ಬೊಗಳೆ ರಗಳೆಬೊಗಳೆ ನ್ಯೂಸ್! ಕನ್ನಡ ಸುದ್ದಿ, ನಗು, ವ್ಯಂಗ್ಯ, ಹಾಸ್ಯ, ಕಚಗುಳಿಯೇ ಜೀವಾಳAnveshihttp://www.blogger.com/profile/04356401566159202899noreply@blogger.comBlogger689125tag:blogger.com,1999:blog-25346734.post-71890198183608395002023-12-17T07:00:00.001+05:302023-12-17T07:00:00.141+05:30ನಾವು ಕುಡುಕರೇ, ಮದ್ಯಪಾನ ಪ್ರಿಯರಲ್ಲ: ಆಕ್ರೋಶಭರಿತ ಕುಡುಕರ ಸಂಘದಿಂದ ಓಲಾಟ<p style="text-align: center;"><b><table align="center" cellpadding="0" cellspacing="0" class="tr-caption-container" style="margin-left: auto; margin-right: auto;"><tbody><tr><td style="text-align: center;"><a href="https://blogger.googleusercontent.com/img/b/R29vZ2xl/AVvXsEh3RmtfwskHc8WPPRH4SXyeVi2A-XHh4OeEHp-kD7Ztkid-8Bfe1Hazhyphenhyphenn3L5JH8679R1iWwp3yw03c9yrtEVbBL-To_DvT39lFvE_lnvA1j-36Tf5z7flsEW9N_fMa3pDCo2a9q6to8UL-Nvd3qedfZAa21If-XJeOsUBz-bZEROn6nZ2QTMoNHg/s900/Drunkards-protest-to-call-them-as-liquor-lovers.webp" imageanchor="1" style="margin-left: auto; margin-right: auto;"><img border="0" data-original-height="512" data-original-width="900" height="364" src="https://blogger.googleusercontent.com/img/b/R29vZ2xl/AVvXsEh3RmtfwskHc8WPPRH4SXyeVi2A-XHh4OeEHp-kD7Ztkid-8Bfe1Hazhyphenhyphenn3L5JH8679R1iWwp3yw03c9yrtEVbBL-To_DvT39lFvE_lnvA1j-36Tf5z7flsEW9N_fMa3pDCo2a9q6to8UL-Nvd3qedfZAa21If-XJeOsUBz-bZEROn6nZ2QTMoNHg/w640-h364/Drunkards-protest-to-call-them-as-liquor-lovers.webp" width="640" /></a></td></tr><tr><td class="tr-caption" style="text-align: center;"><span style="font-family: Noto Sans Kannada;">ಸಚಿವ ಸಂತೋಷ ಲಾಡಿಗೇ ದುಂಬಾಲುಬಿದ್ದ ಮದ್ಯಪಾನ ಪ್ರಿಯರು</span></td></tr></tbody></table></b></p><p style="text-align: center;"><b><span style="font-family: 'Baloo Tamma 2'; font-size: medium;">[ಬೊಗಳೂರು ಹ್ಹೆಹ್ಹೆಹ್ಹೆ ಬ್ಯುರೋದಿಂದ]</span></b></p><p><span style="font-family: 'Baloo Tamma 2'; font-size: medium;"><b>ಬೊಗಳೂರು: </b>ಬೊಗಳೆ-ರಗಳೆ ಬ್ಯುರೋವನ್ನೇ ಬೆಚ್ಚಿ ಬೀಳಿಸುವ, ಅನ್ವೇಷಿಯ ಅಸ್ತಿತ್ವಕ್ಕೇ ಧಕ್ಕೆ ತರುವ ವರದ್ದಿಯೊಂದನ್ನು ನಾಡಿನ <a href="https://www.prajavani.net/district/belagavi/liquor-lovers-stage-protest-in-belagavi-suvarna-soudha-2603824" target="_blank">ಪ್ರತಿಷ್ಠಿತ ಪತ್ರಿಕೆಗಳೆಲ್ಲವೂ ನಾಮುಂದು ತಾಮುಂದು </a>ಎಂದು ಪೈಪೋಟಿಗೆ ಬಿದ್ದು ಪ್ರಕಟಿಸಿರುವುದು ಹೊಸ ಪ್ರತಿಭಟನೆಗೆ ನಾಂದಿ ಹಾಡಿದೆ.</span></p><p><span style="font-family: "Baloo Tamma 2"; font-size: large;">ನಿತ್ಯ ದುಡಿ, ಸತ್ಯ ನುಡಿ, ಸ್ವಲ್ಪ ಕುಡಿ, ಮನೆಗೆ ನಡಿ ಎಂಬ ಘೋಷವಾಕ್ಯವನ್ನೇ ಬಂಡವಾಳವಾಗಿಸಿಕೊಂಡ ಕುಡಿಗಳ ಸಂಘವೊಂದು, ಡಿಸೆಂಬರ್ 31ನ್ನು ಮದ್ಯಪಾನ ಪ್ರಿಯರ ದಿನವೆಂದು ಘೋಷಿಸಬೇಕೆಂದು ಆಗ್ರಹಿಸಿರುವುದು ತೀರಾ ಆಘಾತಕಾರಿ ವಿಚಾರ ಎಂದು ಬೊಗಳೂರು ಕುಡುಕರ ಸಂಘ (ನಾನ್-ರಿಜಿಸ್ಟರ್ಡ್)ದ ಅಧ್ಯಕ್ಷರು ಪುತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.</span></p><p><span style="font-family: "Baloo Tamma 2"; font-size: large;"><b><span style="color: #674ea7;">ಬೊಗಳೆ ಬ್ಯುರೋವನ್ನು ಫೇಚುಬುಕ್ಕಿನಲ್ಲಿ <a href="https://www.facebook.com/Anveshi.net/">ಇಲ್ಲಿ </a>ಹಾಗೂ ಎಕ್ಸಿನಲ್ಲಿ <a href="https://twitter.com/Anveshi">ಇಲ್ಲಿ</a> ಹಿಂಬಾಲಿಸಿ, ಪ್ರೋತ್ಸಾಹಿಸಿ.</span></b></span></p><p><span style="font-family: "Baloo Tamma 2"; font-size: large;">ಕುಡಿಯುವವರನ್ನು ಕುಡುಕ ಎಂದು ಕರೆಯಬಾರದೆಂಬ ಬೇಡಿಕೆ ಮಾತ್ರ ತೀರಾ ಅಸಂಬದ್ಧ, ಆಘಾತಕಾರಿ ಮತ್ತು ಇದು ಕುಡುಕ ಜನಾಂಗಕ್ಕೇ ಅವಮಾನಕರ ಎಂದು ಈ ಸಂಘವು ಅದೇನೋ ಪ್ರಿಯರ ಸಂಘದ ವಿರುದ್ಧ ಪ್ರತಿ-ಪ್ರತಿಭಟನೆಗೆ ಸಜ್ಜಾಗಿದೆ.</span></p><p><span style="font-family: "Baloo Tamma 2"; font-size: large;">ಪ್ರತಿಭಟನೆಯ ನೇತೃತ್ವ ವಹಿಸುವಂತೆ ಬೊಗಳೆ ಬ್ಯುರೋಗೆ ಕುಡುಕರ ಸಂಘವು ದುಂಬಾಲು ಬಿದ್ದಿದೆಯಾದರೂ, ಶೀಘ್ರದಲ್ಲೇ ಈ ಕುರಿತು ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ಬೊ.ರ. ಬ್ಯುರೋ ಮೂಲಗಳು ದೃಢಪಡಿಸಿವೆ.</span></p><p><span style="font-family: "Baloo Tamma 2"; font-size: large;">ಡಿಸೆಂಬರ್ 31ನ್ನೇ ಮದ್ಯಪಾನ ಪ್ರಿಯರ ದಿನ ಎಂದು ಕರೆದರೆ, ನಾವು ಈಗಾಗಲೇ ಇಟ್ಟಿರುವ ಕುಡುಕರ ದಿನ (ಡಿಸೆಂಬರ್ 31 ಹಾಗೂ ಜನವರಿ 1) ಎಂಬುದಕ್ಕೆ ಅತಿದೊಡ್ಡ ಹೊಡೆತ ಬೀಳಲಿದೆ. ಹೊಸ ವರ್ಷದ ಹೆಸರಲ್ಲಿ ಸಂಭ್ರಮ ಅಲೆಯಲ್ಲಿ ಇದ್ದಲ್ಲೆಲ್ಲಾ ತೇಲಾಡುತ್ತಾ, ಓಲಾಡುತ್ತಾ, ಬೀಳಾಡುತ್ತಾ ಇರುವ ಕುಡುಕರ ಅಸ್ತಿತ್ವಕ್ಕೇ ಕೊಡಲಿಯೇಟು ಆಗಲಿದೆ. ಆ ದಿನ ಮಾಮೂಲಿಗಿಂತ ಹೆಚ್ಚು ಅಶಿಕ್ಷಿತರ ಜೊತೆಗೆ, ಸುಶಿಕ್ಷಿತರು, ಸಿರಿವಂತರು ಮತ್ತು ಸಮಾಜದ ಗಣ್ಯ ವ್ಯಕ್ತಿಗಳು ಕೂಡ ಕುಡುಕರ ಸಂಘಕ್ಕೆ ಸೇರಿಕೊಳ್ಳುತ್ತಾರೆ. ಹಾದಿ ಬೀದಿಯಲ್ಲಿ ಬಿದ್ದಿರುತ್ತಾರೆ ಮತ್ತು ತಮ್ಮದೇ ಮನೆಗೆ ವಾಪಸ್ಸಾಗುತ್ತಾರೆ ಎಂಬ ಗ್ಯಾರಂಟಿ ಇರುವುದಿಲ್ಲ. ಅಂದರೆ, ಬೇರೆಯವರ ಮನೆಯ ಬಾಗಿಲು ಬಡಿದು ಅತ್ಯಂತ ದೊಡ್ಡ ಮನರಂಜನೆಯ ದೃಶ್ಯಾವಳಿಗಳನ್ನು ಈಗಿನ ಬ್ರೇಕಿಂಗ್ ನ್ಯೂಸ್ ಚಾನೆಲ್ಗಳಿಗೆ ಕೊಡುತ್ತಿದ್ದಾರೆ ಎಂಬುದು ಕುಡುಕರ ಸಂಘದ ಸ್ಪಷ್ಟವಾದ ಮತ್ತು ಖಚಿತವಾದ ಮತ್ತು ನಾಲಿಗೆ ತಡವರಿಸದ ಹೇಳಿಕೆಯಾಗಿದೆ.</span></p><p><span style="font-family: "Baloo Tamma 2"; font-size: large;">ಇಡೀ ನಾಡಿಗೇ ಅದೊಂದು ಮನರಂಜನೆಯ ಹಬ್ಬ. ಈಗ ಅವರನ್ನೆಲ್ಲ ಮದ್ಯಪಾನ ಪ್ರಿಯರು ಎಂದು ಬದಲಿಸಿದರೆ ಈ ಮನರಂಜನೆಗೆ ತೊಡಕಾಗಬಹುದು. ಮಧ್ಯರಾತ್ರಿಯನ್ನು ಈಗಾಗಲೇ ಮದ್ಯರಾತ್ರಿ ಎಂದೇ ಕರೆಯಲಾಗುತ್ತಿರುವುದರಿಂದ ಕುಡುಕರ ಸಂಘಕ್ಕೆ ದೊಡ್ಡ ಹೊಡೆತ ಆವತ್ತೇ ಬಿದ್ದಿದೆ. ಕುಡುಕರಿಂದ ಬೊಗಳೂರು ಸರ್ಕಾರಕ್ಕೆ ದೊರೆಯುವ ರಾಜಸ್ವಕ್ಕೂ ಮತ್ತಷ್ಟು ದೊಡ್ಡ ಹೊಡೆತ ಬೀಳಲಿದೆ ಎನ್ನಲಾಗುತ್ತಿದೆ.</span></p><p><span style="font-family: 'Baloo Tamma 2'; font-size: medium;">ಇದಲ್ಲದೆ, ಆ ಸಂಘದವರು ಲಿವರ್ ಡ್ಯಾಮೇಜ್ ಆದ್ರೆ ಸರಕಾರವೇ ಹಣ ಕೊಡಬೇಕು, ಕುಡಿದು ಸತ್ತವರಿಗೆ ಕಲ್ಯಾಣ ನಿಧಿ ಸ್ಥಾಪಿಸಬೇಕು ಎಂದೆಲ್ಲ ಅನರ್ಥಕಾರಿ ಬೇಡಿಕೆಗಳನ್ನು ಮುಂದಿಟ್ಟಿದ್ದಾರೆ. ಹೀಗೆಲ್ಲ ಆದರೆ ಜನಸಂಖ್ಯೆ ಏರುಗತಿಯಲ್ಲಿ ಸಾಗಿ, ಆಕಾಶದ ತುತ್ತತುದಿ ತಲುಪಬಹುದು. ವಾಸ್ತವವಾಗಿ ಕುಡುಕರೇ ದೇಶದ ಜನಸಂಖ್ಯೆ ನಿಯಂತ್ರಣದಲ್ಲಿ ಪ್ರಧಾನ ಪಾತ್ರವಹಿಸುತ್ತಾರೆ, ಅವರ ಲಿವರು, ಕಿಡ್ನಿ, ಅದು ಇದು ಡ್ಯಾಮೆಜ್ ಆಗಿ, ಅವರು ಬೇಗನೇ ದೇಶದ ಜನಸಂಖ್ಯೆಯಿಂದ ಮರೆಯಾಗುತ್ತಾರೆ. ಹೀಗೆಲ್ಲ ಆದರೆ, ಸಾಮಾಜಿಕ ಇಂಬ್ಯಾಲೆನ್ಸ್ ಕೂಡ ಎದುರಾಗಬಹುದು ಎಂಬುದು ಕುಡುಕರ ಸಂಘದ ಆತಂಕ.</span></p><p><span style="font-family: "Baloo Tamma 2"; font-size: large;">ನಮಗೆ ಕುಡುಕ ಹೆಸರೇ ಸೂಕ್ತ. ಮದ್ಯಪ್ರಿಯ ಎಂದರೆ ಅದೇನೋ ಪ್ರಿಯಕರನೂ ಬೇಕು, ಪ್ರಿಯತಮೆಯೂ ಬೇಕಾಗುತ್ತದೆ. ಇವೆಲ್ಲ ರಗಳೆ ನಮಗೆ ಬೇಕಾಗಿಲ್ಲ. ಹಾಗೆಲ್ಲ ಇದ್ದರೆ, ಮದ್ಯಪ್ರೇಮಿ, ಮದ್ಯಪ್ರೇಯಸಿ, ಮದ್ಯಪ್ರಿಯಕರ ಎಂದೆಲ್ಲ ಕೂಡ ಯಾರು ಯಾರಿಗೆ ಎನ್ನುವುದೇ ಮರೆತು ಹೋಗುತ್ತದೆ. ಆದರೆ, ಕುಡುಕ/ಕಿ ಎಂದರೆ ಎರಡೇ ಜಾತಿ. ಕುಡುಕರು ಮತ್ತು ಕುಡಿಯದವರು ಅಂತ.</span></p><p><span style="font-family: "Baloo Tamma 2"; font-size: large;">ಹೀಗಾಗಿ, ಇಲ್ಲಿ ಮೀಸಲಾತಿಗೂ ಜಾಸ್ತಿ ಕಸರತ್ತು ನಡೆಸಬೇಕಾಗಿರುವುದಿಲ್ಲ. ಈ ಕುರಿತು ಶೀಘ್ರವೇ ಕೇಂದ್ರಕ್ಕೆ ನಿಯೋಗ ಕೊಂಡೊಯ್ಯಲಾಗುವುದು. ತೀರಾ ಅಗತ್ಯ ಬಿದ್ದರೆ ತೂರಾಡುತ್ತಲೇ ವಿಶ್ವ ಸಂಸ್ಥೆಗೂ ದೂರು ಒಯ್ಯಲಾಗುವುದು, ಅಲ್ಲಿಯೂ ಪ್ರತಿಭಟನೆ ನಡೆಸಲಾಗುವುದು ಎಂದು ಬೊಗಳೂರು ಕುಡುಕರ ಸಂಘದ ಅಧ್ಯಕ್ಷ ಕುಡಿ ಕುಮಾರ್ ಮದಿರೂರು ಅವರು ಎಚ್ಚರಿಸಿದ್ದಾರೆ.</span></p>Anveshihttp://www.blogger.com/profile/04356401566159202899noreply@blogger.com0tag:blogger.com,1999:blog-25346734.post-35954132402532116842023-12-16T17:45:00.002+05:302023-12-16T17:45:27.047+05:30ಆತಂಕವಾದಿಗಳಿಗೆ ಬರ: ಉತ್ಪಾದನೆಯಲ್ಲಿ ತೀವ್ರ ಕುಸಿತ; ಬೆಲೆ ಏರಿಕೆ ನಿಚ್ಚಳ<p style="text-align: center;"><b></b></p><div class="separator" style="clear: both; text-align: center;"><b><a href="https://blogger.googleusercontent.com/img/b/R29vZ2xl/AVvXsEiEhtWvu68T6VoLJGuHy_TssO0WrenQPlrwl21wtVe2nBA0eQK798J3tx5r1Pa1nNw5Ojv0JcepJBAPvH8fcCNOhUwZSnt750DBFxAT0dPei3KQV7yvloZyg1OFaNuwid_yEUsW7bJMj_45LPvBm9cyKsy768z9fr_DvBiImQHBTeQR7Mi9a-ygxw/s615/Terrorists%20died%20by%20unknown%20persons.webp" imageanchor="1" style="margin-left: 1em; margin-right: 1em;"><img border="0" data-original-height="419" data-original-width="615" height="436" src="https://blogger.googleusercontent.com/img/b/R29vZ2xl/AVvXsEiEhtWvu68T6VoLJGuHy_TssO0WrenQPlrwl21wtVe2nBA0eQK798J3tx5r1Pa1nNw5Ojv0JcepJBAPvH8fcCNOhUwZSnt750DBFxAT0dPei3KQV7yvloZyg1OFaNuwid_yEUsW7bJMj_45LPvBm9cyKsy768z9fr_DvBiImQHBTeQR7Mi9a-ygxw/w640-h436/Terrorists%20died%20by%20unknown%20persons.webp" width="640" /></a></b></div><p></p><p style="text-align: center;"><b><span style="font-family: 'Baloo Tamma 2'; font-size: medium;">[ಬೊಗಳೂರು ಭಯೋತ್ಪಾದನಾ ನಿಗ್ರಹ ಬ್ಯುರೋದಿಂದ]</span></b></p><p><span style="font-family: 'Baloo Tamma 2'; font-size: medium;"><b>ಬೊಗಳೂರು: </b>ಕಳೆದ ಹತ್ತು ವರ್ಷಗಳಿಂದೀಚೆಗೆ ದೇಶದಲ್ಲಿ ಭಯದ ಉತ್ಪಾದನೆಯಲ್ಲಿ ತೀವ್ರ ಕುಸಿತ ಕಂಡುಬಂದಿದ್ದು, ಬಾಂಬ್, ಪಿಸ್ತೂಲು, ಗನ್ನು ಮುಂತಾದವುಗಳ ಬೆಲೆ ತೀವ್ರವಾಗಿ ಏರಿಕೆಯಾಗುವ ನಿರೀಕ್ಷೆ ಇದೆ ಎಂದು ಬೊಗಳೂರು ತನಿಖಾ ಬ್ಯುರೋ ಪತ್ತೆ ಹಚ್ಚಿದೆ.</span></p><p><span style="font-family: "Baloo Tamma 2"; font-size: large;">ಹತ್ತು ವರ್ಷಗಳಲ್ಲಿ ದೇಶಾದ್ಯಂತ ಆತಂಕಕ್ಕೆ, ಹಿಂಸಾಚಾರಕ್ಕೆ ತೀವ್ರ ಬರ ಕಾಣಿಸಿಕೊಂಡಿದೆ. ಹೀಗಾಗಿಯೇ ಭಯದ ಉತ್ಪಾದನೆಯಲ್ಲಿ ತೀವ್ರ ಕುಸಿತವಾಗಿದೆ. ಇದೇ ವರ್ಷದಲ್ಲೇ 196 ಮೆಟ್ರಿಕ್ ಟನ್ನಷ್ಟು ಭಯ ಉತ್ಪಾದನೆ ನಿರೀಕ್ಷಿಸಲಾಗಿತ್ತು. ಆದರೆ, ಇದು ಕೇವಲ ಐದಾರು ಮೆಟ್ರಿಕ್ ಟನ್ಗೆ ಇಳಿಕೆಯಾಗಿದೆ ಎಂದು ಮೂಲಗಳು ತಿಳಿಸಿಲ್ಲ.</span></p><p><span style="font-family: "Baloo Tamma 2"; font-size: large;">ದೇಶಾದ್ಯಂತ ಆತಂಕಕಾರಿಗಳು ಮತ್ತು ಆತಂಕಕಾರಿ ವಸ್ತುಗಳಿಗೆ ಬರ ಇದೆ. ಇದಕ್ಕೆಲ್ಲ ಕಾರಣ, ಜನರು ಸರಿಯಾಗಿ ವಿದ್ಯಾವಂತರಾಗುತ್ತಿರುವುದೇ ಆಗಿದೆ. ಹಿಂದೆ, ವಿದ್ಯಾವಂತರಲ್ಲದ, ಅಶಿಕ್ಷಿತ ಜನರು ಸಾಕಷ್ಟು ಮಂದಿ ಕೂಲಿ-ನಾಲಿ ಕೆಲಸಕ್ಕೆ ಲಭ್ಯವಾಗುತ್ತಿದ್ದರು. ಆದರೆ, ಈಗ ಜನರು ಸುಶಿಕ್ಷಿತರಾಗಿದ್ದಾರೆ, ತಮ್ಮ ದೇಶದ ಮತ್ತು ದೇಹದ ಬಗ್ಗೆ ಹೆಚ್ಚು ಕಾಳಜಿ ಹೊಂದಿದ್ದಾರೆ. ಹೀಗಾಗಿ ಭಯ ಉತ್ಪಾದನೆಯತ್ತ ಜನರು ಮುಖ ಮಾಡುತ್ತಿಲ್ಲ ಎಂದು ಅನ್ವೇಷಿ ನಡೆಸಿದ ತನಿಖೆಯಿಂದ ತಿಳಿದುಬಂದಿದೆ.</span></p><p><span style="font-family: "Baloo Tamma 2"; font-size: large;">ಜೊತೆಗೆ, ಭಯ ಉತ್ಪಾದನಾ ಉದ್ಯಮವು ಕೂಡ ತೀರ ಆತಂಕಕಾರಿ ಪರಿಸ್ಥಿತಿಯನ್ನು ಎದುರಿಸುತ್ತಿದೆ. ದೇಶದಲ್ಲಿ ಮಾತ್ರವಲ್ಲದೆ, ವಿದೇಶದಲ್ಲಿಯೂ ಅನಾಮಿಕ ವ್ಯಕ್ತಿಗಳು ಈ ಉದ್ಯಮದಲ್ಲಿ ನಿರತರಾಗಿದ್ದವರನ್ನು ಟಾರ್ಗೆಟ್ ಮಾಡಿ, ಸದ್ದಿಲ್ಲದೇ ಮುಗಿಸಿಬಿಡುತ್ತಿದ್ದಾರೆ. ಹೀಗಾಗಿ, ಭಾರತದಲ್ಲಿ ಮಾತ್ರವಲ್ಲದೆ, ವಿಶ್ವದ ವಿವಿಧೆಡೆಯೂ ಭಯದ ಉತ್ಪಾದನೆಗೆ ತೀವ್ರ ತೊಡಕಾಗಿದೆ.</span></p><p><span style="font-family: 'Baloo Tamma 2'; font-size: medium;">ಬೆಲೆ ಏರಿಕೆ ತಡೆಯುವುದಕ್ಕಾಗಿ ಭಾರತವು ಕೂಡ ಆತಂಕವಾದಿಗಳನ್ನು ವಿದೇಶದಿಂದ, ವಿಶೇಷವಾಗಿ ಪಾಕಿಸ್ತಾನ, ಬಾಂಗ್ಲಾದಿಂದ ಆಮದು ಮಾಡುವುದಕ್ಕೂ ಕಡಿವಾಣ ಹಾಕಿದೆ. ಹೀಗಾಗಿ, ಪೂರೈಕೆಯ ಕೊರತೆಯುಂಟಾಗಿದೆ. ಈಗಾಗಲೇ ಈಶಾನ್ಯ ರಾಜ್ಯಗಳಾದ ಅಸ್ಸಾಂ, ಮಣಿಪುರ ಮುಂತಾದೆಡೆ ಬಾಂಗ್ಲಾ ಮತ್ತು ಪಾಕಿಸ್ತಾನದಿಂದ ಆಮದಾಗುತ್ತಿದ್ದ ಉತ್ಪನ್ನಗಳಿಗೆ ಅಲ್ಲಿನ ಆಡಳಿತಗಳು ತೀವ್ರ ಕಡಿವಾಣ ಹಾಕಿ, ಕುತ್ತಿಗೆ ಬಿಗಿದಿವೆ. ಇದರಿಂದಾಗಿಯೇ ದೇಶದೆಲ್ಲೆಡೆ ಸಮಸ್ಯೆ ಆಗಿದೆ.</span></p><p><span style="font-family: "Baloo Tamma 2"; font-size: large;">ಆದರೆ, ಪೂರ್ವದ ಪಶ್ಚಿಮ ಬಂಗಾಳದ ಸರಕಾರವು ಭಯ ಉತ್ಪಾದಕರಿಗೆ ಹೆಚ್ಚಿನ ನೆರವು ನೀಡಿ, ದೇಶದೊಳಗಿನ ಉತ್ಪನ್ನವನ್ನು ಹೆಚ್ಚಿಸಲು ಶ್ರಮಿಸುತ್ತಿರುವುದಾಗಿ ವರದಿಯಾಗಿದ್ದು, ಇದನ್ನು ಬೊಗಳೆ ಬ್ಯುರೋ ತನಿಖೆ ನಡೆಸಲು ನಿರ್ಧರಿಸಿದೆ.</span></p>Anveshihttp://www.blogger.com/profile/04356401566159202899noreply@blogger.com1tag:blogger.com,1999:blog-25346734.post-86120968975071427302023-01-21T16:17:00.003+05:302023-01-21T16:17:30.086+05:30BarKing News | ಹಾಲು-ಮೊಟ್ಟೆ ಬೇಡ; ಮದ್ಯದ ಬಾಟಲಿ ನೀಡಿ: ಅಂಗನವಾಡಿ ವಿದ್ಯಾರ್ಥಿಗಳ ಪ್ರತಿಭಟನೆ<p><span style="font-family: 'Baloo Tamma 2'; font-size: medium;"></span></p><div class="separator" style="clear: both; text-align: center;"><span style="font-family: 'Baloo Tamma 2'; font-size: medium;"><a href="https://blogger.googleusercontent.com/img/b/R29vZ2xl/AVvXsEgzJXmcNWZDmmwvK_vicY54nEltf9zjB9C5ITnXo-_xDOxT1uqlqHRQQ0xhdnRwXHjsVPsfyt2ZWQuDnikk3Mlt7BU9PuH1X72waBDgdzYv7wyTwsUm8UA7awentGY86Le0W2DPfU0zNybolFw4h7HSf6U1jV3C_eBDKenHRBZjAGQbyrzjpDE/s927/Drinking-age-limit-decreased.jpg" imageanchor="1" style="margin-left: 1em; margin-right: 1em;"><img border="0" data-original-height="536" data-original-width="927" height="231" src="https://blogger.googleusercontent.com/img/b/R29vZ2xl/AVvXsEgzJXmcNWZDmmwvK_vicY54nEltf9zjB9C5ITnXo-_xDOxT1uqlqHRQQ0xhdnRwXHjsVPsfyt2ZWQuDnikk3Mlt7BU9PuH1X72waBDgdzYv7wyTwsUm8UA7awentGY86Le0W2DPfU0zNybolFw4h7HSf6U1jV3C_eBDKenHRBZjAGQbyrzjpDE/w400-h231/Drinking-age-limit-decreased.jpg" width="400" /></a></span></div><b style="font-family: "Baloo Tamma 2"; font-size: large;"><p><b>ಬೊಗಳೂರು: </b>ಅಸ್ವಸ್ಥ ಸಮಾಜ ನಿರ್ಮಾಣಕ್ಕಾಗಿ ಬೊಗಳೂರು ಸರಕಾರ ಕೈಗೊಂಡ ನಿರ್ಧಾರಕ್ಕೆ ವ್ಯಾಪಕ ಸ್ವಾಗತ, ಪ್ರಶಂಸೆ ವ್ಯಕ್ತವಾಗಿದ್ದು, ಅಂಗನವಾಡಿ ವಿದ್ಯಾರ್ಥಿ ಸಂಘ ಸೇರಿದಂತೆ ದೇಶಾದ್ಯಂತ ಇರುವ ಬಾಲ-ಕರುಗಳ ಸಂಘವು ಹೊಸ ಒತ್ತಾಯವೊಂದನ್ನು ಮುಂದಿಟ್ಟು ಪ್ರತಿಭಟನೆ ನಡೆಸಿವೆ.</p></b><p></p><p><span style="font-family: 'Baloo Tamma 2'; font-size: medium;">ಕುಡಿಯುವ ವಯಸ್ಸನ್ನು 21ರಿಂದ 18ಕ್ಕೆ ಇಳಿಸಿದ ಸರಕಾರದ ನಿರ್ಧಾರಕ್ಕೆ ಹರ್ಷ ವ್ಯಕ್ತಪಡಿಸಿರುವ ಅಖಿಲ ಭಾರತ ಅಂಗನವಾಡಿ ವಿದ್ಯಾರ್ಥಿ ಸಂಘದ ಪದಾಧಿಕಾರಿಗಳು, ದಿಢೀರ್ ಸಭೆ ಸೇರಿದರು. ಅಂಗನವಾಡಿ ಮಕ್ಕಳಿಗೂ, ಹಾಲು-ಮೊಟ್ಟೆ-ಬಾಳೆಹಣ್ಣು ಇತ್ಯಾದಿಗಳ ಬದಲಾಗಿ, ಕೇವಲ ಮದ್ಯ ಪೂರೈಸಿದರೆ ಸಾಕು. ಇದರಿಂದ ರಾಜ್ಯದ ಬೊಕ್ಕಸಕ್ಕೂ ಉಳಿತಾಯವಾಗುತ್ತದೆ ಎಂಬ ಹಕ್ಕೊತ್ತಾಯ ಮಂಡಿಸಲು ವಿದ್ಯಾರ್ಥಿ ಸಂಘವು ನಿರ್ಧರಿಸಿರುವುದಾಗಿ ಮೂಲಗಳನ್ನು ಉಲ್ಲೇಖಿಸಿ ಬೊಗಳೆ ಏಕಸದಸ್ಯ ಬ್ಯುರೋದ ಸರ್ವ ಸದಸ್ಯರೂ ವರದ್ದಿ ಮಾಡಿದ್ದಾರೆ.</span></p><div class="separator" style="clear: both; text-align: center;"><a href="https://chat.whatsapp.com/LPjTogvb3H1CQvllmdycvC" target="_blank"><b><span style="font-family: 'Baloo Tamma 2'; font-size: medium;">ಮತ್ತಷ್ಟು ಬೊಗಳೆಗಳಿಗಾಗಿ, ವಾಟ್ಸಪ್ ಗ್ರೂಪ್ ಸೇರಿಕೊಳ್ಳಿ.</span></b></a></div><p><span style="font-family: 'Baloo Tamma 2'; font-size: medium;">ಕೊರೊನಾ ಕಾಡಿದ ಕಾಲದಲ್ಲಿ ಎಲ್ಲವೂ ಮುಚ್ಚಿದ್ದರೂ, ಮದ್ಯದಂಗಡಿಗಳನ್ನು ಮೊದಲು ತೆರೆದಿದ್ದ ಸರಕಾರವು, ಕುಸಿದ ಆರ್ಥಿಕತೆಯನ್ನು ಮೇಲೆತ್ತುವಂತೆ ಮಾಡಿತ್ತು. ಇದೀಗ, ಮತ್ತಷ್ಟು ಕುಸಿದಿರುವ ಸಾಮಾಜಿಕ ಮೌಲ್ಯಗಳನ್ನು ಕಣ್ಣಿಗೆ ಕಾಣದಂತೆ ಮಾಡಲು ಸರಕಾರ ಮುಂದಾಗಿದೆ. ಇದಕ್ಕಾಗಿಯೇ ಕುಡಿಯುವ ವಯಸ್ಸನ್ನು 18ಕ್ಕೆ ಇಳಿಸಲು ನಿರ್ಧರಿಸಿದೆ ಎಂದು ಮೂಲಗಳು ಹೇಳಿವೆ.</span></p><p><span style="font-family: 'Baloo Tamma 2'; font-size: medium;">ಈ ಮಧ್ಯೆ, ತೊಟ್ಟಿಲು ಶಿಶು ಸಂಘಗಳೂ ಎಚ್ಚೆತ್ತುಕೊಂಡಿವೆ. ನಮಗೆ ಬಾಟಲಿ ಹಾಲು ಬೇಡವೇ ಬೇಡ, ಬಾಟಲಿಯಲ್ಲಿ ಮದ್ಯವನ್ನೇ ತುಂಬಿಸಿ ಕೊಡಿ ಎಂದು ಹಗಲು ರಾತ್ರಿಯೆನ್ನದೆ ಈ ಶಿಶುಗಳ ಸಂಘದ ಪದಾಧಿಕಾರಿಗಳು ತೊಟ್ಟಿಲಲ್ಲೇ ಕೈಕಾಲು ಅಲ್ಲಾಡಿಸುತ್ತಾ ಆಗ್ರಹ ಮುಂದಿಟ್ಟಿವೆ ಎಂದು ಅಸತ್ಯಾನ್ವೇಷಿ ಬ್ಯುರೋ ವರದಿ ಮಾಡಿದೆ.</span></p><p><span style="font-family: 'Baloo Tamma 2'; font-size: medium;">ನಮಗೆ ತೊಟ್ಟಿಲಿನಿಂದ ಇಳಿದು, ಮದ್ಯದಂಗಡಿಗೆ ಹೋಗುವಷ್ಟು ಸಾಮರ್ಥ್ಯ ಇಲ್ಲ. ಹೀಗಾಗಿ, ನಾವು ಮಲಗಿದ್ದಲ್ಲಿಗೇ ಮದ್ಯ ಪೂರೈಸಬೇಕು ಎಂಬುದು ಈ ಶಿಶು ಸಂಘದ ಸಮಸ್ತ ಸದಸ್ಯರ ಬೇಡಿಕೆಯಾಗಿದೆ.</span></p><p><span style="font-family: 'Baloo Tamma 2'; font-size: medium;">ಇದರ ನಡುವೆಯೇ, ಸ್ವಸ್ಥ ಸಮಾಜವಿದ್ದರೆ ಈ ಕಾಲದಲ್ಲಿ ಬದುಕುವುದು ಸಾಧ್ಯವಿಲ್ಲ. ಇದಕ್ಕಾಗಿ ಅಸ್ವಸ್ಥ ಸಮಾಜವೇ ಇಂದಿನ ಅಗತ್ಯ ಎಂದು ಮನಗಂಡಿರುವ ಶಿಶು ಸಂಘ ಹಾಗೂ ಅಂಗನವಾಡಿ ಸಂಘದ ಪದಾಧಿಕಾರಿಗಳು ಜಂಟಿ ಅಧಿವೇಶನ ನಡೆಸಿ, ತಮ್ಮ ಮುಂದಿನ ಬೇಡಿಕೆಗಳ ಪಟ್ಟಿಯನ್ನೂ ಸರಕಾರದ ಮುಂದಿಡಲು ತೀರ್ಮಾನಿಸಿದ್ದಾರೆ.</span></p><p><b style="text-align: center;"><u><span style="font-family: 'Baloo Tamma 2'; font-size: medium;">Follow ಬೊಗಳೆ-ರಗಳೆ On <a href="https://www.facebook.com/Anveshi.net" target="_blank">Facebook</a> and <a href="https://twitter.com/Anveshi" target="_blank">Twitter</a>.</span></u></b></p><p><span style="font-family: 'Baloo Tamma 2'; font-size: medium;">ಅವುಗಳಲ್ಲಿ ಪ್ರಮುಖವಾದವೆಂದರೆ, ಸಾಮಾಜಿಕ ಮೌಲ್ಯಗಳನ್ನು ಕಣ್ಣಿಗೆ ಕಾಣದಂತೆ ಮಾಡಬೇಕಿದ್ದರೆ ಮತ್ತು ಸರಕಾರದ ಬೊಕ್ಕಸ - ತನ್ಮೂಲಕವಾಗಿ ರಾಜಕಾರಣಿಗಳ ಜೇಬು ತುಂಬಬೇಕಿದ್ದರೆ, ಶಿಶುಗಳಿಗೆ ಕುಳಿತಲ್ಲೇ ಮದ್ಯ, ಗಾಂಜಾ, ಹುಕ್ಕಾಗಳ ಸರಬರಾಜಾಗಬೇಕು; ಕೈಗೆ ಮೊಬೈಲ್ ಸಿಗುವಂತಿರಬೇಕು; ಜೊತೆಗೆ ಆದಷ್ಟು ಬೇಗ ತಮ್ಮ ವಯಸ್ಸನ್ನು ಮತ್ತಷ್ಟು ಇಳಿಸಿ, ಕಾಂಡೋಂ ಕೂಡ ಪೂರೈಸಬೇಕು ಎಂದು ಆಗ್ರಹಿಸಲು ನಿರ್ಧರಿಸಿರುವುದಾಗಿ ಬೊಗಳೂರು ತನಿಖಾ ಬ್ಯುರೋದ ಬಾತ್ಮೀದಾರರು ಬೊಗಳೆ ಬ್ಯುರೋ ಎದುರು ವರದ್ದಿ ತಂದು ಸುರುವಿದ್ದಾರೆ.</span></p>Anveshihttp://www.blogger.com/profile/04356401566159202899noreply@blogger.com2tag:blogger.com,1999:blog-25346734.post-76365916128846786102022-12-09T15:28:00.006+05:302022-12-09T16:01:59.975+05:30WhatsApp Message Yourself ವೈಶಿಷ್ಟ್ಯದಿಂದ ಯುವಕ ಯುವತಿಯರ ದುಃಖದ ಕಟ್ಟೆ ಧ್ವಂಸ<p></p><div class="separator" style="clear: both; text-align: center;"><a href="https://blogger.googleusercontent.com/img/b/R29vZ2xl/AVvXsEjf4GwbXYvP9xGTWnsLphI9Mg7TN2UPyJuHuWKO8WB2esWjAztgW-6tCAOqqzH5pDjClBbKcJFC-szdmd2HcdB1sMeZ6xj26HONj7uN8Wk98KaoEx63wcGcxzBXgycHVm_MvOdV4Vpfi62S_VF2P7NqwZWMc1ijats9zN1DIz1084Xu9EJOfok/s1200/WhatsApp-Message-Youself.jpg" style="margin-left: 1em; margin-right: 1em;"><img border="0" data-original-height="961" data-original-width="1200" height="512" src="https://blogger.googleusercontent.com/img/b/R29vZ2xl/AVvXsEjf4GwbXYvP9xGTWnsLphI9Mg7TN2UPyJuHuWKO8WB2esWjAztgW-6tCAOqqzH5pDjClBbKcJFC-szdmd2HcdB1sMeZ6xj26HONj7uN8Wk98KaoEx63wcGcxzBXgycHVm_MvOdV4Vpfi62S_VF2P7NqwZWMc1ijats9zN1DIz1084Xu9EJOfok/w640-h512/WhatsApp-Message-Youself.jpg" width="640" /></a></div><p></p><p style="text-align: center;"><b><span style="font-family: Noto Sans Kannada;">[ತಂತ್ರ ಯಂತ್ರ ಮಂತ್ರ ಬ್ಯುರೋದಿಂದ]</span></b></p><p><span style="font-family: Noto Sans Kannada; font-size: medium;"><b>ಬೊಗಳೂರು:</b> ವಾಟ್ಸ್ಆ್ಯಪ್ ಸಂದೇಶ ವಾಹಕ ಆ್ಯಪ್ ಈಗ ಬಹುತೇಕ ಮೊಬೈಲಲ್ಲೇ ಸ್ಫೋಟಗೊಳ್ಳುವಷ್ಟರ ಮಟ್ಟಿಗೆ ಬಳಕೆದಾರರನ್ನು ಪಡೆದಿದೆ. ವಾಟ್ಸ್ಆ್ಯಪ್ ತೆರೆದ ತಕ್ಷಣವೇ ಕ್ರ್ಯಾಶ್ ಆಗುತ್ತಿರುವ ಹಲವಾರು ಪ್ರಕರಣಗಳು ಅಲ್ಲಲ್ಲಿ ವರದ್ದಿಯಾಗಿವೆ.</span></p><p><span style="font-family: Noto Sans Kannada; font-size: medium;">ಈ ವರದ್ದಿಗಳ ಬೆನ್ನು ಹತ್ತಿದ ಏಕಸದಸ್ಯ ಅಸತ್ಯಾನ್ವೇಷಿ ಬ್ಯುರೋದ ಸಮಸ್ತ ಸಿಬ್ಬಂದಿ, ದೊಡ್ಡ ಬೆಟ್ಟ ಗುಡ್ಡಗಳನ್ನೇ ಹೊತ್ತು ತಂದಿದ್ದಾರೆ. ಈ ಬೆಟ್ಟ ಗುಡ್ಡಗಳು, ನೋವಿನದ್ದೋ, ಸಮಸ್ಯೆಗಳದ್ದೋ ಎಂಬುದು ತಿಳಿಯದೆ ಏಕಸದಸ್ಯ ಬ್ಯುರೋದ ಸೊಂಪಾದಕರು ತತ್ತರಿಸಿಹೋಗಿರುವುದಾಗಿ ಪ್ರತಿಸ್ಫರ್ಧಿ ಪತ್ರಿಕೆಗಳು ವರದ್ದಿ ಮಾಡಿವೆ.</span></p><p><span style="font-family: Noto Sans Kannada; font-size: medium;"><b style="font-family: "Baloo Tamma 2"; text-align: center;"><u>Follow ಬೊಗಳೆ-ರಗಳೆ On <a href="https://www.facebook.com/Anveshi.net" target="_blank">Facebook</a> and <a href="https://twitter.com/Anveshi" target="_blank">Twitter</a>. </u></b><a href="https://chat.whatsapp.com/LPjTogvb3H1CQvllmdycvC" style="font-family: "Baloo Tamma 2"; text-align: center;" target="_blank"><b>ಮತ್ತಷ್ಟು ಬೊಗಳೆಗಳಿಗಾಗಿ, ವಾಟ್ಸಪ್ ಗ್ರೂಪ್ ಸೇರಿಕೊಳ್ಳಿ.</b></a></span></p><p><span style="font-family: Noto Sans Kannada; font-size: medium;">ವಿಷಯ ಇಷ್ಟೇ. ವಾಟ್ಸ್ಆ್ಯಪ್ ಇತ್ತೀಚೆಗೆ ತನಗೆ ತಾನೇ ಸಂದೇಶ ಕಳುಹಿಸುವ ವ್ಯವಸ್ಥೆಯೊಂದನ್ನು ಪರಿಚಯಿಸಿದೆ. ಅದುವೇ ಮೆಸೇಜ್ ಯುವರ್ಸೆಲ್ಫ್ (Message Yourself).</span></p><p><span style="font-family: Noto Sans Kannada; font-size: medium;">ಇದರ ಪರಿಣಾಮವಾಗಿಯೇ ಲೋಕದ ಸಮಸ್ತ ದುಃಖಗಳು, ನೋವುಗಳು ಬೆಟ್ಟ ಗುಡ್ಡಗಳಾಗಿಯೂ ಸಮಸ್ಯೆಗಳ ರಾಶಿಯಾಗಿಯೂ ಪರಿವರ್ತನೆಗೊಂಡಿದ್ದು, ಕರಗಲಾರಂಭಿಸಿ ಪ್ರವಾಹ ಭೀತಿಯೇ ಎದುರಾಗಿದೆ ಎಂಬುದನ್ನು ಅಸತ್ಯಾನ್ವೇಷಿ ಬ್ಯುರೋ ಕಂಡುಕೊಂಡಿದೆ. ಮತ್ತು ಇದರಿಂದಾಗಿ ವಾಟ್ಸ್ಆ್ಯಪ್ ಬಳಕೆಯೂ ಸಿಕ್ಕಾಪಟ್ಟೆ ಏರಿಕೆ ಕಂಡಿದ್ದು, ಸಂದೇಶಗಳು ಕೆಲವೊಮ್ಮೆ ಪೋಸ್ಟ್ ಆಗಲು ತಡವಾಗುತ್ತಿರುವುದು, ಆ್ಯಪ್ ಕ್ರ್ಯಾಶ್ ಆಗುವುದು ಮುಂತಾದ ಹಲವು ಪ್ರಕರಣಗಳನ್ನು ಪತ್ತೆ ಮಾಡಲಾಗಿದೆ.</span></p><p><span style="font-family: Noto Sans Kannada; font-size: medium;">ಕೆಲವೆಡೆ, ರಾತ್ರಿ ಮೀರಿದರೂ ಸುಖದ ನಶೆಯಲ್ಲಿ ಓಲಾಡುತ್ತಾ, ತೇಲಾಡುತ್ತಾ ಇರುವ ಯುವ ಜನರು, ತಮಗೆ ತಾವೇ ಸಂದೇಶ ಕಳುಹಿಸುತ್ತಾ, ತಮ್ಮ ದುಃಖ ಹೇಳಿಕೊಳ್ಳುತ್ತಿದ್ದರು. ಮಾತ್ರವಲ್ಲ, ತಮಗೆ ತಾವೇ ಸಂದೇಶ ಕಳುಹಿಸಿ ತಮ್ಮನ್ನು ಸಂತೈಸಿಕೊಳ್ಳುವ ಪ್ರಯತ್ನವನ್ನೂ ಮಾಡುತ್ತಿದ್ದರು.</span></p><p><span style="font-family: Noto Sans Kannada; font-size: medium;">ಏನ್ ಮಚ್ಚಾ, ಹೇಗಿದ್ದೀಯೋ? ಅಂತ ಕೇಳಿದ ತಕ್ಷಣ, ನಾನು ಚೆನ್ನಾಗಿದ್ದೀನೋ, ನೀನು ಹೇಗಿದ್ದೀ? ಅಂತ ಮತ್ತೊಂದು ಸಂದೇಶ! ಇದನ್ನು ಓದಿದಾಗ ಅವರ ದುಃಖದ ಕಟ್ಟೆ ಒಡೆಯುತ್ತಿತ್ತು. ನನ್ನನ್ನೂ ಕೇಳುವವರು ಈ ಲೋಕದಲ್ಲಿದ್ದಾರಲ್ಲ ಎಂಬುದೇ ಸಮಾಧಾನ ತಂದಾಗ, ದುಃಖವೆಲ್ಲವನ್ನೂ ತೋಡಿಕೊಳ್ಳಲಾರಂಭಿಸಿದ್ದಾರೆ ಈ ಯುವಜನತೆ.</span></p><p><span style="font-family: Noto Sans Kannada; font-size: medium;">ಅವಳು ಮಾತಾಡ್ತಿಲ್ಲ ಕಣೋ. ನಾನೇನೂ ಮಾಡಿಲ್ಲ ಅವಳಿಗೆ. ಆದ್ರೆ ಅವ್ಳು ಆ ದುಡ್ಡಿರೋವ್ನು ಕೊಡಿಸಿದ ಒಂದು ಪಿಜ್ಜಾ ಆಸೆಗಾಗಿ ಅವ್ನ ಜೊತೆ ಒಂಟೋದ್ಳು ಎಂದು ಈ ಕಡೆಯಿಂದ ದುಃಖ ತೋಡಿಕೊಳ್ಳುವಿಕೆ. ಅದಕ್ಕೆ ಸಮಾಧಾನ ಹೇಗೆ ಮಾಡೋದು? ಮತ್ತೊಂದು ಮೇಘ ಸಂದೇಶ ಟೈಪಿಂಗು.... </span></p><p><span style="font-family: Noto Sans Kannada; font-size: medium;">"ಹೋಗ್ಲಿ ಬಿಡೋ, ಎಷ್ಟೂಂತ ಕೊರಗ್ತೀಯಾ? ನೀನು ಅವಳೆದುರೇ ಇನ್ನೊಬ್ಬಳಿಗೆ ಐಸ್ ಕ್ರೀಂ ಕೊಡ್ಸು. ಅದೂ ಈ ನವೆಂಬರ್ ಚಳಿಯಲ್ಲಿ ಅವಳದನ್ನು ನೋಡಿ ಗಡ ಗಡ ನಡುಗಬೇಕು. ಅದಕ್ಕಾಗಿ ಗಡ್ಬಡ್ಡನ್ನೇ ಕೊಡ್ಸು. ದುಡ್ಡು ನಾನ್ ಕೊಡ್ತೀನಿ" ಅಂತ.</span></p><p><span style="font-family: Noto Sans Kannada; font-size: medium;">ತನ್ನದೇ ಸಂದೇಶ ಬಂದಾಗ ಇವನಿಗೆ ಖುಷಿ. ಇವನ ದುಃಖವೆಲ್ಲ ಕರಗಿ ಹೋಯಿತು.</span></p><p><span style="font-family: Noto Sans Kannada; font-size: medium;">ಹೀಗೆ, ತಮ್ಮನ್ನು ಸ್ವಲ್ಪವಾದರೂ ಗಮನಿಸುವವರು, ಕಾಳಜಿ ತೋರಿಸುವವರು ಇದ್ದಾರೆ ಎಂಬುದು ಹಲವರ ಖುಷಿಗೆ ಕಾರಣ. ಅದಕ್ಕಿಂತ ಬಲುದೊಡ್ಡ ಖುಷಿ ಎಂದರೆ, ತಾವು ಕಳುಹಿಸಿದ ಸಂದೇಶವನ್ನು ಮತ್ತೊಬ್ಬರು ಓದುತ್ತಾರಲ್ಲಾ ಎಂಬುದು.</span></p><p><span style="font-family: Noto Sans Kannada; font-size: medium;">ಅದನ್ನೂ ಬೊಗಳೆ ರಗಳೆ ಬ್ಯುರೋ ಪತ್ತೆ ಮಾಡಿತು. ಇದನ್ನು ಪತ್ತೆ ಮಾಡಲು ತೆಗೆದುಕೊಂಡ ಶ್ರಮ ಮಾತ್ರ ಅಷ್ಟಿಷ್ಟಲ್ಲ. ಅದೇನೆಂದರೆ, ತಮಗೆ ತಾವೇ ಕಳುಹಿಸಿದ ಸಂದೇಶವನ್ನು ಬೇರೊಬ್ಬರು ಓದಿದ್ದಾರೆ ಎಂಬುದನ್ನು ಖಚಿತಪಡಿಸುವ ಬ್ಲೂ ಟಿಕ್ ಗುರುತುಗಳು! ಅದೂ ಒಂದಲ್ಲ, ಎರಡು!</span></p><p><span style="font-family: Noto Sans Kannada; font-size: medium;">ಆದರೆ, ಈ ತಮಗೆ ತಾವೇ ಸಂದೇಶ ಕಳುಹಿಸುವ ಕಾರ್ಯಕ್ರಮ ಮಾತ್ರ ರಾತ್ರಿಪೂರ್ತಿ ಮುಸುಕೆಳೆದುಕೊಂಡ ಬಳಿಕವೂ ಮುಂದುವರಿಯುತ್ತಿರುವುದು ಹೆತ್ತವರ ಗಮನಕ್ಕೆ ಬಂದಿದ್ದು, ಕೆಲವೆಡೆ ಇಂಟರ್ನೆಟ್ ಬಂದ್, ಮೊಬೈಲ್ ಕಟ್ ಮುಂತಾದ ಸದ್ದುಗಳು ಕೇಳಿಬರತೊಡಗಿರುವುದಾಗಿ ಮೂಲಗಳು ವರದ್ದಿ ತಂದು ಸುರಿದಿವೆ.</span></p>Anveshihttp://www.blogger.com/profile/04356401566159202899noreply@blogger.com2tag:blogger.com,1999:blog-25346734.post-15410632253768280522022-08-26T18:23:00.004+05:302022-08-26T18:39:15.563+05:30BarKing News: ಅಂಡು ನೋವು ಚಿಕಿತ್ಸೆಗೆ ಲಂಡನ್ಗೆ ಹಲವರ ದಂಡು<p style="text-align: center;"><span style="font-family: 'Baloo Tamma 2'; font-size: medium;"></span></p><div class="separator" style="clear: both; text-align: center;"><div class="separator" style="clear: both; text-align: center;"><img border="0" data-original-height="467" data-original-width="700" height="426" src="https://blogger.googleusercontent.com/img/b/R29vZ2xl/AVvXsEgra_ugIVXjluVKPXAUNv375gtMCRRSzw96MfHusZmhVqRAq562szKT4tmH3_VfnvAxwZLjB_yzMCvWKeghmKYxcD9RTZXKT33ioXTj8lm6d9gLdrmqrRyD-Cj2nm0rPcCsVDKHFJBnlJJf7LsWA84TdUKHfPkz3DXsT7eqiE5e1r7ZsDxoleo/w640-h426/Anal%20region%20pain.jpg" width="640" /></div></div><div class="separator" style="clear: both; text-align: center;"><b style="font-family: "Baloo Tamma 2"; font-size: large;">[ಬೊಗಳೂರು 'ಆ' ನೋವು ಬ್ಯುರೋದಿಂದ]</b></div><p><span style="font-family: 'Baloo Tamma 2'; font-size: medium;"><b>ಬೊಗಳೂರು:</b> ಚಿಕಿತ್ಸೆಗಾಗಿ ಶಾಸಕರೆಲ್ಲರೂ ವಿದೇಶಕ್ಕೆ ಹೋಗುವ ಪರಿಪಾಠಕ್ಕೆ ಹೊಸ ತಿರುವು ಲಭಿಸಿದೆ. ಬೊಗಳೂರಿನ ಶಾಸಕರೊಬ್ಬರು ಇದೀಗ<a href="https://www.prajavani.net/karnataka-news/mla-puttaraju-visited-to-england-for-treatment-of-toothache-966654.html" target="_blank"> ಹಲ್ಲು ನೋವಿನ ಚಿಕಿತ್ಸೆಗಾಗಿ ಲಂಡನ್ಗೆ ಹೋಗಲು</a> ನಿರ್ಧರಿಸಿದ್ದಾರೆ ಎಂಬ ವರದ್ದಿಯ ಬೆನ್ನು ಬಿದ್ದ ಅಸತ್ಯ ಅನ್ವೇಷಣಾ ಬ್ಯುರೋಕ್ಕೆ ಹೊಸ ಸಂಗತಿಯೊಂದು ತನಿಖೆಯ ವೇಳೆ ಪತ್ತೆಯಾಗಿದೆ.</span></p><p><span style="font-family: 'Baloo Tamma 2'; font-size: medium;">ಇಷ್ಟೇ ಆಗಿದ್ದರೆ ಪರವಾಗಿರಲಿಲ್ಲ. ಆದರೆ, ಭ್ರಷ್ಟಾಚಾರ ನಿಗ್ರಹ ಕಾಯ್ದೆಯಡಿ ಕೇಸು ಎದುರಿಸುತ್ತಿರುವ ಶಾಸಕರು ವಿದೇಶಕ್ಕೆ ಹೋಗಬೇಕೆಂದು ಹಠ ಹಿಡಿಯುತ್ತಿರುವುದರ ಬಗ್ಗೆ ಬೊಗಳೂರಿನ ಏಕಸದಸ್ಯ ಬ್ಯುರೋ ತನಿಖೆ ನಡೆಸಿದಾಗ ಅಚ್ಚರಿಯ ವಿಷಯಗಳು ಕೂಡ ತಿಳಿದುಬಂದವು.</span></p><p><span style="font-family: 'Baloo Tamma 2'; font-size: medium;"><b style="text-align: center;"><u>Follow ಬೊಗಳೆ-ರಗಳೆ On <a href="https://www.facebook.com/Anveshi.net" target="_blank">Facebook</a> and <a href="https://twitter.com/Anveshi" target="_blank">Twitter</a>. </u></b><a href="https://chat.whatsapp.com/LPjTogvb3H1CQvllmdycvC" style="text-align: center;" target="_blank"><b>ಮತ್ತಷ್ಟು ಬೊಗಳೆಗಳಿಗಾಗಿ, ವಾಟ್ಸಪ್ ಗ್ರೂಪ್ ಸೇರಿಕೊಳ್ಳಿ.</b></a></span></p><p><span style="font-family: 'Baloo Tamma 2'; font-size: medium;">ಹಾಗಂತ, ಹಲ್ಲು ನೋವಿಗೆ ಈ ಶಾಸಕರು ಮಾತ್ರವೇ ಹೊರದೇಶಕ್ಕೆ ಹೋಗುತ್ತಿರುವುದಲ್ಲ ಎಂಬುದನ್ನು ಬೊಗಳೂರು ಬ್ಯುರೋ ಕಂಡುಕೊಂಡಿದೆ. ಈ ಮೊದಲು, ಬೊಗಳೂರಿನ ಶೋಷಕರೊಬ್ಬರು, ಕೈನೋವು ಎಂದು ಹಿಂದೆ ಅಮೆರಿಕ, ಸಿಂಗಾಪುರ, ಲಂಡನ್ ಇತ್ಯಾದಿಗಳಿಗೆಲ್ಲ ಹೋಗಿಬಂದಿದ್ದಾರೆ.</span></p><p><span style="font-family: 'Baloo Tamma 2'; font-size: medium;">ಅದೇ ರೀತಿ, ಅಕ್ರಮ ಆಸ್ತಿ ಪಾಸ್ತಿ ಸಂಗ್ರಹ, ಆದಾಯಕ್ಕಿಂತ ಹೆಚ್ಚು ಆಸ್ತಿ ಗುಡ್ಡೆ ಹಾಕಿರುವುದು, ಹಣವನ್ನು ಎಲ್ಲೆಲ್ಲೋ ಹಾಯಿಸಿ, ಕೊನೆಗೆ ತನ್ನದೇ ಬೇನಾಮಿ ಖಾತೆಗೆ ಬೀಳುವಂತೆ ಮಾಡುವುದು, ಮನಿ ಲಾಂಡ್ರಿ ಇಟ್ಟುಕೊಂಡು ಲಾಂಡರಿಂಗ್ ಮಾಡುವುದೇ ಮೊದಲಾದ ಕಾರಣಕ್ಕಾಗಿ ಇಡಿ ಇಡಿಯಾಗಿಯೇ ಇಡಿ (ಜಾರಿ ನಿರ್ದೇಶನಾಲಯ) ತಮ್ಮನ್ನು ವಿಚಾರಿಸಲು ಬರುವ ಹಂತದಲ್ಲೇ, ಒಂದೊಂದೇ ನೋವುಗಳು ಆಗಮಿಸುತ್ತವೆ ಎಂದು ತಿಳಿದುಬಂದಿದೆ.</span></p><p><span style="font-family: 'Baloo Tamma 2'; font-size: medium;">ಇದೇ ಕಾರಣಕ್ಕೆ ತಾಯಿ ಮಕ್ಕಳು ಕೂಡ ವಿದೇಶಕ್ಕೆ ಹೋಗುತ್ತಿದ್ದಾರೆಂಬ ಮಾಹಿತಿಯ ಸುಳಿವೊಂದು ಅಸತ್ಯ ಅನ್ವೇಷಣೆಯಲ್ಲಿರುವಾಗಲೇ ಕಾಲಿಗೆ ಸಿಕ್ಕಿಹಾಕಿಕೊಂಡಿದ್ದು, ಈ ಕುರಿತು ಮತ್ತಷ್ಟು ವಿವರಗಳನ್ನು ಕಲೆ ಹಾಕಲಾಗುತ್ತಿದೆ.</span></p><p><span style="font-family: 'Baloo Tamma 2'; font-size: medium;">ಇಷ್ಟಲ್ಲದೆ, ಕೆಲವೊಂದು ವಿದ್ಯಮಾನಗಳಿಂದಾಗಿ ಕೆಲವರಿಗೆ ಆ ಭಾಗದಲ್ಲಿ ಉರಿಯಲಾರಂಭಿಸಿದೆ ಎಂಬ ಮಾಹಿತಿ ಲಭ್ಯವಾಗಿದ್ದು, ಈ ಉರಿಗೂ ಅಂಡು ನೋವೆಂದು ಹೆಸರಿಸಿ, ಕೆಲವರು ಲಂಡನ್ಗೇ ಹೋಗಬೇಕಿರುವುದಾಗಿಯೂ ಹೇಳಿಕೊಳ್ಳುತ್ತಿದ್ದಾರೆ. ಮತ್ತೆ ಕೆಲವರು ಮಾಲ್ದೀವ್ಸ್ನಲ್ಲಿ ಆಸ್ಪತ್ರೆಗಳಿಲ್ಲದಿದ್ದರೂ ಪರವಾಗಿಲ್ಲ, ನಾವು ಅಲ್ಲಿಗೇ ಹೋಗುತ್ತೇವೆ ಎಂದು ಪಟ್ಟು ಹಿಡಿದಿದ್ದಾರೆ.</span></p><p><span style="font-family: 'Baloo Tamma 2'; font-size: medium;">ಒಟ್ಟಿನಲ್ಲಿ ಹಲ್ಲು ನೋವು ಬರುವಾಗ ವಿದೇಶಕ್ಕೆ ಹೋಗುವ ವಿದ್ಯಮಾನವೊಂದು ಹೊಸ ಹೊಸ ನೋವುಗಳ ಸಾಧ್ಯತೆಗಳಿಗೂ ಕಾರಣವಾಗುತ್ತಿದೆ ಎಂಬುದನ್ನು ಬೊಗಳೆ ಬ್ಯುರೋ ಕಂಡುಕೊಂಡಿರುವುದಾಗಿಯೂ ವರದ್ದಿಯಾಗಿದೆ.</span></p><p><span style="font-family: 'Baloo Tamma 2'; font-size: medium;">ಆದರೆ, ಬೊಗಳೂರು ನಿವಾಸಿಯೊಬ್ಬರು ತಾವು ಪ್ರತಿದಿನವೂ ಬೆಳಗ್ಗೆದ್ದು ಲಂಡನ್ಗೆ ತೆರಳುತ್ತಿರುವುದಾಗಿಯೂ, ಇದಕ್ಕೆ ಕೇವಲ ಒಂದು ಚೊಂಬು ಮಾತ್ರ ಸಾಕಾಗುತ್ತದೆ ಎಂದೂ ಹೇಳಿಕೊಂಡಿರುವುದು ವಿದೇಶ ಪ್ರವಾಸಕ್ಕೆ ಮಾಡಬೇಕಾಗಿಬರುವ ಖರ್ಚು ವೆಚ್ಚಗಳ ಕುರಿತಾಗಿಯೂ ಸಂದೇಹ ಹುಟ್ಟಿಸಿದೆ ಮತ್ತು ಈ ಕುರಿತು ತನಿಖೆಗೆ ಬೊಗಳೂರು ಅಸತ್ಯಾನ್ವೇಷಣಾ ಬ್ಯುರೋಗೆ ಮತ್ತೊಂದು ಹೊಸ ವಿಷಯ ಸಿಕ್ಕಂತಾಗಿದೆ. ಹಾಗಿದ್ದರೆ ಅವರಿಗೆ ಬಹುಶಃ ಅಂಡು ನೋವು ಬಂದಿರಬೇಕು. ಇದಕ್ಕೆ ಲಂಡನ್ ಯಾತ್ರೆಯೇ ಪರಿಹಾರ ಎಂಬುದನ್ನವರು ಕಂಡುಕೊಂಡಿರುವುದಾಗಿ ಪತ್ತೆಯಾಗಿದೆ.</span></p>Anveshihttp://www.blogger.com/profile/04356401566159202899noreply@blogger.com2tag:blogger.com,1999:blog-25346734.post-87593265686352521042022-07-04T17:47:00.003+05:302022-07-04T18:33:28.978+05:30BARking News: ಬ್ಯಾಂಕಿಂಗ್ ವಂಚನೆ ಪ್ರಕರಣಗಳ ಭಯಂಕರ ಕುಸಿತಕ್ಕೆ ಕಾರಣ ಕೇಳಿದ್ರೆ ದಂಗಾಗಿ ಬಿಡ್ತೀರಾ!<p><span style="font-family: 'Baloo Tamma 2'; font-size: large;"></span></p><div class="separator" style="clear: both; text-align: center;"><span style="font-family: 'Baloo Tamma 2'; font-size: large;"><img border="0" data-original-height="1009" data-original-width="938" height="400" src="https://blogger.googleusercontent.com/img/b/R29vZ2xl/AVvXsEhk-tTKB9qmNDIM9f52HxnjEd_t5Jl2-pjhgv1ZgcXcK_GsEaW91lCCTvBXXoZ6D3OfJIODDXjk5vSkgsdYhJauuT0_EqJIixYG5yv1yx0Dba9jzRRnIs14LcCIupoIY22hji3JWZ1OhkYgBfFhXED_voLvQ-A8OErlDUqLnbkD8ovtpa1gma0/w371-h400/Banking-graph.jpg" width="371" /></span></div><p></p><p style="text-align: center;"><span style="font-family: 'Baloo Tamma 2'; font-size: large;"><b>[ಬೊಗಳೂರು ವಂಚನಾ ಬ್ಯುರೋದಿಂದ]</b></span></p><p><span style="font-family: 'Baloo Tamma 2'; font-size: large;"><b>ಬೊಗಳೂರು: </b>ಬೊಗಳೂರೆಂಬ ಹಲವು ದೇಶಗಳ ಒಕ್ಕೂಟದಲ್ಲಿ ಇತ್ತೀಚೆಗೆ ಬ್ಯಾಂಕಿಂಗ್ ವಂಚನೆ ಪ್ರಕರಣಗಳು ತೀವ್ರವಾಗಿ ಮತ್ತು ಭೀಕರವಾಗಿ ಇಳಿಕೆಯಾಗಿವೆ ಎಂದು ಬೊಗಳೆಯ ಏಕ ಸದಸ್ಯ ಬ್ಯುರೋದ ಸರ್ವ ಸದಸ್ಯರು ವರದ್ದಿ ಮಾಡಿದ್ದಾರೆ.</span></p><p><span style="font-family: 'Baloo Tamma 2'; font-size: large;">ಬೊಗಳೂರಿನ ಪಕ್ಕದ ದೇಶವಾದ ಭಾರತದಲ್ಲಿ ಇತ್ತೀಚೆಗೆ ಸುರಕ್ಷತಾ ಕ್ರಮಗಳನ್ನು ಹೆಚ್ಚು ಮಾಡಲಾಗಿದೆ. ಆದರೆ ಮತ್ತೊಂದು ನೆರೆಹೊರೆಯ ದೇಶವಾದ ಪಾಪಿಸ್ತಾನದಲ್ಲಿ ಬ್ಯಾಂಕ್ ವಂಚನೆ ಪ್ರಕರಣಗಳು ತೀವ್ರವಾಗಿ ಕುಸಿತ ಕಂಡಿವೆ. ಇಷ್ಟೇ ಅಲ್ಲ, ಚೀನಾದಿಂದ ಸಹಾಯ ಪಡೆಯುತ್ತಾ ಮತ್ತೊಂದು ನೆರೆಯ ಹೊರೆರಾಷ್ಟ್ರವಾಗುತ್ತಿದ್ದ ಶ್ರೀಲಂಕಾದಲ್ಲಿ ಕೂಡ ಬ್ಯಾಂಕ್ ವಂಚನೆ ಪ್ರಕರಣಗಳು ಭಯಾನಕ ಎನ್ನಿಸುವಷ್ಟರ ಮಟ್ಟಿಗೆ ಕುಸಿತ ಕಂಡಿವೆ. ಈ ಕುರಿತು <a href="https://www.prajavani.net/business/commerce-news/banking-frauds-of-over-rs-100-cr-see-significant-decline-in-fy22-951024.html" target="_blank">ಪ್ರತಿಸ್ಫರ್ಧಿ ಪತ್ರಿಕೆಗಳು ಸಾಕಷ್ಟು ವರದ್ದಿ ಮಾಡಿವೆ. </a></span></p><p><span style="font-family: 'Baloo Tamma 2'; font-size: large;"><b style="text-align: center;"><u>Follow ಬೊಗಳೆ-ರಗಳೆ On <a href="https://www.facebook.com/Anveshi.net" target="_blank">Facebook</a> and <a href="https://twitter.com/Anveshi" target="_blank">Twitter</a>. </u></b><a href="https://chat.whatsapp.com/LPjTogvb3H1CQvllmdycvC" style="text-align: center;" target="_blank"><b>ಮತ್ತಷ್ಟು ಬೊಗಳೆಗಳಿಗಾಗಿ, ವಾಟ್ಸಪ್ ಗ್ರೂಪ್ ಸೇರಿಕೊಳ್ಳಿ.</b></a></span></p><p><span style="font-family: 'Baloo Tamma 2'; font-size: large;">ಆದರೆ, ಭಾರತದಲ್ಲಿಯೂ ಸ್ವಲ್ಪ ಮಟ್ಟಿಗೆ ಬ್ಯಾಂಕ್ ವಂಚನೆ ಪ್ರಕರಣಗಳು ಕಡಿಮೆಯಾಗಿವೆ ಎಂಬುದಂತೂ ಸತ್ಯವೇ. ಪಾಪಿಸ್ತಾನ ಮತ್ತು ಲಂಕೆಗಳಲ್ಲಿ ಈ ಕಾರಣಕ್ಕಾಗಿಯೇ ದಂಗೆ, ಹಿಂಸಾಚಾರ, ಅತ್ಯಾಚಾರ, ಅನಾಚಾರ ಹೆಚ್ಚಾಗಿರುವುದು ಸ್ಪಷ್ಟವಾಗಿ ಗೋಚರಿಸುತ್ತಿದೆ.</span></p><p><span style="font-family: 'Baloo Tamma 2'; font-size: large;">ಇಷ್ಟೇ ಅಲ್ಲ, ಇತ್ತೀಚೆಗೆ ಬೊಗಳೆ ಬ್ಯುರೋದ ಸೊಂಪಾದಕ, ಓದುಗ, ವಿತರಕ ಎಲ್ಲವೂ ಆಗಿರುವ ಅನ್ವೇಷಿಯ ಖಾತೆಯಿಂದಲೂ ಹಣ ದಿಢೀರನೇ ಮಾಯವಾಗುವ ಪ್ರಕರಣಗಳು ಕಡಿಮೆಯಾಗಿವೆ. ಇದೇ ಕಾರಣಕ್ಕೆ ಇತ್ತೀಚೆಗೆ, "ಕ್ಷಮಿಸಿ ನಿಮ್ಮ ಖಾತೆಯಲ್ಲಿ ಹಣವಿಲ್ಲ" ಎಂಬ ಸಂ-ಚಲನಚಿತ್ರವನ್ನೇ ಮಾಡಲಾಗಿದೆ.</span></p><p><span style="font-family: 'Baloo Tamma 2'; font-size: large;">ಬ್ಯಾಂಕಿಂಗ್ ವಂಚನೆ ಪ್ರಕರಣವೇ ಇಡೀ ಜಗತ್ತಿನ ಅತ್ಯಂತ ಪ್ರಮುಖ ಆದಾಯ ಮೂಲಗಳಲ್ಲಿ ಒಂದು. ಇದರಲ್ಲಿಯೇ ಕೋಟ್ಯಂತರ ರೂಪಾಯಿ ವಹಿವಾಟು ನಡೆಯುತ್ತಿದೆ. ಈ ವಹಿವಾಟಿಗೇ ಈಗ ದಿಢೀರ್ ಆಗಿ ಭರ್ಜರಿ ಸಂಖ್ಯೆಯಲ್ಲಿ ಈ ಬ್ಯಾಂಕಿಂಗ್ ವಂಚನೆ ಪ್ರಕರಣಗಳು ಕುಸಿದಿವೆ ಎಂದಾದರೆ, ಇದು ಶಾಂತಿಧೂರ್ತರ ಹೊಟ್ಟೆಪಾಡಿನ ಪ್ರಶ್ನೆ ಎಂಬುದನ್ನು ಅರಿತ ಬೊಗಳೆ ಬ್ಯುರೋದ ತನಿಖಾ ಪುತ್ರಕರ್ತರು, ಅಪರೂಪರಕ್ಕೆಂಬಂತೆ ಸತ್ಯಾಂಶವೊಂದನ್ನು ಪತ್ತೆ ಮಾಡಿದ್ದಾರೆ.</span></p><p><span style="font-family: 'Baloo Tamma 2'; font-size: large;">ಕಾರಣವೇನು ಎಂದರೆ, ಅದುವೇ! ಸಂಚಲನಚಿತ್ರದ ಹೆಸರು - ನಿಮ್ಮ ಖಾತೆಯಲ್ಲಿ ಹಣವೇ ಇಲ್ಲ! ಕೋವಿಡ್ ಕಾರಣದಿಂದಾಗಿ ಜಗತ್ತಿನ ಜನಸಾಮಾನ್ಯರನೇಕರು ಬೆಂದು ನೊಂದು, ಉಳಿತಾಯವನ್ನೆಲ್ಲ ಖಾಲಿ ಮಾಡಿಕೊಂಡಿದ್ದಾರೆ. ಹೀಗಾಗಿ, ಯಾರದ್ದೇ ಖಾತೆಗೆ ಕನ್ನ ಹಾಕಿದರೂ, ಒಂದೆರಡ್ರೂಪಾಯಿ ಮಾತ್ರ ಸಿಗುತ್ತಿತ್ತು! ಖಾತೆಯಲ್ಲಿ ಹಣವಿಲ್ಲದೇ ಇದ್ದರೆ, ವಂಚನೆ ಪ್ರಕರಣಗಳು ನಡೆಯುವುದಾದರೂ ಎಂತು? ಹೀಗಾಗಿ, ಜಗತ್ತಿನಾದ್ಯಂತ ಶಾಂತಿಧೂರ್ತರು, ಪಾತಕಿಸ್ತಾನ ಮೂಲದ ಭಯೋತ್ಪಾದಕರು, ವಂಚಕರು ಕಂಗೆಟ್ಟಿದ್ದಾರೆ ಎಂಬುದು ತನಿಖೆಯಿಂದ ಹೊರಬಿದ್ದ ಅಂಶ.</span></p>Anveshihttp://www.blogger.com/profile/04356401566159202899noreply@blogger.com2tag:blogger.com,1999:blog-25346734.post-23806974178059151452022-07-02T13:12:00.001+05:302022-07-02T13:12:43.754+05:30ರಸ್ತೆ ಗುಂಡಿಗಳಿಂದ ಮಹಾನರಕಕ್ಕೆ ಕೆಟ್ಟ ಹೆಸರು: ಮೂಗ್ನಲ್ಲೂ ಕನ್ನಡ ಪದವಾಡೋಕೆ ತ್ರಾಸ<p></p><div class="separator" style="clear: both; text-align: center;"><a href="https://blogger.googleusercontent.com/img/b/R29vZ2xl/AVvXsEhfmohJEhkua6jQZqqu7yNbIDk6yD4qKrcicACosMWxeRhEX3JvgpUn6zXNRpSOYgDa1EijSx0gVuphLg2_90qcnYFx1e43epWtQVUHpefq3_q_6u2E6PWkCOkUFpLlDLbyqusDvx9kZdwIJS4jbE8fLFBs3Mk12K2IN5qvEgtJJxEd6Om_hk8/s1265/Bengaluru-Roads-Potholes.jpg" imageanchor="1" style="margin-left: 1em; margin-right: 1em;"><span style="font-family: 'Baloo Tamma 2'; font-size: medium;"><img border="0" data-original-height="664" data-original-width="1265" height="336" src="https://blogger.googleusercontent.com/img/b/R29vZ2xl/AVvXsEhfmohJEhkua6jQZqqu7yNbIDk6yD4qKrcicACosMWxeRhEX3JvgpUn6zXNRpSOYgDa1EijSx0gVuphLg2_90qcnYFx1e43epWtQVUHpefq3_q_6u2E6PWkCOkUFpLlDLbyqusDvx9kZdwIJS4jbE8fLFBs3Mk12K2IN5qvEgtJJxEd6Om_hk8/w640-h336/Bengaluru-Roads-Potholes.jpg" width="640" /></span></a></div><b><p><span style="font-family: 'Baloo Tamma 2'; font-size: medium;"><b>ಬೊಗಳೂರು: </b>ನರಕಕ್ಕಿಳ್ಸಿ ನಾಲ್ಗೆ ಸೀಳ್ಸಿ ಬಾಯಿ ಒಲಿಸಾಕಿದ್ರೂನೆ ಮೂಗ್ನಲ್ ಕನ್ನಡ ಪದವಾಡ್ತೀನಿ ಅಂತ ಹೇಳಿದ್ದನ್ನೇ ಸವಾಲಾಗಿ ಸ್ವೀಕರಿಸಿಕೊಂಡಿರುವ ಬೃಹತ್ ಬೊಗಳೂರು ಮಹಾನಗರ ಪಾಲಿಕೆ "ಬಿಬಿಎಂಪಿ"ಗೆ ಮಹಾ ಗರ ಬಡಿದಿದೆಯೋ ಎಂಬ ಕುರಿತು ಬೊಗಳೂರು ಅನ್ವೇಷಿ ಬ್ಯುರೋದಿಂದ ತನಿಖೆ ಶುರುವಾಗಿದೆ.</span></p></b><p></p><p><span style="font-family: 'Baloo Tamma 2'; font-size: medium;">ಗರ ಬಡಿದ ಪರಿಣಾಮವಾಗಿಯೇ ಹೈಕೋರ್ಟ್ ಕೂಡ ಬಿಬಿಎಂಪಿ ಮೇಲೆ ಹರಿಹಾಯ್ದಿದ್ದು, ಹಿಡಿದ ಗರ ಬಿಡುತ್ತದೆಯೇ ಎಂದು ಕಾದುನೋಡಬೇಕಿರುವುದಾಗಿ ವರದ್ದಿಯಾಗಿದೆ.</span></p><p><span style="font-family: 'Baloo Tamma 2'; font-size: medium;"><b style="text-align: center;"><u>Follow ಬೊಗಳೆ-ರಗಳೆ On <a href="https://www.facebook.com/Anveshi.net" target="_blank">Facebook</a> and <a href="https://twitter.com/Anveshi" target="_blank">Twitter</a>. </u></b><a href="https://chat.whatsapp.com/LPjTogvb3H1CQvllmdycvC" style="text-align: center;" target="_blank"><b>ಮತ್ತಷ್ಟು ಬೊಗಳೆಗಳಿಗಾಗಿ, ವಾಟ್ಸಪ್ ಗ್ರೂಪ್ ಸೇರಿಕೊಳ್ಳಿ.</b></a></span></p><p><span style="font-family: 'Baloo Tamma 2'; font-size: medium;">ಇದಕ್ಕೆ ಕಾರಣವೆಂದರೆ, ಪ್ರಧಾನಿ ಅವರು ಬೊಗಳೂರಿಗೆ ಭೇಟಿ ನೀಡಿ ಹೋದ ಬಳಿಕ ರಸ್ತೆಗಳೆಲ್ಲ ಹಾಳಾಗಿದ್ದು, ಇದರಿಂದಾಗಿ ಈಗಾಗಲೇ ನರಕ ಸದೃಶವಾಗಿರುವ ಬೊಗಳೂರಿಗೆ ಕೆಟ್ಟ ಹೆಸರು ಬಂದಿದೆ ಎಂಬುದಾಗಿ ವ್ಯಾಖ್ಯಾನವನ್ನು ಪ್ರಸಿದ್ಧವೂ, ನಮ್ಮ ಪ್ರತಿಸ್ಫರ್ಧಿಯೂ ಆಗಿರುವ ಪತ್ರಿಕೆಯೊಂದು, ತಲೆಬರಹದಲ್ಲಿ ಅಕ್ಷರದೋಷದೊಂದಿಗೆ ಪ್ರಕಟಿಸಿದೆ. "ರಸ್ತೆ ಗುಂಡಿಯಿಂದ ನರಕಕ್ಕೆ ಕೆಟ್ಟ ಹೆಸರು" ಎಂದು ಪ್ರಕಟವಾಗಿರಬೇಕಾದಲ್ಲಿ 'ನಗರಕ್ಕೆ' ಎಂದು ತಪ್ಪು ಅರ್ಥ ಬರುವಂತೆ ಪ್ರಕಟಿಸಿರುವುದನ್ನು ಬೊಗಳೂರು ಬ್ಯುರೋ ಕಂಡುಕೊಂಡಿದೆ.</span></p><p><span style="font-family: 'Baloo Tamma 2'; font-size: medium;">ಅಲ್ಲಲ್ಲಿ ರಸ್ತೆ ಹೊಂಡಗಳು, ಗುಂಡಿಗಳು ಅಷ್ಟೇ ಅಲ್ಲ, ಇಂಥ ಗುಂಡಿಗಳನ್ನು ದಾಟಿ ಹೋಗುವುದಕ್ಕಾಗಿ ಅನಿವಾರ್ಯವಾಗಿರುವ ಗುಂಡಿನಂಗಡಿಗಳೇ ತುಂಬಿರುವ ಬೊಗಳೂರಿನಲ್ಲಿ, ಸರಿಯಾಗಿ ಚಲಿಸುವ ಯಾವುದೇ ವಾಹನಗಳೂ ಕಂಡುಬರುವುದಿಲ್ಲ. ಇತ್ತೀಚಿನ ದಿನಗಳಲ್ಲಂತೂ ಈ ಮಹಾ ನರಕದಲ್ಲಿ ಕನ್ನಡ ಪದ ಬಿಟ್ಟು, ತೆಲುಗು, ತಮಿಳು, ಹಿಂದಿ, ಇಂಗ್ಲಿಷ್ ಪದಗಳೇ ರಾರಾಜಿಸುತ್ತಿವೆ. ಇಂತಹಾ ಪರಿಸ್ಥಿತಿ ಇದ್ದರೂನೂ, ಇವ್ರನ್ನೆಲ್ಲ ನರಕಕ್ಕಿಳ್ಸಿದರೆ ಹೇಗೆ ಮೂಗ್ನಲ್ ಕನ್ನಡ ಪದವಾಡ್ತಾರೆ ಅಂತ ನೋಡಿಯೇಬಿಡೋಣ ಎಂದು ಬೊಗಳೂರು ಪಾಲಿಕೆಯು ಸವಾಲು ಹಾಕಿಕೊಂಡಿದೆ. ಆದರೂ ಅಳಿದುಳಿದ ಕನ್ನಡಿಗರು ಮೂಗ್ನಲ್ ಕನ್ನಡ ಪದವಾಡ್ತಿದ್ದಾರೆ ಎಂಬುದನ್ನು ಬೊಗಳೆ ಬ್ಯುರೋ ಅನ್ವೇಷಣೆ ಮಾಡಿದೆ.</span></p><blockquote class="twitter-tweet"><p dir="ltr" lang="en"><span style="font-family: 'Baloo Tamma 2'; font-size: medium;">At least 40 potholes dot the 500-metre stretch from NICE junction to Kengeri Metro station on Mysuru Road<a href="https://twitter.com/hashtag/BengaluruPotholes?src=hash&ref_src=twsrc%5Etfw">#BengaluruPotholes</a> <a href="https://t.co/mgmAskhdUe">pic.twitter.com/mgmAskhdUe</a></span></p><span style="font-family: 'Baloo Tamma 2'; font-size: medium;">— TOI Bengaluru (@TOIBengaluru) <a href="https://twitter.com/TOIBengaluru/status/1534778555582009345?ref_src=twsrc%5Etfw">June 9, 2022</a></span></blockquote> <span style="font-family: 'Baloo Tamma 2'; font-size: medium;"><script async="" charset="utf-8" src="https://platform.twitter.com/widgets.js"></script></span><p><span style="font-family: 'Baloo Tamma 2'; font-size: medium;">ಇದೀಗ, ಗುತ್ತಿಗೆದಾರರ ಆವಾಂತರದಿಂದಾಗಿ, ಅಲ್ಲಲ್ಲಿ ಎಗರೆಗರಿ ಬೀಳುತ್ತಾ ಏಳುತ್ತಾ ತಲೆ ಮೇಲೆ ಕೈಹೊತ್ತಿರುವ ದ್ವಿಚಕ್ರ ಸವಾರರು, ಪದೇ ಪದೇ ಶಾಕ್ ಅಬ್ಸಾರ್ಬರ್ಗಳನ್ನು ಬದಲಿಸುತ್ತಲೇ ಇರುವ ಚತುಶ್ಕಕ್ರಿಗಳು, ಐಷಾರಾಮಿ ಕಾರುಗಳಲ್ಲಿ ಕುಳಿತ ಕಾರಣದಿಂದಾಗಿ ಎಷ್ಟೇ ಹೊಂಡಗಳಿದ್ದರೂ ತಿಳಿಯದ ರೀತಿ ಅತ್ತಿತ್ತ ಓಡಾಡುವ ಶೋಷಕರು ಮತ್ತು ದುರ್-ಜನಪ್ರತಿನಿಧಿಗಳು. ಅಡ್ಡಡ್ಡ ಅಗೆಯುವುದರ ಬದಲಾಗಿ ರಸ್ತೆಯನ್ನು ಉದ್ದುದ್ದ ಸೀಳುತ್ತಿರುವ ದೂರ್ದೂರವಾಣಿ ಕೇಬಲ್ ಮಂಡಳಿ ಹಾಗೂ ಒಳಚರಂಡಿ-ನೀರು ಮಿಕ್ಸ್ ಸರಬರಾಜು ಮಂಡಳಿ, ಹಾಗೂ ಕೆಲವು ಕಡೆಗಳಲ್ಲಿ ಮೂಗ್ನಲ್ಲಷ್ಟೇ ಕನ್ನಡ ಪದವಾಡುವಾಗ, ಮೂಗು ಮುಚ್ಚಿಕೊಳ್ಳಬೇಕಾದ ಪರಿಸ್ಥಿತಿಯೂ ಇರುವ ಬೊಗಳೂರು ಈಗ ಮಹಾ ನರಕವಾಗಿಬಿಟ್ಟಿದೆ. ಇದನ್ನು ಮಹಾನಗರ ಎಂದು ಬಿಂಬಿಸಿ, ನರಕ ಎಂಬ ಹೆಸರಿಗೆ ಮಸಿ ಬಳಿಯಲಾಗಿದೆ ಎಂದು ಬೊಗಳೂರಿನ ಅಖಿಲ ಭಾರತ ಬೊಗಳೂರು ಪ್ರಜಾ ಸಂಘದ ಅಂಬೋಣ.</span></p>Anveshihttp://www.blogger.com/profile/04356401566159202899noreply@blogger.com2tag:blogger.com,1999:blog-25346734.post-18782190081575490332022-06-29T17:11:00.005+05:302022-07-01T18:55:02.919+05:30ಅಲ್ಲಲ್ಲಿ ಉದುರಿದ ಬೀಜಗಳು: ಕೃಷಿ ಇಲಾಖೆಯ ಅತಿದೊಡ್ಡ ಪ್ರಮಾದ!<p><span style="font-family: 'Baloo Tamma 2'; font-size: medium;"></span></p><table align="center" cellpadding="0" cellspacing="0" class="tr-caption-container" style="margin-left: auto; margin-right: auto;"><tbody><tr><td style="text-align: center;"><a href="https://blogger.googleusercontent.com/img/b/R29vZ2xl/AVvXsEhX415ek3PqzNL5xjZ_IHzDvi4oIWYBZM1zEpCHuq2YbchZ4tr0MJAwoFjiMFIj3Rc5KMPOgtS33U7NDuhfQRi0hMQmgC-7E5OAF8iDhiOxHNVCFfbgXIpjyd2XtSqJpmYmM-oxi_BkrQjLMyASqx2XZN-b-2qtk_XKnXz9KBWz_xFQcAJ5sh8/s720/seeds-pixaby.jpg" style="margin-left: auto; margin-right: auto;"><img border="0" data-original-height="720" data-original-width="685" height="400" src="https://blogger.googleusercontent.com/img/b/R29vZ2xl/AVvXsEhX415ek3PqzNL5xjZ_IHzDvi4oIWYBZM1zEpCHuq2YbchZ4tr0MJAwoFjiMFIj3Rc5KMPOgtS33U7NDuhfQRi0hMQmgC-7E5OAF8iDhiOxHNVCFfbgXIpjyd2XtSqJpmYmM-oxi_BkrQjLMyASqx2XZN-b-2qtk_XKnXz9KBWz_xFQcAJ5sh8/w380-h400/seeds-pixaby.jpg" width="380" /></a></td></tr><tr><td class="tr-caption" style="text-align: center;">ಚಿತ್ರ: ಪಿಕ್ಸಾಬಿ ಕೃಪೆ</td></tr></tbody></table><span style="font-family: 'Baloo Tamma 2'; font-size: medium;"><b></b></span><p></p><div style="text-align: center;"><span style="font-family: 'Baloo Tamma 2'; font-size: medium;"><b><b>[ಬೀಜ ವರದ್ದಿಗಾರರಿಂದ ವಿಶೇಷ ವರದಿ]</b></b></span></div><p></p><p style="text-align: left;"><span style="font-family: 'Baloo Tamma 2'; font-size: medium;"><b>ಬೊಗಳೂರು:</b> ಇತ್ತೀಚೆಗೆ ಬೊಗಳೂರಿನ ವಿವಿಧೆಡೆ ಬೀಜಗಳು ಉದುರಿರುವುದು ಪತ್ತೆಯಾಗಿದೆ. ಇದರ ಹಿಂದಿನ ಜಾಲ ಭೇದಿಸಲು ಹೊರಟ ಬೊಗಳೆ ಬ್ಯುರೋದ ವಿಶೇಷ ವರದ್ದಿಗಾರರಿಗೆ ಸಿಕ್ಕಿದ ಆಘಾತಕಾರಿ ವರದ್ದಿಯೊಂದು ಇಲ್ಲಿದೆ.</span></p><p><span style="font-family: 'Baloo Tamma 2'; font-size: medium;">ಬೊಗಳೂರಿನಲ್ಲಿ ಅಲ್ಲಲ್ಲಿ ಬೀಜಗಳು ಕತ್ತರಿಸಲ್ಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದವು. ಇವು ಯಾರದೆಂದು ತಿಳಿಯದೆ ಊರಿನವರೆಲ್ಲರೂ ಕಂಗಾಲಾಗಿದ್ದರು. ಈ ಬೀಜಗಳೆಲ್ಲವೂ ಬಹುತೇಕವಾಗಿ ಕರಗಿದ ಸ್ಥಿತಿಯಲ್ಲಿದ್ದವು. ಇದರ ಹಿಂದಿನ ಕಾರಣ ಪತ್ತೆ ಮಾಡಲು ಹೊರಟಾಗ ಸಿಕ್ಕಿದ್ದೇ ಗೊಬ್ಬರ! ಇದು ರಾಸಾಯನಿಕಯುಕ್ತ ಗೊಬ್ಬರ. ಗೊಬ್ಬರಕ್ಕೆ ಮಿಶ್ರ ಮಾಡಿದ ರಾಸಾಯನಿಕದಿಂದಾಗಿ ಈ ಬೀಜಗಳು ಕರಗಿ ಕರಗಿ ಸಣ್ಣಗಾಗಿಬಿಟ್ಟಿದ್ದವು. ಕೆಲವಂತೂ ಕೊರಗಿದ್ದವು ಎಂಬುದನ್ನು ಸ್ಥಳೀಯ ರೈತರ ಬೀಜದಂಗಡಿಯ ಮಾಲೀಕರೊಬ್ಬರು ಬೊಗಳೆ ಬ್ಯುರೋಕ್ಕೆ ರಹಸ್ಯವಾಗಿ ತಿಳಿಸಿದರು.</span></p><p><b style="font-family: "Baloo Tamma 2"; font-size: large; text-align: center;"><u>Follow ಬೊಗಳೆ-ರಗಳೆ On <a href="https://www.facebook.com/Anveshi.net" target="_blank">Facebook</a> and <a href="https://twitter.com/Anveshi" target="_blank">Twitter</a>. </u></b><a href="https://chat.whatsapp.com/LPjTogvb3H1CQvllmdycvC" style="font-family: "Baloo Tamma 2"; font-size: large; text-align: center;" target="_blank"><b>ಮತ್ತಷ್ಟು ಬೊಗಳೆಗಳಿಗಾಗಿ, ವಾಟ್ಸಪ್ ಗ್ರೂಪ್ ಸೇರಿಕೊಳ್ಳಿ.</b></a></p><p><span style="font-family: 'Baloo Tamma 2'; font-size: medium;">ಈ ನಿಟ್ಟಿನಲ್ಲಿ ಸಂಚೋದನೆ ಮುಂದುವರಿಸಿದಾಗ, ಇವೆಲ್ಲವೂ ರೈತರ ಬೀಜಗಳೆಂಬುದು ಪತ್ತೆಯಾದವು. ರೈತರು ಹಗಲು-ರಾತ್ರಿ ಶ್ರಮ ಪಡುತ್ತಿರುವಾಗಲೇ ಕಷ್ಟಪಟ್ಟು ಬೀಜವನ್ನು ಕಾಪಾಡಿಕೊಂಡಿದ್ದರು. ಆದರೆ, ಈಗ ನೋಡಿದರೆ ಈ ಎಲ್ಲ ಬೀಜಗಳು ಉದುರಿಹೋಗಿವೆ. ಇದಕ್ಕೆಲ್ಲ ಕಾರಣ, ನಕಲಿ ಬೀಜ ಮತ್ತು ಗೊಬ್ಬರ ಪೂರೈಕೆದಾರರೆಂಬ ಅಸಲಿ ಕಳ್ಳರು ಎಂಬುದು ತಿಳಿದುಬಂತು.</span></p><p><span style="font-family: 'Baloo Tamma 2'; font-size: medium;">ಈ ನಕಲಿ ಬೀಜಗಳನ್ನು ನೆಟ್ಟು, ಬೆಳೆಸಿ ಫಲ ತೆಗೆದು, ಆ ಫಲಗಳು ಕೊಡುವ ಬೀಜಗಳೆಲ್ಲವೂ ಉದುರಿಹೋಗುವುದು ಒಂದು ಕಡೆಯಾದರೆ, ಮತ್ತೊಂದು ಕಡೆಗೆ, ಕೃಷಿ ಇಲಾಖೆಯ ವಿಚಕ್ಷಣ ಪಡೆಯ ಅಧಿಕಾರಿಗಳು ಈ ಬೀಜಗಳನ್ನು ಹೊಡೆದು ಉರುಳಿಸುತ್ತಿದ್ದರು ಎಂಬುದನ್ನು ಬೊಗಳೆ ಬ್ಯುರೋ ಪತ್ತೆ ಮಾಡಿದೆ. </span></p><p><span style="font-family: 'Baloo Tamma 2'; font-size: medium;">ಬೊಗಳೂರಿನ ಕೃಷಿ ಸಚಿವರು ಇತ್ತೀಚೆಗೆ ಕೃಷಿ ವಿಚಕ್ಷಣಾ ದಳದ ಅಧಿಕಾರಿಗಳೊಂದಿಗೆ ಸಮಾಲೋಚನೆ ನಡೆಸಿದ್ದರು. ಈ ಸಂದರ್ಭದಲ್ಲಿ ನಕಲಿ ಬೀಜ, ಗೊಬ್ಬರ ಮಾರಾಟ ಜಾಲದ ಬುಡವನ್ನೇ ಕತ್ತರಿಸಿ ಎಂಬ ಹೇಳಿಕೆ ನೀಡಿದ್ದೇ ಈ ಎಲ್ಲ ಆವಾಂತರಗಳಿಗೆ ಕಾರಣ ಎಂಬುದನ್ನು ಬೊಗಳೆ ಬ್ಯುರೋ ಸಂಚೋದಿಸಿದೆ. ಇದರ ಬಗ್ಗೆ ಪ್ರತಿಸ್ಫರ್ಧಿ ಪತ್ರಿಕೆಯ <a href="https://www.prajavani.net/karnataka-news/bc-patil-suggested-to-curb-bogus-seeds-in-root-itself-949607.html" target="_blank">ಈ ವರದ್ದಿಯೇ</a> ಕಾರಣ. ನಕಲಿ ಬೀಜದ ಜಾಲದ ಬುಡವನ್ನೇ ಕತ್ತರಿಸಿ ಎಂದು ಕೃಷಿ ಸಚಿವರು ಕರೆ ನೀಡಿದಾಗ, ಕೆಲವು ಅಧಿಕಾರಿಗಳಂತೂ ನಕಲಿ ಬೀಜದ ಜಾಲದ ಬುಡವನ್ನು ಕತ್ತರಿಸುವ ಬದಲಾಗಿ, ಬೀಜದ ಬುಡವನ್ನೇ ಕತ್ತರಿಸಿದ್ದರು!</span></p>Anveshihttp://www.blogger.com/profile/04356401566159202899noreply@blogger.com2tag:blogger.com,1999:blog-25346734.post-67852111522581435602022-04-19T14:47:00.004+05:302022-04-19T14:50:07.091+05:30ಕಲ್ಲು, ಇಟ್ಟಿಗೆ ತೂರಾಟ: ಅಮಾಯಕರನ್ನೇ ಬಂಧಿಸಲು ಆಗ್ರಹ😆<div class="separator" style="clear: both; text-align: center;"><a href="https://blogger.googleusercontent.com/img/b/R29vZ2xl/AVvXsEg39g7sgbJGUKgEBeTvZpTmPZGCvB9ne0unJsZrLzIGY40kUQXZk7AnlZarG71xoLNDed_w6sXu5WRARaiTou9bR7uBPYSvypcRc5mNis3l7iBT-GWcUtG1mXFkMWkER3HzTN2G_0rq7annRBh-4pWQ5hGrpaGZ9WkbJBqDvduQVVVkh6QvUEA/s623/Siddaramaiah-Kumaraswamy-Tweet.jpg" imageanchor="1" style="margin-left: 1em; margin-right: 1em;"><img border="0" data-original-height="623" data-original-width="593" height="640" src="https://blogger.googleusercontent.com/img/b/R29vZ2xl/AVvXsEg39g7sgbJGUKgEBeTvZpTmPZGCvB9ne0unJsZrLzIGY40kUQXZk7AnlZarG71xoLNDed_w6sXu5WRARaiTou9bR7uBPYSvypcRc5mNis3l7iBT-GWcUtG1mXFkMWkER3HzTN2G_0rq7annRBh-4pWQ5hGrpaGZ9WkbJBqDvduQVVVkh6QvUEA/w610-h640/Siddaramaiah-Kumaraswamy-Tweet.jpg" width="610" /></a></div><p style="text-align: center;"><b style="font-family: "Baloo Tamma 2"; font-size: large;">[ಬೊಗಳೂರು ತನಿಖಾ ಬ್ಯುರೋದಿಂದ]</b></p><p><span style="font-family: 'Baloo Tamma 2'; font-size: medium;"><b>ಬೊಗಳೂರು: </b>ದೇಶದಾದ್ಯಂತ ಈಗ ರಾಮನವಮಿ, ಹನುಮಜ್ಜಯಂತಿ ಮುಂತಾದ ಮೆರವಣಿಗೆಗಳ ಮೇಲೆ ಕಲ್ಲು ತೂರಾಟ, ಇಟ್ಟಿಗೆ ತೂರಾಟ ಪ್ರಕರಣಗಳು ಹೆಚ್ಚಾಗುತ್ತಿರುವಂತೆಯೇ, ಪ್ರಕರಣದಲ್ಲಿ ಅಮಾಯಕರನ್ನೇ ಬಂಧಿಸುವಂತೆ ಆಗ್ರಹ ಹೆಚ್ಚಾಗಿದೆ.</span></p><p><span style="font-family: 'Baloo Tamma 2'; font-size: medium;">ಕರುನಾಟಕದ ಮಾಜಿ ಮುಖ್ಯಮಂತ್ರಿಗಳಾದ ಕುಮಾರಸ್ವಾಮಿ ಹಾಗೂ ಸಿದ್ದರಾಮಯ್ಯ ಇಬ್ಬರು ಕೂಡ ಅಮಾಯಕರನ್ನು ಬಂಧಿಸಬಾರದೆಂದು ಖಡಾಖಂಡಿತವಾಗಿ ಮತ್ತು ಅಪರೂಪದ ಏಕತೆಯಿಂದ ಹೇಳಿರುವಾಗ, ಅವರನ್ನೇ ಬಂಧಿಸುವಂತೆ ಆಗ್ರಹ ಯಾಕೆ ಕೇಳಿಬರುತ್ತಿದೆ ಎಂಬುದರ ಕುರಿತು ಅಸತ್ಯಾನ್ವೇಷಣೆಯ ಏಕಸದಸ್ಯ ಬ್ಯುರೋದ ಸರ್ವರೂ ತನಿಖೆಗೆ ಸಿದ್ಧರಾದಾಗ ಸ್ಫೋಟಕ ಅಂಶ ಬಯಲಾಗಿದೆ.</span></p><p><b style="text-align: center;"><u><span style="font-family: 'Baloo Tamma 2'; font-size: medium;">Follow ಬೊಗಳೆ-ರಗಳೆ On <a href="https://www.facebook.com/Anveshi.net" target="_blank">Facebook</a> and <a href="https://twitter.com/Anveshi" target="_blank">Twitter</a></span></u></b></p><p><span style="font-family: 'Baloo Tamma 2'; font-size: medium;">ದೇಶದ ಬೀದಿ ಬೀದಿಗಳಲ್ಲಿ ಇತ್ತೀಚೆಗೆ ಕಲ್ಲುಗಳು ಕಾಲಿಗೆ ಎಡತಾಕುವುದು ಕಡಿಮೆಯಾಗುತ್ತಿದೆ. ನಡೆದು ಹೋಗುವಾಗ ಪಾದಚಾರಿಗಳಿಗೆಲ್ಲ ಈ ಕಲ್ಲುಗಳು ತೀರಾ ಅಡಚಣೆ ಉಂಟು ಮಾಡುತ್ತಿರುವುದರಿಂದ ಅವುಗಳಿಂದ ಜನರಿಗೆ ಯಾವುದೇ ತೊಂದರೆಯಾಗಬಾರದೆಂಬ ಕಾರಣಕ್ಕೆ ಕೆಲವೊಂದು ಆರೋಪಿಗಳು ಕಲ್ಲುಗಳನ್ನು ಸಂಗ್ರಹಿಸಿ, ಶೇಖರಿಸಿಟ್ಟುಕೊಂಡಿದ್ದರು. ಅವುಗಳು ಮುಂದಕ್ಕೆ ತಮ್ಮ ತಲೆ ತಲಾಂತರದ ಪೀಳಿಗೆಗೆ ಮನೆ ಕಟ್ಟುವುದಕ್ಕೆ ಉಪಯೋಗವಾದೀತು ಎಂಬ ದೂರದೃಷ್ಟಿ ತಮ್ಮದು ಎಂದು ಹೆಸರು ಬಹಿರಂಗಪಡಿಸಲು ಇಚ್ಛಿಸದ ಕಲ್ಲುತೂರಾಟಗಾರರೊಬ್ಬರು ಬೊಗಳೆ ಬ್ಯುರೋಗೆ ತಿಳಿಸಿದ್ದಾರೆ.</span></p><p><span style="font-family: 'Baloo Tamma 2'; font-size: medium;">ಮುಂದುವರಿದು ತನಿಖೆ ನಡೆಸಿದಾಗ, ದೇಶದಲ್ಲಿ ಅಪ್ರಾಮಾಣಿಕರು, ಅಸತ್ಯ ನುಡಿಯುವವರು, ಅಹಿಂಸಾ ಪ್ರವರ್ತಕರು, ಅಶಾಂತಿಕೋರರು, ಅಪ್ರಾಪ್ತ ವಯಸ್ಕರು.... ಹೀಗೆ ಇವರ ಸಾಲಿನಲ್ಲೇ 'ಅ'ದಿಂದ ಆರಂಭವಾಗುವ ಹೆಸರಿನವರಾದ 'ಅ'ಮಾಯಕರು ಇದ್ದಾರೆ. ಕಲ್ಲು ತೂರಾಟ ನಡೆಸಿ ಮಾಯಕ (ಮಾಯ) ಆಗುವುದೇ ಅವರ ಜಾಯಮಾನ. ಹೀಗಾಗಿ ಅಮಾಯಕರನ್ನೂ ಬಂಧಿಸಬೇಕೆಂದು ಬೊಗಳೂರು ಅಮಾಯಕರ ಸಂಘದ ಅಧ್ಯಕ್ಷ ಮಾಯಕ್ ಕುಮಾರ್ ಬೊಗಳೆ ಬ್ಯುರೋಗೆ ತಿಳಿಸಿದ್ದಾರೆ.</span></p><p><span style="font-family: 'Baloo Tamma 2'; font-size: medium;">ಈ ಮಧ್ಯೆ, ಜಾರಕಾರಣಿಗಳನ್ನೇ ಈ ಕುರಿತು ಮಾತನಾಡಿಸಿದಾಗ ಮತ್ತೊಂದು ಆಯಾಮದ ಮಾಹಿತಿಯೂ ದೊರೆಯಿತು. ಅಮಾಯಕರನ್ನೇ ಬಂಧಿಸಬೇಕು ಎಂದು ಅವರು ಆಗ್ರಹಿಸುವುದಕ್ಕೆ ಕಾರಣ ತಿಳಿದುಬಂತು. ಒಂದು ಕುಮಾರಸ್ವಾಮಿ ಬಣದವರು ಮತ್ತು ಸಿದ್ದರಾಮಯ್ಯ ಬಣದವರು ಅಮಾಯಕರನ್ನು ಬಂಧಿಸಲೇಬಾರದು ಎಂದಿದ್ದಾರೆ. ಕುಮಾರಸ್ವಾಮಿ 'ಬಂಧಿಸಬಾರದು' ಅಂತ ಟ್ವೀಟ್ ಮಾಡಿದ ತಕ್ಷಣ ಎದುರಾಳಿ ಬಣದವರು, ಅದೇ ರೀತಿ ಸಿದ್ದರಾಮಯ್ಯ ಕೂಡ 'ಬಂಧಿಸಬಾರದು' ಅಂತ ಟ್ವೀಟ್ ಮಾಡಿದ ತಕ್ಷಣ ಅವರ ಎದುರಾಳಿ ಬಣದವರು 'ಬಂಧಿಸಬೇಕು' ಅಂತನೇ ಆಗ್ರಹಿಸತೊಡಗಿದರು. ಒಟ್ಟಿನಲ್ಲಿ ಅವರಿಬ್ಬರು ಹೇಳಿದ್ದನ್ನು ನಿಜ ಮಾಡಿಸಬಾರದು ಎಂಬುದು ಮೂರನೆಯವರಾದ ಮತ್ತು ಅವರೆಲ್ಲರ ಹಿತಶತ್ರುಗಳಾದ ನಮ್ಮೆಲ್ಲರ ಆಗ್ರಹ. ಅವರಿಬ್ಬರನ್ನೂ ರಾಜಕೀಯವಾಗಿ ವಿರೋಧಿಸುವ ನಾವು ಇದಕ್ಕಾಗಿಯೇ 'ಅಮಾಯಕರನ್ನೇ ಬಂಧಿಸಬೇಕು' ಅಂತ ಆಗ್ರಹಿಸುತ್ತಿರುವುದಾಗಿ ಪ್ರತ್ಯುತ್ಪನ್ನ ಪಕ್ಷದ ಮಂದಿ ಗುಟ್ಟಿನಲ್ಲಿ ಹೇಳಿದ್ದಾರೆ. ಒಟ್ಟಿನಲ್ಲಿ ಅವರು ಇವರ ಮೇಲೆ, ಇವರು ಅವರ ಮೇಲೆ ಕೆಸರು ಎರಚುವ ಪ್ರಕ್ರಿಯೆಗಾಗಿ ಅಮಾಯಕರನ್ನೇ ಬಂಧಿಸಬೇಕು, ಮತ್ತು ಅವರನ್ನು ಬಂಧಿಸಬಾರದು ಎಂಬ ವಿವಾದ ಭುಗಿಲೆದ್ದಿದೆ ಎಂಬುದನ್ನು ಬೊಗಳೆ ಬ್ಯುರೋ ತನಿಖೆಯ ವೇಳೆ ಕಂಡುಕೊಂಡಿದೆ.</span></p>Anveshihttp://www.blogger.com/profile/04356401566159202899noreply@blogger.com2tag:blogger.com,1999:blog-25346734.post-48753949581040915092022-01-20T16:23:00.000+05:302022-01-20T16:23:01.831+05:30ಗೃಹಸಚಿವರ ಹೇಳಿಕೆಯಿಂದ ದಿಢೀರ್ ಅಪರಾಧ ಕುಸಿತ! ಕಾರಣ ಗೊತ್ತೇ?<p><span style="font-family: 'Baloo Tamma 2'; font-size: medium;"></span></p><div class="separator" style="clear: both; text-align: center;"><span style="font-family: 'Baloo Tamma 2'; font-size: medium;"><a href="https://blogger.googleusercontent.com/img/a/AVvXsEgOPVClZHzGAtYPBPs6vH14vzQHwszL0Qhnbn_bx5aTd3PJhDlJZXam_5nvwm1SYUEv2j0RXbslt9SJ3xmLhPSEoh9O-kYoxmd5XcBfyYBX3yhML3jrVAVrn3zDq_gJRboouPQs1EYtF1pU6Bcl60qeogmAmVlq7DajwhCgVaPI-FYJyNZeU5Y=s950" imageanchor="1" style="margin-left: 1em; margin-right: 1em;"><img border="0" data-original-height="532" data-original-width="950" height="358" src="https://blogger.googleusercontent.com/img/a/AVvXsEgOPVClZHzGAtYPBPs6vH14vzQHwszL0Qhnbn_bx5aTd3PJhDlJZXam_5nvwm1SYUEv2j0RXbslt9SJ3xmLhPSEoh9O-kYoxmd5XcBfyYBX3yhML3jrVAVrn3zDq_gJRboouPQs1EYtF1pU6Bcl60qeogmAmVlq7DajwhCgVaPI-FYJyNZeU5Y=w640-h358" width="640" /></a></span></div><b style="font-family: "Baloo Tamma 2"; font-size: large;"><div style="text-align: center;"><b><br /></b></div><div style="text-align: center;"><b>{ಬೊಗಳೂರು ಅಪರಾಧ ಬ್ಯುರೋದಿಂದ]</b></div></b><p></p><p><span style="font-family: 'Baloo Tamma 2'; font-size: medium;"><b>ಬೊಗಳೂರು:</b> ಬೊಗಳೂರಿನಾದ್ಯಂತ ಇತ್ತೀಚೆಗೆ ಅಪರಾಧ ಪ್ರಕರಣಗಳು ದಿಢೀರನೇ ಕುಸಿತ ಕಂಡಿದೆ.</span></p><p><span style="font-family: "Baloo Tamma 2"; font-size: large;">ಯಾರು ಕೂಡ ಕಳ್ಳರು, ಸುಳ್ಳರು, ಅತ್ಯಾಚಾರಿಗಳನ್ನು ಪೊಲೀಸರು ಬಂಧಿಸುತ್ತಲೂ ಇಲ್ಲ. ಯಾವುದೇ ಅಪರಾಧ ಕೇಸುಗಳನ್ನು ದಾಖಲಿಸುತ್ತಲೂ ಇಲ್ಲ. ಹೀಗಾಗಿ, ನರೇಂದ್ರ ಮೋದಿ ಆಡಳಿತದಲ್ಲಿ ದೇಶವು ರಾಮರಾಜ್ಯದತ್ತ ಸಾಗಿದೆ ಎಂದು ಕೆಲವು ಮಂದಿ ಹೇಳಿಕೊಂಡು ತಿರುಗಾಡುತ್ತಿದ್ದರು.</span></p><p><span style="font-family: "Baloo Tamma 2"; font-size: large;">ಇದರ ಹಿಂದಿನ ಸತ್ಯಾಂಶವೇನೆಂದು ಹುಡುಕಿ ಹೊರಟ ಬೊಗಳೂರು ಏಕಸದಸ್ಯ ಬ್ಯುರೋದ ಸಮಸ್ತ ಸಿಬ್ಬಂದಿಗಳ ತಂಡಕ್ಕೆ ಅದ್ಭುತವಾದ ವಿಷಯವೊಂದು ಬಾರ್ಕಿಂಗ್ ಮಾಡುವುದಕ್ಕೆ ಎಲ್ಲ ರೀತಿಯ ಅರ್ಹತೆಯಿದೆ ಎಂದು ಮನದಟ್ಟಾಯಿತು.</span></p><p><span style="font-family: "Baloo Tamma 2"; font-size: large;">ಇದಕ್ಕಾಗಿ ಅನ್ವೇಷಿ ನೇತೃತ್ವದ ತಂಡವು ಅನ್ವೇಷಣೆಗೆ ತೊಡಗಿತು. ಬೊಗಳೂರಿನಲ್ಲಿ ಅತ್ಯಂತ "ಹುಲುಸಾಗಿ" ಕೆಲಸ ಕಾರ್ಯಗಳು ನಡೆಯುತ್ತಿದ್ದ ಹುಲುಸೂರು ಠಾಣೆ ಹಾಗೂ ಕುಪ್ಪನ್ ಪಾರ್ಕ್ ಠಾಣೆಗಳಲ್ಲಿ ರಹಸ್ಯ ಕಾರ್ಯಾಚರಣೆ ನಡೆಸಿತು.</span></p><p><span style="font-family: "Baloo Tamma 2"; font-size: large;">ಜನರು ಠಾಣೆಗೆ ಬರುತ್ತಿದ್ದರು. ಮನೆಯಲ್ಲಿ ದರೋಡೆಯಾಗಿದೆ, ಅತ್ಯಾಚಾರವಾಗಿದೆ ಎಂದು ಸಾಕಷ್ಟು ಮಂದಿ ದೂರು ನೀಡಲು ಬರುತ್ತಿದ್ದರು. ಮಾಸ್ಕ್ ಕದ್ದಿದ್ದಾರೆ ಎಂದು ದೂರು ನೀಡಲು ಬಂದಿದ್ದವರೂ ಅಲ್ಲಿದ್ದರು. ಮತ್ತೆ ಕೆಲವರು, ತಮ್ಮ ಹೃದಯವನ್ನು ಯಾರೋ ಕದ್ದಿದ್ದಾರೆ ಎಂದು ಕೂಡ ದೂರು ನೀಡಲು ತಹತಹಿಸುತ್ತಿದ್ದರು.</span></p><p style="text-align: center;"><span style="font-family: verdana; font-size: medium;"><b><u>Follow ಬೊಗಳೆ-ರಗಳೆ On <a href="https://www.facebook.com/Anveshi.net" target="_blank">Facebook</a> and <a href="https://twitter.com/Anveshi" target="_blank">Twitter</a></u></b></span></p><p><span style="font-family: 'Baloo Tamma 2'; font-size: medium;">ಆದರೆ, ಅಲ್ಲಿನ ಪೊಲೀಸರು ತಲೆಗೆ ಏನನ್ನೂ ಹಚ್ಚಿಕೊಳ್ಳದೆ ಸಾರಾಸಗಟಾಗಿ ವಿರಾಮದಲ್ಲಿದ್ದರು. ಅವರು ಯಾರ ದೂರನ್ನೂ ದಾಖಲಿಸಿಕೊಳ್ಳುತ್ತಿರಲಿಲ್ಲ. ದೂರು ದಾಖಲಾದರಲ್ಲವೇ ಅಪರಾಧ ಪ್ರಕರಣ ನಡೆದಿದೆ ಎಂಬುದು ಜಗಜ್ಜಾಹೀರಾಗುವುದು? ದೂರನ್ನೇ ಬರೆದುಕೊಳ್ಳದಿದ್ದರಾಯಿತು ಎಂಬುದು ಅವರ ವರ್ತನೆಯಿಂದ ತಿಳಿದುಬಂದ ಅಂಶ.</span></p><p><span style="font-family: "Baloo Tamma 2"; font-size: large;">ಈ ಬಗ್ಗೆ, ಆ ರಕ್ಷಕ ನಿ ರೀಕ್ಷಕರೊಬ್ಬರನ್ನು ಕಣ್ಸನ್ನೆ, ಕೈಸನ್ನೆ ಮಾಡಿ ಪಕ್ಕಕ್ಕೆ ಕರೆದು ವಿಚಾರಿಸಲಾಯಿತು. ಆತನಂತೂ ಉರಿದು ಬಿದ್ದು, ನಮ್ಮ ಪ್ರತಿಸ್ಫರ್ಧಿ ಪತ್ರಿಕೆಯ ತುಣುಕೊಂದನ್ನು ನೀಡಿ, ಮತ್ತೆ ನಿದ್ದೆ ಮಾಡಲು ತೆರಳಿದ.</span></p><p><span style="font-family: "Baloo Tamma 2"; font-size: large;">ಅದನ್ನು ನೋಡಿದಾಗ ವಿಷಯ ಮನದಟ್ಟಾಯಿತು. ನಮ್ಮ ಏಕೈಕ ಓದುಗ ಸಂಖ್ಯೆಯಿರುವ ಮಾಧ್ಯಮಕ್ಕೆ ಕೋಟ್ಯಂತರ ಓದುಗರಿರುವ ಪತ್ರಿಕೆಯಲ್ಲಿ ಈ ವರದಿ ಪ್ರಕಟವಾಗಿರುವುದೇ ಈ ಎಲ್ಲ ಅವಾಂತರಕ್ಕೆ ಕಾರಣವಂತೆ. ಅಪರಾಧ ಪ್ರಕರಣದಲ್ಲಿ ಭಾಗಿಯಾಗುವ ಪೊಲೀಸ್ ಸಿಬ್ಬಂದಿಗಳ ವಿರುದ್ಧ ಕಾನೂನು ಪ್ರಕಾರ ಕ್ರಮ ಕೈಗೊಳ್ಳಲಾಗುತ್ತದೆ ಎಂದು <a href="https://www.prajavani.net/karnataka-news/will-punsih-police-also-if-they-are-involved-in-crime-home-minister-araga-jnanendra-903364.html" target="_blank">ಕರ್ನಾಟಕ ಗೃಹ ಸಚಿವ ಆರಗ ಜ್ಞಾನೇಂದ್ರ ಇಲ್ಲಿ </a>ಹೇಳಿದ್ದರು.</span></p><p><span style="font-family: "Baloo Tamma 2"; font-size: large;">ಅಪರಾಧ ಕೃತ್ಯಗಳನ್ನು ತಾವೂ ಕೈಗೆತ್ತಿಕೊಂಡು, ಅದರ ಪ್ರಕ್ರಿಯೆಯಲ್ಲಿ ಭಾಗಿಯಾದರೆ ನಮ್ಮ ಮೇಲೆ ಕ್ರಮ ಕೈಗೊಳ್ಳುತ್ತಾರೆ ಎಂಬ ಆತಂಕ ಮತ್ತು ಸಂತೋಷವೇ ಎಲ್ಲದಕ್ಕೂ ಕಾರಣ ಎಂದು ಅನ್ವೇಷಿ ಬ್ಯುರೋ ಪತ್ತೆ ಮಾಡಿದೆ. ಹೀಗಾಗಿ ಕೇಸು ಮುಟ್ಟದೇ ಇದ್ದರಾಯಿತಲ್ಲ, ಅದರಲ್ಲಿ ಭಾಗಿಯಾದ ಆರೋಪ ತಮಗೂ ತಗುಲುವುದಿಲ್ಲ. ಅಪರಾಧವೂ ಇಲ್ಲದಂತಾಗುತ್ತದೆ. ರಾಮ ರಾಜ್ಯ!</span></p>Anveshihttp://www.blogger.com/profile/04356401566159202899noreply@blogger.com2tag:blogger.com,1999:blog-25346734.post-6596545134330927552020-09-01T16:31:00.005+05:302020-09-01T16:31:38.765+05:30ಪ್ರಣಬ್ ನಿಧನಕ್ಕೂ ರಜೆ ಇಲ್ಲ: ಅಂಗನವಾಡಿ ವಿದ್ಯಾರ್ಥಿಗಳ ಪ್ರತಿಭಟನೆ<div class="separator" style="clear: both; text-align: center;"><img border="0" data-original-height="422" data-original-width="750" src="https://blogger.googleusercontent.com/img/b/R29vZ2xl/AVvXsEhGR6KRzQEsVYTxvqryLnBCSKMtqBhIauk00I3bctaft_KE5586UPaxFnqhVNJUVvjHp200KBcJZDiv46D52NA35h6k4NgNcKTvGkKfom3Equt_h4T0hb8ACRiHbMbXeKt-0hCHeA/s640/Pranab+Mukherjee.jpg" width="640" /></div><br /><p style="text-align: center;"><b>[ಬೊಗಳೂರು ಶೈ-ಕ್ಷಣಿಕ ಬ್ಯುರೋದಿಂದ]</b></p><p><b>ಬೊಗಳೂರು: </b>ದೇಶ ಕಂಡ ಅಪ್ರತಿಮ ಮುತ್ಸದ್ಧಿ, ರಾಜಕಾರಣಿ ಹಾಗೂ ಮಾಜಿ ರಾಷ್ಟ್ರಪತಿ, 'ಭಾರತ ರತ್ನ' ಪ್ರಣಬ್ ಮುಖರ್ಜಿ ಅವರ ನಿಧನ ತುಂಬಲಾರದ ನಷ್ಟ. ಆದರೆ, ಈ ಸಂದರ್ಭದಲ್ಲಿ ರಜೆ ಕೊಡದಿರುವುದಕ್ಕೆ ಅಖಿಲ ಭಾರತ ಅಂಗನವಾಡಿ ಬಾಲಕರುಗಳ ಸಂಘ, ಅಖಿಲ ಭಾರತ ಹಿರಿ ಕಿರಿಯ ವಿದ್ಯಾರ್ಥಿಗಳ ಒಕ್ಕೂಟಗಳು ಆಕ್ರೋಶ ವ್ಯಕ್ತಪಡಿಸಿವೆ.</p><p>ಕೊರೊನಾ ಕಾಲದಲ್ಲಿ ಲಾಕ್ಡೌನ್ನಿಂದಾಗಿ ಮನೆಯಲ್ಲೇ ಇದ್ದೂ ಇದ್ದೂ ಬೋರಾಗಿದೆ. ಈ ಸಂದರ್ಭದಲ್ಲಾದರೂ ರಜೆ ಘೋಷಿಸಬಹುದಿತ್ತು ಎಂದು ಅಂಗನವಾಡಿ ವಿದ್ಯಾರ್ಥಿಗಳ ರಾಷ್ಟ್ರೀಯ ಅಧ್ಯಕ್ಷರಾಗಿರುವ ವಾರದರಜೆ ಕುಮಾರ್ ಅವರು ಕಿಡಿ ಕಾರಿದ್ದಾರೆ.</p><p>ಬೊಗಳೂರಿನ ಏಕಸದಸ್ಯ ಬ್ಯುರೋದ ಸಮಸ್ತ ಸದಸ್ಯರೆದುರು ಆನ್ಲೈನ್ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದ ಅಧ್ಯಕ್ಷರು, ಶಾಲೆಗೆ ಹೋಗುತ್ತಿರುವ ಸಂದರ್ಭದಲ್ಲಾದರೂ ರಜೆ ಇಲ್ಲ. ಈಗ ಮನೆಯಲ್ಲಾದರೂ ರಜೆ ನೀಡಬೇಕಿತ್ತು ಎಂದು, ಅಂಗನವಾಡಿ ವಿದ್ಯಾರ್ಥಿಗಳು ಅನುಭವಿಸುತ್ತಿರುವ ಪಡಿಪಾಟಲುಗಳನ್ನು ಮುಂದಿಟ್ಟಿದ್ದಾರೆ.</p><p>ಮೂರೂ ಹೊತ್ತು ಸರಿಯಾದ ಸಮಯಕ್ಕೇ ಊಟ ಮಾಡಬೇಕಾಗುತ್ತದೆ, ಶಾಲೆಯಲ್ಲಿರುವಂತೆ ಹಗಲು ನಿದ್ದೆ ಮಾಡಲು ಅವಕಾಶ ನೀಡುವುದಿಲ್ಲ, ಅಂಗನವಾಡಿಯಲ್ಲಿ ದೊರೆಯುವ ಸಜ್ಜಿಗೆಯೂ ಸಿಗುತ್ತಿಲ್ಲ. ಅಕ್ಕ ಪಕ್ಕದವರ ಚಡ್ಡಿ ಅಥವಾ ಲಂಗ ಎಳೆಯುವ ಅವಕಾಶವೂ ಇಲ್ಲ. ಅಭ್ಯಾಸ ಬಲದಲ್ಲಿ ಏನಾದರೂ ಅಣ್ಣನ ಚಡ್ಡಿ ಎಳೆದರೆ, ಆನ್ಲೈನ್ ತರಗತಿಯಲ್ಲಿ ಮಗ್ನರಾಗಿರುವ ಆತ ರಪ್ಪನೇ ಬಾರಿಸಿಬಿಡುತ್ತಾನೆ ಎಂದು ಸಮಸ್ಯೆಗಳ ಪಟ್ಟಿ ಮಾಡಿದ್ದಾರೆ.</p><p>ಇಡೀ ದಿನ ಅಣ್ಣ, ಅಕ್ಕ ಎಲ್ಲರೂ ಮೊಬೈಲ್ ಫೋನ್ ಅಥವಾ ಕಂಪ್ಯೂಟರಿನಲ್ಲಿ ಮುಳುಗಿರುತ್ತಾರೆ. ನಮಗಂತೂ ಗೇಮ್ ಆಡುವುದಕ್ಕೆ ಅವಕಾಶವೇ ನೀಡುವುದಿಲ್ಲ. ಅಪ್ಪ ಅಮ್ಮಂದಿರುವ ಕಣ್ಣೀರ ಧಾರಾವಾಹಿಗಳಲ್ಲಿ ಪುನಃ ಮಗ್ನರಾಗಿಬಿಡುತ್ತಾರೆ. ಇಂಥ ಸಂದರ್ಭದಲ್ಲಿ ನಾವೇನಾದರೂ ಕೇಳಿದರೆ ಸಿಡಿದು ಬೀಳುತ್ತಾರೆ. ಹೀಗಾಗಿ ಮನರಂಜನೆಯೇ ಇಲ್ಲವಾಗಿಬಿಟ್ಟಿದೆ ಎಂದು ಅಂಗನವಾಡಿ ವಿದ್ಯಾರ್ಥಿಗಳ ಸಂಘದ ರಾಜ್ಯಾಧ್ಯಕ್ಷ ದಿನಾ ರಜಾ ಕುಮಾರ್ ಹೇಳಿದ್ದಾರೆ.</p><p>ಕೋವಿಡ್ ದಿನಗಳಾದುದರಿಂದ ಶಾಲೆ ಹೇಗೂ ಇಲ್ಲ. ಮನೆಗಾದರೂ ರಜೆ ಘೋಷಿಸಬೇಕಿತ್ತಲ್ಲಾ? ಇದು ಶಿಕ್ಷಣ ಇಲಾಖೆಯ ತಪ್ಪಲ್ಲವೇ ಎಂದು ಅವರು ಕೇಳಿದ್ದಾರೆ. ನಾವು ಶಾಲೆಗೆ ಹೋಗಿ ಆದರೂ ಪ್ರಣಬ್ದಾ ಅವರ ನಿಧನದಿಂದಾಗಿ ಮನಸ್ಸಿನ ಭಾರ ಕಡಿಮೆ ಮಾಡಿಕೊಳ್ಳಲು ಈ ರಜೆಯನ್ನು ಬಳಸಿಕೊಳ್ಳುತ್ತಿದ್ದೆವು ಎಂದು ಅವರು ಯೋಜನೆಯನ್ನು ಮುಂದಿಟ್ಟಿದ್ದಾರೆ.</p><p>ಈ ಕುರಿತು ಮಕ್ಕಳ ಬಗ್ಗೆ ಅತ್ಯುತ್ತಮ ಕಾಳಜಿ ವಹಿಸುತ್ತಿರುವ ಶಿಕ್ಷಣ ಸಚಿವ ಸುರೇಶ್ ಕುಮಾರ್ ಅವರು ತಮ್ಮ ಶಿಕ್ಷಣ ಇಲಾಖೆಯಿಂದ ತಕ್ಷಣ ಆದೇಶವೊಂದನ್ನು ಹೊರಡಿಸಿ, ಪುಟ್ಟ ಮಕ್ಕಳ ರಕ್ಷಣೆಗೆ ಮುಂದಾಗಬೇಕೆಂದು ಈ ಪುಟ್ ಪುಟಾಣಿಗಳು ಸಚಿವರಿಗೆ ಬರೆದಿರುವ ಪತ್ರದಲ್ಲಿ ಮನವಿ ಮಾಡಿಕೊಂಡಿದ್ದಾರೆ.</p>Anveshihttp://www.blogger.com/profile/04356401566159202899noreply@blogger.com2tag:blogger.com,1999:blog-25346734.post-23226519335368846892020-08-18T10:49:00.001+05:302020-08-18T10:49:14.547+05:30ಬೊಗಳೂರು ಗಲಭೆಗೆ ಕಾರಣ ಪತ್ತೆ: ಹೊತ್ತು ಮೀರಿದಾಗ ಕೊತ್ತಂಬರಿ ಸೊಪ್ಪು<p style="text-align: center;"></p><div class="separator" style="clear: both; text-align: center;"><img border="0" data-original-height="1131" data-original-width="1073" height="640" src="https://blogger.googleusercontent.com/img/b/R29vZ2xl/AVvXsEjn1C6nneglnUB3bTyOWOotFUhvpXC6gMdE_jlFjA6uMouaMQfaE2mA7Zit_9x2HQVTpIvDWg3CIpi0ALyeLbu62umR21kUsXXVPo49VgffOVsCs6qs1sR91ZaGIi5KfatRZ5ap_g/s640/Kotimiri+Soppu.jpg" /></div><b><br /></b><p></p><p style="text-align: center;"><b>[ಬೊಗಳೆ ಮಧ್ಯರಾತ್ರಿ ಬ್ಯುರೋದಿಂದ]</b></p><p>ಬೊಗಳೂರು: ದೇಶದಾದ್ಯಂತ ಭಾರಿ ಸದ್ದು ಮಾಡಿದ್ದ ಬೊಗಳೂರು ಗಲಭೆ ಪ್ರಕರಣದ ಮೂಲ ಕಾರಣ ಪತ್ತೆಯಾಗಿದ್ದು, ಇದೊಂದು ಭಾರಿ ಸ್ಫೋಟಕ ಸುದ್ದಿ ಎಂದು ಏಕಸದಸ್ಯ ಬೊಗಳೂರು ಬ್ಯುರೋದ ಸಮಸ್ತ ಸಿಬ್ಬಂದಿಗಳು<a href="https://twitter.com/search?q=%23%E0%B2%95%E0%B3%8A%E0%B2%A4%E0%B3%8D%E0%B2%A4%E0%B2%82%E0%B2%AC%E0%B2%B0%E0%B2%BF_%E0%B2%B0%E0%B2%BE%E0%B2%A4%E0%B3%8D%E0%B2%B0%E0%B2%BF_%E0%B3%A7%E0%B2%95%E0%B3%8D%E0%B2%95%E0%B3%86&src=typeahead_click" target="_blank"> ಟ್ವಿಟರ್, ಫೇಸ್ಬುಕ್ಗಳಲ್ಲಿ ಸಾರಿ ಸಾರಿ</a> ಹೇಳಲಾರಂಭಿಸಿದ್ದಾರೆ.</p><p>ಇತ್ತೀಚೆಗೆ ಬೊಗಳೂರು ಗಲಭೆ, ದೊಂಬಿ ಸುದ್ದಿಗಳನ್ನು ಕನ್ನಡದ ಟಿವಿ ವಾಹಿನಿಗಳು ಭಾರಿ ಸ್ಫೋಟಕ, ಸಂಚು, ಭಯಾನಕ, ಆತಂಕಕಾರಿ ಎಂಬಿತ್ಯಾದಿ ಪದಗಳಿಂದ ವರ್ಣಿಸುವುದರ ಮಧ್ಯೆ, ಅವರ ವರದಿಯಿಂದಲೇ ಸ್ಫೋಟಕ ಸುದ್ದಿಯೊಂದು ಬೊಗಳೆ ಬ್ಯುರೋಗೆ ಗೊತ್ತಾಗಿ, ಇಂಟರ್ನೆಟ್ ಕೂಡ ಸ್ಫೋಟಗೊಂಡಿದೆ.</p><p>ಎಲ್ಲದಕ್ಕೂ ಕಾರಣ ಒಂದು ಕಟ್ಟು ಕೊತಿಮಿರಿ ಸೊಪ್ಪು ಎಂಬ ಸ್ಫೋಟಕ ಸುದ್ದಿಯನ್ನು ಕ್ಯಾಮೆರಾ ಎದುರು ಕೂಲ್ ಆಗಿ ಹೇಳಿರುವ ಅಮಾಯಕ ಮಹಿಳೆಯಿಂದ ಕೇಜೀ ಹಳ್ಳಿ ಡೀಜೇ ಹಳ್ಳಿಗಳ ಗಲಭೆಗೆ ಹೊಸ ತಿರುವು ಸಿಕ್ಕಿದೆ.</p><p>ಅಣ್ಣ ಮಧ್ಯರಾತ್ರಿ 1 ಗಂಟೆಗೆ ಕೊತಿಮಿರಿ ತರಕ್ಕೆ ಹೋಗಿದ್ದು, ಆತನನ್ನು ಅರೆಸ್ಟ್ ಮಾಡಲಾಗಿದೆ ಎಂದು ಆಕೆ ಹೇಳಿದ್ದಳು. ಈ ಸುದ್ದಿ 'ಸ್ಫೋಟ' ಆಗುತ್ತಿರುವಂತೆಯೇ, ಕೊತಿಮಿರಿ ಏನೆಂಬುದರ ಬಗ್ಗೆ ಸಾಕಷ್ಟು ಸಂಚೋದನೆಗಳು ಅಂತರಜಾಲದಲ್ಲಿ ನಡೆಯಲಾರಂಭಿಸಿದವು.</p><p>ಬಹುಶಃ ತಾವು ಸಾಕಿದ್ದ ಕೋತಿ ಮರಿಯನ್ನು ಆತ ಮಧ್ಯರಾತ್ರಿ ಹುಡುಕಲು ಹೋಗಿರಬೇಕು, ಇದು ಬಾಯಿ ತಪ್ಪಿ ಕೊತಿಮಿರಿ ಅಂತ ಆಕೆ ಗಡಿಬಿಡಿಯಿಂದ ಹೇಳಿರಬಹುದು ಎಂಬುದು ಒಂದು ವಾದವಾದರೆ, ಶಾಸಕರ ಮನೆಯಲ್ಲಿ ಕೊತ್ತಂಬರಿ ಸೊಪ್ಪಿನ ಕಟ್ಟು ಹುಡುಕಲು ಹೋದವರು, ಫ್ರಿಜ್ನಲ್ಲೂ ಹುಡುಕಾಡಿ, ಸಿಗದೆ ಹತಾಶರಾಗಿ ಬೆಂಕಿ ಹಚ್ಚಿ ಬಂದಿರಬಹುದು ಎಂಬುದು ಮತ್ತೊಂದು ವಾದ.</p><p>ಅದು ಕೊತ್ತುಮಿರಿ ಸೊಪ್ಪು ಅಲ್ಲ, ಬಹುಶಃ ಹೊತ್ತು ಮೀರಿ ಸೊಪ್ಪು ತರಲು ಹೋಗಿದ್ದಾನೆ ಎಂದು ಆಕೆ ಹೇಳಿರುವ ಸಾಧ್ಯತೆಗಳಿವೆ ಎಂದೂ ಪೊಲೀಸರು ತರ್ಕಿಸಿದ್ದಾರೆ.</p><p>ಇದರ ನಡುವೆಯೇ, ದಿಢೀರನೇ ಎಚ್ಚೆತ್ತುಕೊಂಡಿರುವ ಕಾಗೆ ಹಾರಿಸುವ ದ್ರೋಣ್ ಪ್ರತಾಪ್, ಒಂದು ಮಾತ್ ನನ್ನಲ್ಲಿ ಹೇಳಿದ್ರೆ, ಒಂದು ಗಂಟೆಯಲ್ಲೇ ಕೊತ್ತಂಬರಿ ಸೊಪ್ಪು ತರಿಸೋ ದ್ರೋಣ್ ವ್ಯವಸ್ಥೆ ಮಾಡ್ತಿದ್ದೆ ಎಂದು ಪ್ರತಿಕ್ರಿಯಿಸಿದ್ದಾರೆ. ಆದರೆ, ರಾತ್ರಿ ಒಂದು ಗಂಟೆಯೋ ಅಥವಾ ಒಂದು ಗಂಟೆಯೊಳಗೋ ಎಂಬುದನ್ನು ಅವರು ಸ್ಪಷ್ಟಪಡಿಸಿಲ್ಲ.</p><p>ಈ ಅಮಾಯಕನೊಬ್ಬ ಮಧ್ಯರಾತ್ರಿ ಕೊತ್ತಂಬರಿ ಸೊಪ್ಪನ್ನೇ ತರೋದಿಕ್ಕೆ ಹೋಗಿದ್ದು, ಆತ ಸಿಗದೆ ಹತಾಶನಾಗಿ ಮರಳುತ್ತಿರುವಾಗ, ಆತನ ಎಲ್ಲ ಸ್ನೇಹಿತರೂ ಸೇರಿಕೊಂಡು, ಮಚ್ಚು, ಲಾಂಗ್, ಸ್ಟೀಲ್ ರಾಡ್, ಬೆಂಕಿ ಇತ್ಯಾದಿ ಎಲ್ಲವನ್ನೂ ಹಿಡಿದುಕೊಂಡು, ಕೊತ್ತಂಬರಿ ಸೊಪ್ಪು ಕಡಿಯಲು ಹೊರಟಿದ್ದರು ಎಂಬ ಅಂಶವೂ ಬೊಗಳೆ ತನಿಖೆಯ ವೇಳೆ ಬಯಲಾಗಿದೆ.</p><p>ತತ್ಪರಿಣಾಮವಾಗಿ, ಕೊತ್ತಂಬರಿ ಸೊಪ್ಪು ಮಧ್ಯರಾತ್ರಿ ಸ್ಫೋಟಗೊಂಡ ಬಳಿಕ, ಬೊಗಳೂರಿನ ಬೀದಿ ಬೀದಿಗಳಲ್ಲಿ ಗಾಡಿಯಲ್ಲಿ ತರಕಾರಿ ಮಾರುವವರು ಮರುದಿನ ಬೆಳಿಗ್ಗೆ ಯಾರ ಬಾಯಲ್ಲೂ ಕೊತ್ತಮರಿ ಸೊಪ್ಪು ಎಂಬ ಉದ್ಗಾರವೇ ಇಲ್ಲದಿರುವುದು ಅಚ್ಚರಿ ಮೂಡಿಸಿದೆ. ಇದಕ್ಕೆ ಪ್ರಧಾನ ಕಾರಣ, ಹಿಂದಿನ ದಿನವೇ ಕೊತ್ತಂಬರಿ ಸೊಪ್ಪಿಗೆ ಡಿಮ್ಯಾಂಡ್ ಜಾಸ್ತಿಯಾಗಿ, ರೇಟ್ ಕೂಡ ಹೆಚ್ಚಾಗಿದ್ದಷ್ಟೇ ಅಲ್ಲದೆ, ಮಾರಾಟಕ್ಕೂ ಸಿಗುತ್ತಿಲ್ಲ ಎಂದು ತರಕಾರಿ ವ್ಯಾಪಾರಿಗಳು ಹೇಳಿದ್ದಾರೆ.</p><p>ಕೇಂದ್ರ ಸರ್ಕಾರವು ತಕ್ಷಣವೇ ಮಧ್ಯಪ್ರವೇಶಿಸಿ, ಮಧ್ಯರಾತ್ರಿ ಕೊತ್ತಂಬರಿ ಸೊಪ್ಪನ್ನು ವಿದೇಶದಿಂದ ಆಮದು ಮಾಡಿಕೊಂಡು, ಬೆಲೆ ತಗ್ಗಿಸಲು ಮುಂದಾಗಬೇಕು ಎಂದು ಕೊತ್ತಂಬರಿ ಸೊಪ್ಪು ಮಾರಾಟಗಾರರ ಸಂಘ ಆಗ್ರಹಿಸಿದೆ.</p><p>ಈ ನಡುವೆ, ತನಗೆ ಇಬ್ಬರು ಚಿಕ್ ಮಕ್ಕಳಿದ್ದು, ಒಂದು ಏಳು ತಿಂಗಳ ಮಗು, ಮತ್ತೊಂದು ಮೂರು ತಿಂಗಳ ಕಂದ ಅಂತ ಸ್ಫೋಟಕ ಸುದ್ದಿಯ ಹಿನ್ನೆಲೆ ಬಗ್ಗೆ ತನಿಖೆ ನಡೆಸುವುದಕ್ಕೆ ಯಾರಿಂದಲೂ ಸಾಧ್ಯವಾಗಲಿಲ್ಲ ಎಂಬ ಅಂಶವನ್ನು ಬೊಗಳೂರು ಬ್ಯುರೋ ಕಂಡುಕೊಂಡಿದೆ.</p>Anveshihttp://www.blogger.com/profile/04356401566159202899noreply@blogger.com2tag:blogger.com,1999:blog-25346734.post-15186163017824196322020-08-17T10:50:00.001+05:302020-08-17T10:50:49.940+05:30ವಾಹನಕ್ಕೆ ಬೆಂಕಿ, ಪುಂಡಾಟ: ಪೌರ ಕಾರ್ಮಿಕರ ಸಂತಸ<p></p><div class="separator" style="clear: both; text-align: center;"><img border="0" data-original-height="867" data-original-width="1656" height="209" src="https://blogger.googleusercontent.com/img/b/R29vZ2xl/AVvXsEjGyvkPhs0fV20dDksNjcgxCeDGD3TGTn2BfJ7aaqFhRKC1ihhnHiLaXXInmcz5jHHd8uWNDajgXkMTWS0zA8XoCU4nQIu2p4HZXgqXzKDp2ZU_VYHa5n6r-GfObD27B7V7yWDNPw/w400-h209/Bengaluru+Violence.jpg" title="ಚಿತ್ರ: ಇಂಟರ್ನೆಟ್ ಕೃಪೆ" width="400" /></div><b><br /></b><p></p><p style="text-align: center;"><b>[ಬೊಗಳೂರು ಅಸತ್ಯ ಶೋಧನಾ ಬ್ಯುರೋದಿಂದ]</b></p><p><b>ಬೊಗಳೂರು: </b>ಫೇಸ್ಬುಕ್ನಿಂದಾಗಿ ಇತ್ತೀಚೆಗೆ ಗಲಭೆ, ದೊಂಬಿಗಳು ಜಾಸ್ತಿಯಾಗುತ್ತಿರುವುದರ ಹಿನ್ನೆಲೆಯು ಈಗಷ್ಟೇ ಬೆಳಕಿಗೆ ಬಂದಿರುವುದಾಗಿ ಏಕಸದಸ್ಯ ಬೊಗಳೆ ಬ್ಯುರೋದ ಸಮಸ್ತ ಸಿಬ್ಬಂದಿಗಳು ತನಿಖಾ ವರದ್ದಿ ಮಾಡಿದ್ದಾರೆ.</p><p>ಬೊಗಳೂರಿನ ವಿವಿಧೆಡೆ ಇತ್ತೀಚೆಗೆ ಅಮಾಯಕರು, ಶಾಂತಿದೂತರು ಎಲ್ಲ ಒಟ್ಟು ಸೇರಿ, ಕಾನೂನಿಗೆ ಏನೂ ಆಗಬಾರದೆಂದು ಅದನ್ನು ತಮ್ಮ ಕೈಗೆತ್ತಿಕೊಂಡಿದ್ದರು. ಸುಖಾ ಸುಮ್ಮನೇ ರಸ್ತೆ ಬದಿ ನಿಲ್ಲಿಸಿ, ಸಂಚಾರಕ್ಕೆ ಅಡ್ಡಿಪಡಿಸುತ್ತಿದ್ದ ವಾಹನಗಳನ್ನು ಸುಟ್ಟು ಭಸ್ಮ ಮಾಡಿದ್ದರು. ಅಷ್ಟೇ ಅಲ್ಲದೆ, ತ್ಯಾಜ್ಯ ವಿಲೇವಾರಿಗಾಗಿ ಪೌರಕಾರ್ಮಿಕರಿಗೆ ನೆರವಾಗಲೆಂದು, ಹಲವು ವಾಹನಗಳನ್ನು ಸ್ಟೀಲ್ ರಾಡ್ನಿಂದ ಬಡಿದು ಪುಡಿಗಟ್ಟಿದ್ದರು.</p><p>ಈ ರೀತಿ ಮಾಡುವುದರಿಂದ ವಾಹನಗಳನ್ನು ಬುಟ್ಟಿಯಲ್ಲಿ ತುಂಬಿಕೊಂಡು, ತ್ಯಾಜ್ಯ ವಿಲೇವಾರಿ ಮಾಡುವುದು ಪೌರ ಕಾರ್ಮಿಕರಿಗೆ ವಿಶೇಷ ಅನುಕೂಲವಾಗಿತ್ತು. ಇಡೀ ವಾಹನವನ್ನು ಹೊತ್ತುಕೊಂಡು ಹೋಗುವುದು ಕಷ್ಟ, ಆದರೆ, ಅದರ ಬೂದಿಯನ್ನು ಒಂದು ಗೋಣಿಚೀಲದಲ್ಲಿ ತುಂಬಿಸಿಕೊಂಡು ಹೋಗಬಹುದಾಗಿತ್ತು. ಇದಕ್ಕಾಗಿ ಪೌರ ಕಾರ್ಮಿಕರು ಶಾಂತಿಪ್ರಿಯ ಅಮಾಯಕರಿಗೆ, ಅನಕ್ಷರಸ್ಥರಿಗೆ ತುಂಬು ಹೃದಯದ ಕೃತಜ್ಞತೆ ಸಲ್ಲಿಸಿರುವುದಾಗಿ ವರದಿಯಾಗಿದೆ.</p><p>ಕೇಜಿ ಹಳ್ಳಿಯಿಂದ ಕ್ವಿಂಟಾಲ್ಗಟ್ಟಲೆ ವಾಹನಗಳ ಬದಲು, ಕೇಜಿ ಗಟ್ಟಲೆ ಬೂದಿ ಮತ್ತು ವಾಹನಗಳ ಚೂರುಗಳನ್ನು ಬುಟ್ಟಿಯಲ್ಲಿ ಹೊರುವುದು ಸುಲಭವಾಗಿತ್ತು. ಇದಕ್ಕಾಗಿ ಶಾಂತಿಪ್ರಿಯರಿಗೆ ಕೃತಜ್ಞತೆ ಸಲ್ಲಿಸಿರುವ ಪೌರ ಕಾರ್ಮಿಕ ಸಂಘದ ಅಧ್ಯಕ್ಷ ಪೋರ ಕುಮಾರ್ ಅವರು, ಮುಂದೆಯೂ ಇದೇ ರೀತಿ ಅಭಿಪ್ರಾಯ ಸ್ವಾತಂತ್ರ್ಯವನ್ನು ಬಳಸಲು ಅನುವು ಮಾಡಿಕೊಟ್ಟಿರುವ ಫೇಸ್ಬುಕ್ಕಿಗೆ ಧನ್ಯವಾದ ಹೇಳಿದ್ದಾರೆ. ಇಲ್ಲಿ ಒಂದು ಧರ್ಮದವರನ್ನು ದೂಷಿಸಿದರೆ ಮಾತ್ರವೇ ಈ ರೀತಿ ಶಾಂತಿಪ್ರಿಯರು ಕುಣಿಯುತ್ತಾರೆ, ಬಡಿಗೆ ಹಿಡಿದುಕೊಂಡು, ದೊಂದಿ ಹಿಡಿದು, ಹಾಹಾಕಾರ, ಅರಚಾಟ, ಕೂಗಾಟ ಸಂಗೀತದೊಂದಿಗೆ ರುದ್ರ ನರ್ತನ ಮಾಡುತ್ತಾರೆ.</p><p>ಡಿಜೆ ಹಳ್ಳಿಯಲ್ಲಿ ಡಿಜೆ ಸಾಂಗ್ಸ್ ಕೂಡ ಚೆನ್ನಾಗಿಯೇ ಕೇಳಿ ಬರುತ್ತಿದ್ದುದರಿಂದ, ಇದಕ್ಕೆಲ್ಲದಕ್ಕೂ ಫೇಸ್ಬುಕ್ ಅಭಿಪ್ರಾಯ ಸ್ವಾತಂತ್ರ್ಯ ಕಾರಣ. <a href="https://www.prajavani.net/india-news/bjp-controls-facebook-rahul-gandhi-attacks-on-bjp-over-us-media-report-753878.html" target="_blank">ಇದು ಈಗ ಬಿಜೆಪಿ, ಆರೆಸ್ಸೆಸ್ನ ನಿಯಂತ್ರಣದಲ್ಲಿದೆ ಎಂಬುದಾಗಿ ಕಾಂಗ್ರೆಸ್ ಅಧ್ಯಕ್ಷ</a>ರು ಸತ್ಯಶೋಧನೆ ನಡೆಸಿರುವುದು ಅಸತ್ಯಾನ್ವೇಷಣಾ ಬ್ಯುರೋಗೆ ನುಂಗಲಾರದ ತುತ್ತಾಗಿದೆ. ಈ ರೀತಿ ತಮ್ಮ ಬ್ಯುರೋಗೆ ಪ್ರತಿಸ್ಫರ್ಧೆ ನೀಡಿದರೆ ಮುಂದೆ ಭವಿಷ್ಯ ಕಷ್ಟವಿದೆ ಎಂಬುದನ್ನು ಅರಿತುಕೊಂಡಿರುವ ಬೊಗಳೂರು ಬೊಗಳೆ ಬ್ಯುರೋ, ಮುಂದೆಂದಾದರೂ ಅವಕಾಶ ದೊರೆತಾಗ, ಅವರನ್ನೇ ಬ್ಯುರೋ ಮುಖ್ಯಸ್ಥರನ್ನಾಗಿ ನೇಮಿಸಿಕೊಳ್ಳಲು ನಿರ್ಧರಿಸಿದೆ ಎಂದು ನಾವ್ಯಾರೂ ವರದಿ ಮಾಡಿಲ್ಲ.</p>Anveshihttp://www.blogger.com/profile/04356401566159202899noreply@blogger.com2tag:blogger.com,1999:blog-25346734.post-73936523125663436392020-08-08T13:46:00.000+05:302020-08-08T13:46:51.158+05:30ಜಾಗತಿಕ ಉಷ್ಣತೆ: ಕಾರಣ, ಪರಿಹಾರ ಮತ್ತು ಆತಂಕ!!!<div class="separator" style="clear: both; text-align: center;"><img border="0" data-original-height="277" data-original-width="404" src="https://blogger.googleusercontent.com/img/b/R29vZ2xl/AVvXsEjH4WkZ3BWJosYsWCe-KIY_JJ3o7NGqmrODiX-BEOFJjBRb4o3hkUNwd8zKD5QZA9vrhXFCH1bU4VYMzdV9_YuExnB0ylkQJxyT0825rSRm1QwpBmW4lZF5wFNFEu7YkJu_SlOnFg/s0/Mini.jpg" /></div><div style="text-align: center;"><br /></div><div style="text-align: center;"><b>(ಬೊಗಳೂರು ತಾಪಮಾನಾಪಮಾನ ಬ್ಯುರೋದಿಂದ)
</b></div>ಬೊಗಳೂರು, ಜು.20- ಜಾಗತಿಕ ತಾಪಮಾನ ಹೆಚ್ಚಳಕ್ಕೆ ಕಾರಣ ಪತ್ತೆ ಹಚ್ಚಲಾಗುತ್ತಿರುವಾಗಲೇ ವಿಷಯ ಎಲ್ಲ ಗೊತ್ತಾಗಿಬಿಟ್ಟಿದೆ. ಇದಕ್ಕೆಲ್ಲಾ ಕಾರಣ ಬಾಲಿವುಡ್ ನಟೀಮಣಿಯರು!!
ಬಾಲಿವುಡ್ ನಟೀಮಣಿಯರು ಉಡುತ್ತಿರುವ ಬಟ್ಟೆಯ ಪ್ರಮಾಣ ಕಡಿಮೆಯಾಗುತ್ತಿರುವುದರಿಂದಲೇ ಜಾಗತಿಕವಾಗಿ ತಾಪಮಾನ ಹೆಚ್ಚಾಗುತ್ತಿದೆ ಎಂಬುದನ್ನು ಬೊಗಳೂರು ಬ್ಯುರೋ ಕಂಡುಕೊಳ್ಳಲು ಹೊರಟಿತ್ತು.<div><br /></div><div>ಇದೀಗ ಮೋಸ್ಟ್ ಗೂಗಲ್ಡ್ ಸೆಕ್ಸೀ ನಟಿ ಕತ್ರಿನಾ ಕೈಫ್ "ಬಟ್ಟೆಗೂ ಕತ್ರೀನಾ?" ಎಂದು ಹುಬ್ಬೇರಿಸುವಷ್ಟರ ಮಟ್ಟಿಗೆ ಮೆರೆದಾಡಿದರೂ, ಜಾಗತಿಕ ತಾಪಮಾನದ ಬಗ್ಗೆ <a href="http://www.samaylive.com/news/katrina-concerned-about-global-warming/638844.html">ಇಲ್ಲಿ </a>ಕಳವಳ ವ್ಯಕ್ತಪಡಿಸಿರುವುದು ಬಾಲಿವುಡ್ ಪ್ರಿಯರ ಕಳವಳಕ್ಕೂ ಕಾರಣವಾಗಿದೆ.<div><br /></div><div>ಮೂರು ವರ್ಷಗಳ ಹಿಂದೆಯೇ ತಾಪಮಾನ ಹೆಚ್ಚಳಕ್ಕೆ ಮತ್ತೊಂದು ಕಾರಣವನ್ನೂ ಬೊಗಳೆ ರಗಳೆ <a href="http://www.anveshi.net/2006/04/blog-post_11.html">ಇಲ್ಲಿ</a> ಪತ್ತೆ ಮಾಡಿತ್ತು.
ಇದೀಗ ಕಿಲರಿ ಹ್ಲಿಂಟನ್ ಅವರು ಕೂಡ ಜಾಗತಿಕ ತಾಪಮಾನಕ್ಕೆ ಕಡಿವಾಣ ಹಾಕಬೇಕಾಗಿದೆ ಎಂದು ಬೊಂಬಾಯಿಯೊಂದಿಗೆ ಮುಂಬಯಿಗೆ ಬಂದು, ಬಾಲಿವುಡ್ ನಟೀಮಣಿಯರಿರುವ ತಾಣದಲ್ಲೇ ಹೇಳಿರುವುದರ ಹಿಂದಿನ ಮರ್ಮವೇನು ಎಂಬ ಬಗ್ಗೆ ಸಂಚೋದನೆ ನಡೆಯುತ್ತಿದೆ.
ಇತ್ತೀಚೆಗೆ ನಟೀಮಣಿಯರು ಪುಟ್ಟ ಬೆಂಕಿ ಪೆಟ್ಟಿಗೆಯೊಳಗೆ ಮಡಚಿ ಇರಿಸಬಹುದಾದಷ್ಟು ಭಾರೀ ಗಾತ್ರದ ಉಡುಗೆ ತೊಡುವ, ಅಥವಾ ಆ ಉಡುಗೆಯನ್ನು ದೇಹಕ್ಕೆ "ಸ್ಯಾಂಪಲ್' ಆಗಿ ತೋರಿಸುವ ಪ್ರವೃತ್ತಿ ಹೆಚ್ಚಿಸುತ್ತಾ ಪ್ರಸಿದ್ಧಿ ಪಡೆಯಲು ಹರಸಾಹಸ ಮಾಡುತ್ತಿರುವುದರಿಂದ, ದೇಹದ ಮತ್ತು ದೇಶದ ತಾಪಮಾನ ಹೆಚ್ಚಾಗುತ್ತಿದೆ ಎಂದು ತಿಳಿದುಬಂದಿದೆ.</div><div><br /></div><div>ಇದೀಗ ತಾಪಮಾನ ತಗ್ಗಿಸಲು ಎಲ್ಲರೂ ಹರ ಸಾಹಸ ಮಾಡುತ್ತಿರುವದರಿಂದ ದೇಶದೆಲ್ಲೆಡೆ ಕಳವಳವೂ ಬಿಸಿಬಿಸಿಯಾಗಿ ಏರತೊಡಗಿದೆ. ರೆ ಕತ್ರಿನಾ ಸೇರಿದಂತೆ ಬಾಲಿವುಡ್ ನಟೀಮಣಿಯರೇನಾದರೂ ಜಾಗತಿಕ ತಾಪಮಾನ ಕಡಿಮೆ ಮಾಡಲು ಪಣ ತೊಟ್ಟರೆ ಎಂಬ ಆತಂಕವೇ ಇದಕ್ಕೆ ಕಾರಣ ಎಂದು ಸಂಚೋದಿಸಲಾಗಿದೆ.</div></div>Anveshihttp://www.blogger.com/profile/04356401566159202899noreply@blogger.com4tag:blogger.com,1999:blog-25346734.post-60261518186485274322020-08-08T13:27:00.000+05:302020-08-08T13:27:03.020+05:30BarKing News: ಕನ್ನಡ ಚಾನೆಲ್ಗಳ ಮೇಲೆ ಕೇಸು ದಾಖಲು!<p style="text-align: center;"></p><div class="separator" style="clear: both;"><img border="0" data-original-height="626" data-original-width="1200" src="https://blogger.googleusercontent.com/img/b/R29vZ2xl/AVvXsEiHGlrU4QnIuXpnmxBPfgCpXbTo25OFT6slMqVUkPKU79tsiUEJap2Fu81vyQy8FWQhXB53IEY1BPQg0LzLj0ITsK04WLNU2VRyEkayXQrAjlzmRd6ox1-60gmglK5OvUPjPNmHEA/s640/Rain+TV+Channels.jpg" width="640" /></div><b><br /></b><p></p><p style="text-align: center;"><b>[ರಣಭೀಕರ ಬ್ಯುರೋದಿಂದ]</b></p><p><b>ಬೊಗಳೂರು: </b>ಕನ್ನಡದ ಬಹುತೇಕ ಎಲ್ಲ ಟಿವಿ ವಾಹಿನಿಗಳ ವಿರುದ್ಧ ವಿಶಿಷ್ಟವಾದ ಕೇಸೊಂದು ದಾಖಲಾಗಿದೆ. ಇದು ಪದವಿಯ ಕೃತಿಸ್ವಾಮ್ಯ ಅಥವಾ ಬಿರುದುಗಳ ಕೃತಿಸ್ವಾಮ್ಯಕ್ಕೆ ಸಂಬಂಧಿಸಿದ ವಿಶಿಷ್ಟ ಪ್ರಕರಣವೆಂದು ನಾಡಿನ ಖ್ಯಾತ ನ್ಯಾಯವಾದಿಗಳಾದ ರೇಮ್ ರಾಠ್ಮಲಾನಿ ಅವರು ಬೊಗಳೆ ಬ್ಯುರೋಗೆ ತಿಳಿಸಿದ್ದಾರೆ.</p><p>ಕೊರೊನಾ ವೈರಸ್ ಹಾವಳಿಯಿಂದಾಗಿ ಬರುತ್ತಿರುವ ಕೋವಿಡ್-19 ಎಂಬ ಜಾಗತಿಕ ಪಿಡುಗು ಭಾರತದಲ್ಲಿಯೂ ಹಬ್ಬಿದೆ, ಕರ್ನಾಟಕದಲ್ಲಿಯೂ ಹಬ್ಬಿದೆ ಎಂದು ಕನ್ನಡದ ಟಿವಿ ವಾಹಿನಿಗಳು ಪದೇ ಪದೇ ಎಚ್ಚರಿಕೆ ನೀಡುತ್ತಲೇ ಬಂದಿದ್ದವು. ಆದರೆ, ಇಡೀ ಜಗತ್ತಿಗಿಂತಲೂ ಕರ್ನಾಟಕದಲ್ಲಿಯೇ ಕೋವಿಡ್ ಜಾಸ್ತಿಯಾಗಿದೆ. ಈ ಕೊರೊನಾ ವೈರಸ್ ದಿನದಿಂದ ದಿನಕ್ಕೆ ಹೊಸ ಹೊಸ ರೂಪದಲ್ಲಿ, ರಣ ಭೀಕರತೆ ಸೃಷ್ಟಿಸುತ್ತಾ, ರಕ್ತರಾತ್ರಿ ಮಾಡುತ್ತಾ, ಭಯಾನಕ ಅಟ್ಟಹಾಸ ಮೆರೆಯುತ್ತಿದೆ ಎಂದು ಟಿವಿ ವಾಹಿನಿಗಳು ವರದ್ದಿ ನೀಡುತ್ತಲೇ ಬಂದಿದ್ದವು.</p><p>ಪ್ರಚಂಡ ಅಟ್ಟಹಾಸದದೊಂದಿಗೆ ಜನರ ಮೇಲೆ ಅಬ್ಬರಿಸಿ ಬೊಬ್ಬಿರಿವ ರಣಭೀಕರ ರಕ್ತಪಿಪಾಸುವಾಗಿ ಮೆರೆದು ಸಾಕಷ್ಟು ಸುದ್ದಿ, ಸದ್ದು ಮಾಡುತ್ತಿದ್ದ ಕೊರೊನಾ ವೈರಸ್ ಈಗ ಹತಾಶೆಯಿಂದ ಈ ದೇಶದಿಂದಲೇ ಓಡಿ ಹೋಗುವ ಯೋಚನೆ ಮಾಡುತ್ತಿರುವುದಾಗಿ ಮೂಲಗಳು ತಿಳಿಸಿವೆ. ಆದರೂ ಕೊನೆಯ ಪ್ರಯತ್ನವಾಗಿ ಕೇಸೊಂದನ್ನು ದಾಖಲಿಸಲಾಗಿದೆ ಎಂಬ ಮಾಹಿತಿ ಈಗಷ್ಟೇ ಲಭ್ಯವಾಗಿದೆ.</p><p>ಇದುವರೆಗೆ ಅಬ್ಬರಿಸಿ ಬೊಬ್ಬಿಡುತ್ತಾ, ರಣ ಕೇಕೆ ಹಾಕುತ್ತಾ, ರೌದ್ರ ನರ್ತನ ಮಾಡುತ್ತಾ ರಣಭೀಕರ ಹೆಮ್ಮಾರಿಯಾಗಿ ಮೆರೆದ ತನ್ನ ಹೆಸರನ್ನು ಈಗ ಮಳೆ ಎಂಬ ಒಂದು ಪುಟಗೋಸಿ ನೀರಿಗೆ ಇರಿಸಿ, ಅದನ್ನೇ ಎಲ್ಲ ಚಾನೆಲ್ಗಳೂ ಬಿಂಬಿಸುತ್ತಿವೆ. ಇಷ್ಟರವರೆಗೆ ಏಕಮೇವಾದ್ವಿತೀಯವಾಗಿ ಈ ಬಿರುದು ಬಾವಲಿಗಳಿಂದ ಮೆರೆದ ತನಗೆ ಅವಮಾನವಾಗಿದೆ. ಮೊದಲೆಲ್ಲಾ ಒಂದೆರಡು ಕೋವಿಡ್ ಪ್ರಕರಣ ದಾಖಲಾದಾಗಲೇ ರಣಭೀಕರ ಹೆಮ್ಮಾರಿ ಅಂತ ತನ್ನನ್ನು ಕರೆಯುತ್ತಿದ್ದರು. ಆದರೆ, ಈಗ ದಿನಕ್ಕೆ ಆರು ಸಾವಿರಕ್ಕೂ ಹೆಚ್ಚು ಕೋವಿಡ್ ಪ್ರಕರಣಗಳು ದಾಖಲಾದರೂ ಕೂಡ, ತನ್ನನ್ನು ಎರಡು ದಿನಗಳಿಂದ ಯಾರು ಕೂಡ ರಣಭೀಕರ ಹೆಮ್ಮಾರಿ ಅಂತ ಕರೆಯಲೇ ಇಲ್ಲ. ಇದು ತನ್ನ ಪ್ರಚಂಡ ಶಕ್ತಿಗೆ ಮಾಡಿರುವ ಅವಮಾನವಲ್ಲವೇ ಎಂದು ನ್ಯಾಯಾಲಯದಲ್ಲಿ ದಾಖಲಿಸಿದ ದೂರಿನಲ್ಲಿ ಕೊರೊನಾ ವೈರಸ್ ವಿವರಿಸಿದೆ.</p><p>ಶುಕ್ರವಾರವಂತೂ, ತಾನು ಸಾಕಷ್ಟು ದೊಡ್ಡ ಪ್ರಮಾಣದಲ್ಲೇ ಸದ್ದು ಮಾಡಿದ್ದೆ. ಆದರೆ, ಮಳೆಯನ್ನೇ ಜಲಾಸುರ, ವರುಣಾಸುರನ ರಣಕೇಕೆ ಅಂತೆಲ್ಲಾ ಬಿಂಬಿಸಲಾಯಿತು. ಸಂಜೆ ನೋಡಿದರೆ, ತನ್ನ ಸುದ್ದಿಯೇ ಇಲ್ಲ, ಯಾಕೆಂದರೆ ಕೋಯಿಕ್ಕೋಡ್ನಲ್ಲಿ ವಿಮಾನ ಅಪಘಾತವನ್ನೇ ಪದೇ ಪದೇ ತೋರಿಸಿ, ತನಗೆ ತೀರಾ ಅವಮಾನ ಮಾಡಿದರು ಎಂದು ಕೊರೊನಾ ವೈರಸ್ ಹತಾಶೆಯಿಂದ ಸಲ್ಲಿಸಿದ ದೂರಿನಲ್ಲಿ ತಿಳಿಸಿದೆ. ತನ್ನ ಬಿರುದುಗಳನ್ನೆಲ್ಲ ಈ ಜಲಾಸುರ, ವರುಣಾಸುರ ಎಂಬ ದೇವತೆಯೇ 'ಅಸುರ'ನಾಗಿ ಕಿತ್ತುಕೊಂಡಿದ್ದು ಹೇಗೆ ಎನ್ನುವುದು ದೂರಿನಲ್ಲಿರುವ ಒಟ್ಟಾರೆ ಅಂಶ.</p><p>ಪ್ರಕರಣವನ್ನು ಕೈಗೆತ್ತಿಕೊಂಡು ನೋಡಿದ ನ್ಯಾಯಾಧೀಶರು, ವಿಚಾರಣೆಯನ್ನು ಕೆಲವು ದಿನಗಳ ಕಾಲ ಮುಂದೂಡಿದ್ದಾರೆ ಎಂದು ಏಕಸದಸ್ಯ ಬ್ಯುರೋದ ಸಮಸ್ತ ಸದಸ್ಯರ ತಂಡವೊಂದು ರಣಭೀಕರ ಹೆಮ್ಮಾರಿ ಯಾರು ಎಂಬ ಗೊಂದಲಕ್ಕೀಡಾಗಿ ವರದ್ದಿ ಮಾಡಿರುವುದಾಗಿ ತಿಳಿದುಬಂದಿದೆ.</p>Anveshihttp://www.blogger.com/profile/04356401566159202899noreply@blogger.com2tag:blogger.com,1999:blog-25346734.post-71893436189733628732020-07-31T09:47:00.000+05:302020-07-31T09:47:10.717+05:30ರಾಜಕೀಯ ಹಬ್ಬ: ಶಾಸಕರ ಸೂಚ್ಯಂಕ, ಶೋಷಕರ ಬೆಲೆ ದಿಢೀರ್ ಏರಿಕೆ<div style="text-align: center;"><table align="center" cellpadding="0" cellspacing="0" class="tr-caption-container" style="margin-left: auto; margin-right: auto;"><tbody><tr><td style="text-align: center;"><img border="0" data-original-height="1280" data-original-width="853" height="320" src="https://blogger.googleusercontent.com/img/b/R29vZ2xl/AVvXsEhTYNWZ4l9dqId-Kc7-E0fkIgcpqrOSmfmufOTvinHJtib35doLEDnXbkFLg16G7l7yJo-tPxXB5SGlviKRoNMPWkF39HsiOmvu2F2jjyvjFkJo_XfGeDjnrXbA7bmaczK3FnMFRw/w213-h320/Bhikshuk.jpg" style="margin-left: auto; margin-right: auto;" width="213" /></td></tr><tr><td class="tr-caption" style="text-align: center;"><b>ಅಭಿವೃದ್ಧಿ ಕಾರ್ಯಗಳಿಲ್ಲದೆ ಕೈಗೇನೂ ಸಿಗದೆ ಹತಾಶನಾಗಿರುವ ಶೋಷಕನ ಚಿತ್ರ</b><br /></td></tr></tbody></table><div class="separator" style="clear: both; text-align: left;"><b style="text-align: center;">[ಬೊಗಳೂರು ಸೆನ್ಸೆಕ್ಸ್ ಬ್ಯುರೋದಿಂದ]</b></div></div><div><b>ಬೊಗಳೂರು: </b>ವರಮಹಾಲಕ್ಷ್ಮಿ ಹಬ್ಬಕ್ಕೆ ಹಣ್ಣು, ಹೂವು, ತರಕಾರಿ ಹಾಗೂ ಚಿನ್ನಕ್ಕೆ ಬೆಲೆ ಏರುತ್ತಿರುವಂತೆಯೇ ವಿವಿಧೆಡೆಗಳಲ್ಲಿ ಶೋಷಕರ ಬೆಲೆಯೂ ಏರಿಕೆಯಾಗಿದೆ ಎಂದು ನಮ್ಮ ರಾಜಸ್ಥಾನದ ಬಾತ್ಮೀದಾರರು ವರದ್ದಿ ತಂದು ಸುರುವಿದ್ದಾರೆ.</div><div><br /></div><div>ಶೋಷಕರ ಬೆಲೆ ಏರಿಕೆ ಪ್ರಕ್ರಿಯೆಯೇನೂ ಹೊಸದಲ್ಲ. ಈ ಹಿಂದೆ ಕರುನಾಟಕದಲ್ಲಿ ಹಲವು ಬಾರಿ ಶೋಷಕರು ರೆಸಾರ್ಟ್ ಪ್ರವಾಸ, ಹೊರ ರಾಜ್ಯ ಪ್ರವಾಸ ಮುಂತಾದವುಗಳನ್ನು ನಡೆಸುತ್ತಾ, ಅದಕ್ಕಾಗಿ ತಗುಲುವ ವೆಚ್ಚವೆಲ್ಲವನ್ನೂ ಬಡ ತೆರಿಗೆದಾರರ ಖಾತೆಯಿಂದಲೇ ಭರಿಸಲಾಗುತ್ತಿತ್ತು.</div><div><br /></div><div>ಆದರೆ, ಇತ್ತೀಚೆಗೆ ಕೋವಿಡ್-19 ಕಾಯಿಲೆ ಕಾಣಿಸಿಕೊಂಡಿರುವುದರಿಂದ, ಯಾವುದೇ ರೀತಿಯಲ್ಲೂ ನುಂಗಬಹುದಾದ ಯೋಜನೆಗಳು ಕಾರ್ಯಗತವಾಗುತ್ತಿಲ್ಲ. ಅಭಿವೃದ್ಧಿ ಯೋಜನೆಗಳೆಲ್ಲವೂ ಸ್ಥಗಿತಗೊಂಡಿರುವುದರಿಂದ ಶೋಷಕರಿಗೆ ಬದುಕುವುದು ಕೂಡ ಕಷ್ಟವಾಗಿಬಿಟ್ಟಿದೆ ಎಂದು ಏಕಸದಸ್ಯ ಬ್ಯುರೋದ ಸಮಸ್ತ ಸದಸ್ಯರು ಅಲ್ಲಲ್ಲಿಂದ ವರದ್ದಿ ತಂದಿದ್ದಾರೆ.</div><div><br /></div><div>ಕರುನಾಟಕ, ಮದ್ಯದ ಪ್ರದೇಶ, ಗೋಗೋವಾ, ಬಿಹಾರ, ತತ್ತರ ಪ್ರದೇಶ, ತತ್ತರಾಖಂಡ, ಅಸಾಮಿ ಮುಂತಾದೆಡೆಗಳಲ್ಲೆಲ್ಲಾ ಆಗಾಗ್ಗೆ ಈ ಶೋಷಕರ ಬೆಲೆಯು ಸೆನ್ಸೆಕ್ಸ್ನಂತೆ ಏರಿಳಿತ ಕಾಣುತ್ತಿತ್ತು. ಇತ್ತೀಚಿನ ಬೆಳವಣಿಗೆ ವರದ್ದಿಯಾಗಿರುವುದು ರಾಜಸ್ಥಾನದಿಂದ.</div><div><br /></div><div>ಗೆಶೋಕ ಅಹ್ಲಾಟ್ ಸರ್ಕಾರದ ಕಾರ್ಯನೀತಿಗಳಿಂದ ರೋಸಿ ಪಚಿನ್ ಸೈಲಟ್ ನೇತೃತ್ವದ ಬಣವೊಂದು ಬಂಡಾಯವೆದ್ದು, ಬಂಡಾಯವೆದ್ದ ತಕ್ಷಣ ಶೋಷಕರ ಮಾರುಕಟ್ಟೆ ಸೂಚ್ಯಂಕ ನಿಧಾನವಾಗಿ ಏರುತ್ತಲೇ ಇತ್ತು. ಇದೀಗ ವಿಧಾನಸಭೆ ಅಧಿವೇಶನ ಕರೆಯಲು ರಾಜ್ಯಪಾಲರು ಒಪ್ಪಿಗೆ ಸೂಚಿಸಿರುವ ಹಿನ್ನೆಲೆಯಲ್ಲಿ ಶೋಷಕರ ಮಾರುಕಟ್ಟೆ ಸೂಚ್ಯಂಕವು ದಿಢೀರ್ ಏರಿಕೆ ಕಂಡಿದೆ ಎಂದು ಮಾರುಕಟ್ಟೆ ತಜ್ಞರು ವಿಶ್ಲೇಷಿಸಿದ್ದಾರೆ.</div><div><br /></div><div> ಸ್ವಯಮಾಭಿವೃದ್ಧಿ ಯೋಜನೆಗಳು ಯಾವುದು ಕೂಡ ಕಾರ್ಯಗತವಾಗಲು ಕೊರೊನಾ ಬಿಡುತ್ತಿಲ್ಲ. ಹೀಗಾಗಿ ನುಂಗಣ್ಣರಿಗೆ ನಿರುದ್ಯೋಗ ಸಮಸ್ಯೆಯೂ ಕಾಡುತ್ತಿದೆ. ಆದರೆ, ಕುದುರೆ ವ್ಯಾಪಾರಕ್ಕೆ ಯಾವುದೇ ಧಕ್ಕೆಯಾಗಿಲ್ಲ ಎಂದು ಮಾರುಕಟ್ಟೆ ತಜ್ಞರು ವಿಶ್ಲೇಷಿಸಿದ್ದಾರೆ.</div>Anveshihttp://www.blogger.com/profile/04356401566159202899noreply@blogger.com2tag:blogger.com,1999:blog-25346734.post-4947742357102989442020-07-25T09:00:00.000+05:302020-07-25T09:00:00.661+05:30Big BarKing News | ಲೆಕ್ಕ ಕೊಡಿ/ತಗೊಳಿ ಚಳವಳಿಯಿಂದ ಉದ್ಯೋಗಾವಕಾಶ ಹೆಚ್ಚಳ<div class="separator" style="clear: both; text-align: center;">
<img border="0" data-original-height="533" data-original-width="800" height="266" src="https://blogger.googleusercontent.com/img/b/R29vZ2xl/AVvXsEi8Gheonnjry7Hy8DqPDvjMBTe1gugyoifgIXQqKGsPDmQPr2M0EIKDGAF3SOmCaAIr0zKkZygDEzhOiNhW3tpYRFduh4DM9FZMMy0KrHJU11QaNHJBRaoKbCRejVioxqn5kp5s9A/s400/Calculating+maths.jpg" width="400" /></div>
<div style="text-align: center;">
<b><br /></b></div>
<div style="text-align: center;">
<b>[ನಿರುದ್ಯೋಗ ಬ್ಯುರೋದಿಂದ]</b></div>
<b>ಬೊಗಳೂರು:</b> ಕೋವಿಡ್ನಿಂದಾಗಿ ಕಾರ್ಮಿಕರು ಕೆಲಸ ಕಳೆದುಕೊಂಡಿದ್ದಾರೆ, ನಿರುದ್ಯೋಗ ಹೆಚ್ಚಾಗಿದೆ ಎಂಬ ಆರೋಪಗಳು ಸುಳ್ಳು ಎಂಬುದನ್ನು ಬೊಗಳೂರಿನ ಏಕಸದಸ್ಯ ಬ್ಯುರೋದ ಅಸತ್ಯಾನ್ವೇಷಿ ನೇತೃತ್ವದ ತಂಡವು ಪತ್ತೆ ಹಚ್ಚಿದೆ.<br />
<br />
ಈಗಾಗಲೇ ಆಡಳಿತ ಪಕ್ಷವು ಬೀಗ ಹಾಕಿ ಬೀಗ ತೆಗೆಯುವ ಕಾರ್ಯಕ್ರಮ ನಡೆಸುತ್ತಲೇ, ಕೊರೊನಾ ವೈರಸ್ ಹಾವಳಿ ನಿಯಂತ್ರಿಸುವ ಪ್ರಯೋಗಗಳನ್ನು ಕೈಗೊಂಡ ಬಳಿಕ, ಜನರಿಗೆ ಬುದ್ಧಿ ಬರುವುದಿಲ್ಲ ಎಂಬುದನ್ನು ಅರಿತು, ಲಾಕ್ಡೌನ್ ಇಲ್ಲ, ನಿಮ್ಮ ಆರೋಗ್ಯ ನಿಮ್ಮ ಕೈಯಲ್ಲೇ ಎಂದು ಘೋಷಿಸಿಬಿಟ್ಟಿದೆ. ಆದರೆ, ಲಾಕ್ ಹಾಕಿದರೂ, ತೆಗೆದರೂ ಸದಾ ಟೀಕಿಸುತ್ತಲೇ ಇರುವ ವಿರೋಧ ಪಕ್ಷಗಳು ಕೆಲಸವಿಲ್ಲದವರೆಲ್ಲರಿಗೂ ಕೆಲಸ ನೀಡಲಾರಂಭಿಸಿದೆ ಎಂಬುದು ಬೊಗಳೂರು ನಿರುದ್ಯೋಗ ಬ್ಯುರೋದ ತನಿಖೆಯಿಂದ ಖಚಿತವಾಗಿದೆ.<br />
<br />
ಈ ಕುರಿತು ಸಂಚೋದನೆ ನಡೆಸಿರುವ ವರದ್ದಿಗಾರರು, <a href="https://www.prajavani.net/district/mysore/dont-ask-accounts-on-street-vishwanath-747502.html" target="_blank">ನಾಡಿನ ಹಾದಿ ಬೀದಿಗಳಲ್ಲಿ ಕೆಲವರು</a> ಕ್ಯಾಲ್ಕುಲೇಟರ್ ಕೈಯಲ್ಲಿ ಹಿಡಿದು, ವಾಟ್ಸಾಪ್ ನೋಡುತ್ತಾ, ಲೆಕ್ಕ ಕೊಡಿ ಲೆಕ್ಕ ಕೊಡಿ ಎಂದು ಕೇಳಲಾರಂಭಿಸಿರುವುದನ್ನು ಪತ್ತೆ ಹಚ್ಚಿದ್ದಾರೆ. ಇವರೆಲ್ಲರೂ ಕೆಲಸವಿಲ್ಲದವರಾಗಿದ್ದು, ಈಗ ಉದ್ಯೋಗ ಸಿಕ್ಕಿದೆ. ಯಾರಿಗೆಲ್ಲಾ ಉದ್ಯೋಗ ಸಿಕ್ತು ಎಂಬುದರ ಲೆಕ್ಕ ಹಾಕುತ್ತಾ ಹೋದರೆ, ಮತ್ತಷ್ಟು ಮಂದಿಗೆ ಅದೇ ಉದ್ಯೋಗವಾಗುವ ನಿರೀಕ್ಷೆಯಿದೆ. ಇದೊಂದು ಚೈನ್ ರಿಯಾಕ್ಷನ್ ಉದ್ಯೋಗ ವ್ಯವಸ್ಥೆ ಎಂದು ಬೊಗಳೆ ಬ್ಯುರೋ ಕಂಡುಕೊಂಡಿದೆ. ಇದರಿಂದಾಗಿ ಬೊಗಳೂರು ದೇಶದಲ್ಲಿ ಶೇ.80ರಷ್ಟು ನಿರುದ್ಯೋಗ ನಿವಾರಣೆಯಾಗಿದೆ ಎಂದು ಬೊಗಳೆ ಆನ್ಲೈನ್ ಆವೃತ್ತಿಯು ವರದ್ದಿ ಮಾಡಿದೆ.<br />
<br />
ಹಾಗಿದ್ದರೆ, ಉಳಿದ ಶೇ.20 ಮಂದಿಯದು ಗತಿ ಏನು ಎಂಬುದರ ಕುರಿತಾಗಿಯೂ ಸಂಚೋದನೆ ನಡೆಸಲಾಗಿದೆ. ವಿರೋಧಿ ಪಕ್ಷದವರು ಲೆಕ್ಕ ಕೊಡಿ ಚಳವಳಿ ಮೂಲಕ ಉದ್ಯೋಗ ನೇಮಕಾತಿಗೆ ಒತ್ತು ನೀಡಿದ್ದರೆ, ಆಡಳಿತ ಪಕ್ಷದವರು ಲೆಕ್ಕ ತಗೊಳಿ ಎಂಬ ಚಳುವಳಿಯನ್ನು ಹಮ್ಮಿಕೊಂಡು, ನಿರುದ್ಯೋಗ ನಿವಾರಣೆಗೆ ಪಣ ತೊಟ್ಟಿರುವುದು ಬಟಾ ಬಯಲಾಗಿದೆ. ಇದ್ದ ಬದ್ದ ಫೈಲುಗಳನ್ನೆಲ್ಲಾ ಹುಡುಕಿ, ಜಾಲಾಡಿ, ಲೆಕ್ಕ ತಗೊಳಿ ಎನ್ನುತ್ತಾ, ಪಾಯಿಂಟ್ ಟು ಪಾಯಿಂಟ್ ಲೆಕ್ಕ ಕೊಡುವ ಕಾರ್ಯಕ್ಕೆ ಭಾರೀ ಸಂಖ್ಯೆಯಲ್ಲಿ ನೇಮಕಾತಿ ನಡೆದಿದ್ದು, ಸಾಕಷ್ಟು ಮಂದಿ ಉದ್ಯೋಗಿಗಳಾಗಿ ಸಂಭ್ರಮಿಸಿದ್ದಾರೆ.<br />
<br />
ಎರಡೂ ಪಕ್ಷಗಳ ಈ ನೇಮಕಾತಿಯಿಂದಾಗಿ ವಲಸೆ ಕಾರ್ಮಿಕರು ಕೂಡ, ತಮಗೆ ಗೊತ್ತಿಲ್ಲದ ಲೆಕ್ಕವನ್ನೂ ಕೂಡಿಸಿ, ಕಳೆಯಲು ಪಣ ತೊಟ್ಟು, ತೊಟ್ಟು... ಕೊನೆಗೆ ಉದ್ಯೋಗ ಪಡೆದುಕೊಂಡು ಕೊರೊನಾ ಸಂಕಷ್ಟ ಕಾಲದಲ್ಲಿ ಅಚ್ಚರಿ ಮೂಡಿಸಿದ್ದಾರೆ ಎಂದು ಪತ್ತೆಯಾಗಿದೆ.Anveshihttp://www.blogger.com/profile/04356401566159202899noreply@blogger.com4tag:blogger.com,1999:blog-25346734.post-62631893505709967972020-07-18T09:44:00.000+05:302020-07-18T09:44:05.927+05:30BARKing: ರದ್ದಿ ರಿಸರ್ಚ್ ಪೇಪರುಗಳಿಂದ ಕಾಗೆ ಹಾರಿಸಿದವನಿಗೆ ಭಾರದ ರತ್ನ ಪುರಸ್ಕಾರ<div class="separator" style="clear: both; text-align: center;">
<a href="https://blogger.googleusercontent.com/img/b/R29vZ2xl/AVvXsEgSTGgJKBKrrug1ArgBDxuLnrbr04tMPDxfAxBHp3_5YYVa4XzLbX0KwbcT2eHHwX9gTatIZBazE4jOIZawGgn3HQK6Un81W0TgS78yNyt_1HI86Er5JcvXlw94yL-FKwRrrT5TLA/s1600/Drone.jpg" imageanchor="1" style="margin-left: 1em; margin-right: 1em;"><img border="0" data-original-height="300" data-original-width="520" height="230" src="https://blogger.googleusercontent.com/img/b/R29vZ2xl/AVvXsEgSTGgJKBKrrug1ArgBDxuLnrbr04tMPDxfAxBHp3_5YYVa4XzLbX0KwbcT2eHHwX9gTatIZBazE4jOIZawGgn3HQK6Un81W0TgS78yNyt_1HI86Er5JcvXlw94yL-FKwRrrT5TLA/s400/Drone.jpg" width="400"></a></div>
<b>[ಪಕ್ಕಾ ಬೊಗಳೆ ಬ್ಯುರೋದಿಂದ]<br>ಬೊಗಳೂರು:</b> ಸತ್ಯ ವಾಕ್ಯಕೆ ನೆಚ್ಚಿ ನಡೆದರೆ ಮೆಚ್ಚನಾ ಪರಮಾತ್ಮನು ಎಂಬ ಧ್ಯೇಯ ವಾಕ್ಯವಿರುವ ಬೊಗಳೆ ಬ್ಯುರೋಗೇ ಕಾಂಪಿಟಿಷನ್ ನೀಡಿ, ಪ್ರೊಪೆಲ್ಲರುಗಳುಳ್ಳ ಬಿಳಿ ಕಾಗೆ ಹಾರಿಸುತ್ತಲೇ ಜಗದ್ವಿಖ್ಯಾತಿ ಗಳಿಸಿದ ಕ್ಲಾನ್ ಪ್ರತಾಪಿ ಎಮ್ಮೆನ್ಗೆ ಭಾರತ ಸರ್ಕಾರವು ಭಾರದ ರತ್ನ ಪ್ರಶಸ್ತಿ ನೀಡಿ ಪುರಸ್ಕರಿಸಲು ನಿರ್ಧರಿಸಿದೆ.<br><br>ಈ ಕುರಿತು ವರದ್ದಿಗಾರರೊಂದಿಗೆ ಮಾತನಾಡಿದ, ದೇಶದ ಹಾಗೂ ಜಗತ್ತಿನ ಅಜ್ಞಾನ ಮತ್ತು ತಂತ್ರಅಜ್ಞಾನ ಸಚಿವರು, ಕೇವಲ ಒಂದು ಪುಟ್ಟ ಕಾಗೆಯ ಮೇಲೆ 360 ಕಿಲೋ ಪೇಲೋಡ್ ಹೆಸರಿನ ಮೂಟೆಗಳನ್ನಿಟ್ಟು ಎತ್ತಿದ್ದೇ ಭಾರದ ರತ್ನ ಪಡೆಯಲು ಅರ್ಹವೆಂದು ಹೇಳಿದರು.<br><br>ಕೇವಲ ಎರಡು ವರ್ಷಗಳಲ್ಲಿ 7 ಸಾವಿರ ರಿಸರ್ಚ್ ಪೇಪರುಗಳನ್ನು ಓದುವುದು ನಮ್ಮಂತಹಾ, ಈಗಿನ ಯುವ ಪೀಳಿಗೆಯ ಅಜ್ಞಾನಿಗಳಿಗೆ ಅತ್ಯಂತ ಸುಲಭವಾದ ವಿಚಾರವಲ್ಲ. ಮೊಬೈಲ್ನಲ್ಲೇ ಈ ಪುಟಗಳು ಕಾಣಸಿಗುತ್ತವೆ. ಒಮ್ಮೆ ಕಣ್ಣು ಮಿಟುಕಿಸಿದಾಗ ಅಥವಾ ಒಮ್ಮೆ ಬೆರಳು ಟಚ್ ಮಾಡಿದ ತಕ್ಷಣ, ಮುಂದಿನ ಪುಟಕ್ಕೆ ಹೋಗುವುದು ಅತ್ಯಂತ ಸುಲಭ. ಏಕಕಾಲದಲ್ಲಿ ಹತ್ತು ಬಾರಿ ಟ್ಯಾಪ್ ಮಾಡಿದ ತಕ್ಷಣ ಒಂದಿಡೀ ರಿಸರ್ಚ್ ಪೇಪರನ್ನು ಗಂಟೆಯೊಳಗೆ 'ನೋಡಿ' ಮುಗಿಸುವುದು ಕಷ್ಟವೇನಲ್ಲ ಎಂದು ಕ್ಲಾನ್ ಪ್ರತಾಪಿ ಜಗತ್ತಿಗೇ ತೋರಿಸಿಕೊಟ್ಟಿದ್ದಾರೆ.<br><br>ಇದೀಗ ಈ ರಿಸರ್ಚ್ ಪೇಪರ್ಗಳನ್ನೇ ಒಂದೊಂದಾಗಿ ಕತ್ತರಿಸಿ, ಅದನ್ನು ರದ್ದಿಯನ್ನಾಗಿ ಪರಿವರ್ತಿಸಿ, ಈ ರದ್ದಿಯಿಂದಲೇ ತಾವು ಹೆಲಿಕಾಪ್ಟರ್, ಕಾಗದದ ವಿಮಾನ ಮುಂತಾದ ಕಾಗೆ ಡ್ರೋನುಗಳನ್ನು ಹಾರಿಸಿ ಅವರು, ಇತಿಹಾಸ ಸೃಷ್ಟಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಭಾರದ ರತ್ನನ ಪ್ರಶಸ್ತಿಯನ್ನು ನೀಡುವುದು ಅನಿವಾರ್ಯವಾಯಿತು ಎಂದು ಬೊಗಳೂರಿನ ಅಜ್ಞಾನ ಮತ್ತು ತಂತ್ರಾಜ್ಞಾನ ಮಂತ್ರಿಗಳು ತಿಳಿಸಿದ್ದಾರೆ.<br><br>ಕೇವಲ ಎರಡು ವರ್ಷಗಳಲ್ಲಿ ಮುನ್ನೂರರುವತ್ತೈದು ಉನ್ನತ ಶಿಕ್ಷಣ ಸಂಸ್ಥೆಗಳನ್ನು ಸಂಪರ್ಕಿಸಿ, ಅಲ್ಲಿನ ವಿದ್ಯಾರ್ಥಿಗಳಿಗೆ ಉಪನ್ಯಾಸ ಮಾಡುವುದೇನೂ ಈಗಿನ ಕಾಲದಲ್ಲಿ ಸುಲಭದ ವಿಷಯವಲ್ಲ. ಸದಾ ಮೊಬೈಲ್-ಪ್ರೇಮಿಗಳಾಗಿರುವ ವಿದ್ಯಾರ್ಥಿಗಳನ್ನು ಒಟ್ಟು ಸೇರಿಸಿ ಒಂದು ಪೀರಿಯಡ್ ಪಾಠ ಮಾಡುವುದೇ ಕಷ್ಟ ಸಾಧ್ಯವಾಗಿರುವಾಗ, ಕ್ಲೋನ್ ಪ್ರತಾಪಿಯು ಈ ಪರಿಯಾಗಿ ಉಪನ್ಯಾಸ ಮಾಡಿರುವುದೆಂದರೆ, ಯಾರೂ ಮುರಿಯಲಾರದ ದಾಖಲೆ ಎಂದು ಬೊಗಳೂರು ಸರ್ಕಾರವು ಗುರುತಿಸಿದೆ ಎಂದು ಅಜ್ಞಾನ ಮಂತ್ರಿಗಳು ಹೇಳಿದ್ದಾರೆ.<br><br>ಈ ಕುರಿತು ಬಿಟಿವಿ ಅಂದರೆ ಬೊಗಳೂರು ಟಿವಿಗೆ ನೀಡಿದ ವಿಶೇಷ ಸಂದರ್ಶನದಲ್ಲಿ ಮಾತನಾಡಿದ ಕ್ಲೋನ್ ಪ್ರತಾಪಿ, ಮೂರು ಗಂಟೆಗಳ ಕಾಲ ಬಂದೆರಗಿದ ಎಲ್ಲ ಪ್ರಶ್ನೆಗಳಿಗೂ ಒಂದೇ ಮಾತಿನಲ್ಲಿ ಉತ್ತರಿಸಿ, ಇಡೀ ಲೋಕದ ಬಾಯಿ ಮುಚ್ಚಿಸಿದ್ದರು. ಜಗತ್ತಿನ ಜನರು ತತ್ತರಿಸಿದ ಉತ್ತರವೇನು ಎಂದು ಸಂಚೋದನೆ ನಡೆಸಿದಾಗ ತಿಳಿದುಬಂದ ಅಂಶವೆಂದರೆ, ಆ ಉತ್ತರ ಹೀಗಿತ್ತು: "ಹೌದು ಸರ್, ಇರಬಹುದು ಸರ್, ಆದ್ರೆ ಅವೆಲ್ಲ ಪ್ರಿಲಿಮನರಿ ಸ್ಟೇಜ್ನವು ಸರ್, ಅವರ ಪ್ರಶ್ನೆಯೇ ಸರಿ ಇಲ್ಲ ಸರ್, ಟೆಕ್ನಿಕಲ್ ಎಲ್ಲ ಇಲ್ಲಿ ಬೇಡ ಸರ್, ಇಮೇಲ್ ಮಾಡ್ತೇನೆ ಸರ್, ಒಪ್ತೀನಿ ಸರ್, ಅವೆಲ್ಲ ಕಾನ್ಫಿಡೆನ್ಷಿಯಲ್, ಹೇಳಕ್ಕಾಗಲ್ಲಾ ಸರ್, ಮುಂದೆ ಮೇಲ್ ಮಾಡ್ತೀನಿ ಸರ್, ಹಾಗೆ ಹೇಳೇ ಇಲ್ಲ ಸರ್ !"Anveshihttp://www.blogger.com/profile/04356401566159202899noreply@blogger.com2tag:blogger.com,1999:blog-25346734.post-29154816610433298022020-07-17T14:04:00.001+05:302020-07-17T14:04:43.297+05:30ಬೊಗಳೆ ವಿಶೇಷ | ವೈರಸ್ ಸಂಚಾರ ನಿಷೇಧ: ಅಕ್ರಮನೇ ಮದ್ಯ ಯಾಕೆ ವಿತರಿಸಬೇಕು?<div class="separator" style="clear: both; text-align: center;">
<img border="0" data-original-height="570" data-original-width="800" height="285" src="https://blogger.googleusercontent.com/img/b/R29vZ2xl/AVvXsEiZ9ICMV2EfahKheOhEQDx6jxvbfdos4lDiSUzYLNP21iFuuPZh2Fg7OKqonUCnhvc6t3HpmHROp7MMVWUc9Nlj17JQEY83LevuKTGcIaRgNaUTNqzeL1EoM4geP2eY50rzUujRfg/s400/Drinks.jpg" width="400" /></div>
<span id="goog_1400581458"></span><span id="goog_1400581459"></span><br />
<br />
<div style="text-align: center;">
[ಬೊಗಳೆ ಅಕ್ರಮ ವಿತರಣಾ ಬ್ಯುರೋದಿಂದ]</div>
<b>ಬೊಗಳೂರು: </b>ಯಾವಾಗಲೂ ಮದ್ಯ, ಸ್ಯಾನಿಟೈಸರ್, ಪಿಪಿಇ ಕಿಟ್, ಅಕ್ಕಿ, <a href="https://www.prajavani.net/district/chikkaballapur/bagepalli-illegal-sale-of-liquor-across-taluks-745388.html">ಇತ್ಯಾದಿಗಳನ್ನು ಅಕ್ರಮನೇ ಯಾಕೆ ವಿತರಿಸಬೇಕು</a> ಎಂಬ ಬಗ್ಗೆ ಬೊಗಳೂರು ಏಕಸದಸ್ಯ ಬ್ಯುರೋದ ಸಮಸ್ತ ಸಿಬ್ಬಂದಿಗಳು ಇದೀಗ ತನಿಖೆ ಆರಂಭಿಸಿದಾಗ, ಚೋದ್ಯದ ಸಂಗತಿಗಳು ಬೆಳಕಿಗೆ ಬಂದಿವೆ.<br />
<br />
ಕೋವಿಡ್ ಸಂಕಷ್ಟದ ಸಂದರ್ಭದ ಈ ದಿನಗಳಲ್ಲಿ, ಲಾಕ್ಡೌನ್ ಮಾಡಲಾಗಿದೆ. ಇದು ಲೋಕ ಡೌನೋ ಅಥವಾ ಲಾಕುಡೌನೋ ಎಂಬುದು ಕೆಲವೆಡೆ ಗೊತ್ತಾಗದಂತಹಾ ಪರಿಸ್ಥಿತಿಯಿದೆ. ವಿಶೇಷವಾಗಿ ಬೊಗಳೂರಿನಲ್ಲಿ ಜನರು ಬೇಕಾಬಿಟ್ಟಿಯಾಗಿ ಓಡಾಡುತ್ತಿರುವ ಹಿನ್ನೆಲೆಯಲ್ಲಿ ಈ ಶಂಕೆ ಎದ್ದಿದೆ ಎಂದು ಅನ್ವೇಷಿ ನೇತೃತ್ವದ ಏಕಸದಸ್ಯ ಬ್ಯುರೋ ಕಂಡುಕೊಂಡಿದೆ.<br />
<br />
ವಿಶೇಷವಾಗಿ ರಾಜ್ಯದ ಗಡಿ ಭಾಗದಲ್ಲಿರುವ ಪ್ರದೇಶಗಳಲ್ಲಿ ಗುಡಿಸಲು, ಶೆಡ್ಗಳು, ಶಾಲೆಗಳು, ಮದ್ಯದಂಗಡಿಗಳು - ಇತ್ಯಾದಿಗಳೆಲ್ಲವೂ ಲಾಕ್ಡೌನ್ನಿಂದಾಗಿ ಕಂಗೆಟ್ಟು ಬೆಂದು, ಬಸವಳಿದು ಹೋಗಿವೆ.<br />
<br />
ಇದಕ್ಕೆಲ್ಲಾ ರಕ್ಕಸ, ಹೆಮ್ಮಾರಿ, ಭೂತ, ರಕ್ತಪಿಪಾಸು, ಗಡಗಡ ನಡುಗಿಸುವ ರಾಕ್ಷಸ, ಅಂತಕ, ಮಾರಣಾಂತಿಕ, ಕ್ರೂರಿ, ನಿಗೂಢ, ರಹಸ್ಯ ಪಿಶಾಚಿ - ಎಂದೆಲ್ಲಾ ಟಿವಿ ಚಾನೆಲುಗಳಿಂದ ಹೊಗಳಿಸಿಕೊಳ್ಳುತ್ತಿರುವ ಕೊರೊನಾ ವೈರಸ್ ಕಾರಣ. ವಿಷಯ ಏನೆಂದರೆ, ಈ ಪಾಳು ಬಿದ್ದಿರುವ ತಾಣಗಳನ್ನೇ ಐಷಾರಾಮಿ ಬಾರ್ ಆ್ಯಂಡ್ ರೆಸ್ಟೋರೆಂಟ್ ಆಗಿ ಪರಿವರ್ತಿಸಿದರೆ, ಊರು ಕೂಡ ಅಭಿವೃದ್ಧಿಯಾದಂತೆ ಕಾಣಿಸುತ್ತದೆ. ಜನ ಸಂಚಾರ ಹೆಚ್ಚಾಗಿ, ಇದೊಂದು ಪ್ರವಾಸಿ ತಾಣವಾಗಿ ರೂಪುಗೊಳ್ಳಬಹುದು ಎಂದು ಸ್ಥಳೀಯ ಅ-ಧಿಕ್ಕಾರಿಗಳು ನಿರ್ಧಾರ ಕೈಗೊಂಡಿದ್ದಾರೆ. ಹೀಗಾಗಿ ಲಾಕ್ಡೌನ್ ಇದ್ದರೂ ಊರೂರು ಉದ್ಧಾರವಾಗುವುದಕ್ಕೆ ಯಾವುದೇ ಅಭ್ಯಂತರಗಳನ್ನು ಸರ್ಕಾರವು ಆರಂಭದಲ್ಲೇ ನಿರ್ಬಂಧ ತೆರವುಗೊಳಿಸುವ ಮೂಲಕ ಚಾಲನೆ ನೀಡಿತ್ತು ಎಂಬ ಅಂಶವೂ ಈಗಾಗಲೇ ಎಲ್ಲರಿಗೂ ತಿಳಿದಿರುವ ರಹಸ್ಯವಾಗಿ ಬಯಲಾಗಿದೆ.<br />
<br />
ಊರು ಉದ್ಧರಾವಾಗುವ ಕಾರಣದಿಂದಲೇ, ಎಲ್ಲವನ್ನೂ ಅಕ್ರಮನೇ ಪೂರೈಸಬೇಕೆಂದು ನಿರ್ಧಾರ ಕೈಗೊಳ್ಳಲಾಗಿದೆ ಎಂದು ಬೊಗಳೆ ಬ್ಯುರೋಗೆ ನಂಬಲನರ್ಹ ಮೂಲಗಳು ಸ್ಪಷ್ಟವಾಗಿ ಹೇಳಿರುವುದಾಗಿ ವರದ್ದಿಯಾಗಿದೆ ಎಂದು ತಿಳಿದುಬಂದಿರುವುದಾಗಿ ಹೇಳಲಾಗಿದೆಯೆಂದು ಉಲ್ಲೇಖಿಸಲಾಗಿದೆ.<br />
<br />
ಇದೀಗ ವೈರಸ್ ನಿಯಂತ್ರಣಕ್ಕೂ ಕಡಿವಾಣ ಹಾಕಲು ಇದೇ ಸಂದರ್ಭದಲ್ಲಿ ನಿರ್ಣಯ ಕೈಗೊಳ್ಳುವ ಮುನ್ನವೇ ಅದು ಕೂಡ ಸೋರಿಕೆಯಾಗಿದೆ ಎಂಬ ಮತ್ತೊಂದು ಬ್ರೇಕ್ ಆಗಿರುವ ಸುದ್ದಿಯೂ ಬೊಗಳೂರಿಗೆ ಲಭ್ಯವಾಗಿದೆ.<br />
<br />
ಓಡಾಟ ನಿಲ್ಲಿಸಿ, ಮನೆಯೊಳಗಿರಿ ಅಂತೆಲ್ಲಾ ಜನರಿಗೆ ತಿಳಿಹೇಳಿ ಹೇಳಿ ಬೆಂದು ಬಸವಳಿದ ಬೊಗಳೂರು ಸರ್ಕಾರವು, ಕೊರೊನಾ ವೈರಸ್ಸಿಗೇ ಸಂಚಾರ ನಿಷೇಧ ಹೇರಲು ನಿರ್ಧರಿಸಿದೆ. ಇನ್ನು ಕೆಲವೇ ಕ್ಷಣಗಳಲ್ಲಿ ಈ ನಿರ್ಧಾರ ಹೊರಬೀಳಲಿದೆ. ಆದರೂ, ಈ ನಿರ್ಧಾರ ಹೊರಬೀಳುವ ಮುನ್ನವೇ, ನಿರ್ಧಾರವೂ ಸೋರಿಕೆಯಾಗಿರುವುದರಿಂದ, ಜನರು ಬೇಕಾಬಿಟ್ಟಿಯಾಗಿ ಓಡಾಡತೊಡಗಿದ್ದಾರೆ ಎಂದು ಪತ್ತೆಯಾಗಿದೆ.Anveshihttp://www.blogger.com/profile/04356401566159202899noreply@blogger.com2tag:blogger.com,1999:blog-25346734.post-59808540959629835432020-07-08T09:00:00.000+05:302020-07-08T09:00:00.956+05:30ಬೊಗಳೆ BarKing: ಎಸ್ಸೆಸ್ಸೆಲ್ಸಿ ಮಾರ್ಕ್ಗೆ ಅಡ್ಡಿಯಾಯಿತು ಮಾಸ್ಕ್!<div dir="ltr" style="text-align: left;" trbidi="on">
<div class="separator" style="clear: both; text-align: center;">
<a href="https://blogger.googleusercontent.com/img/b/R29vZ2xl/AVvXsEhd_f6BkUhMo-ql7V9gFLVrBOlyWBWTwLdrx2zmSZP63T7wRu5KNVt-PGbqJLyWNn9rVC-DOjBcTZWkEjSa0t4Op1Kd-MSKhhQqEhtpe7a_XqXvwGCjLpG3Rf_Dj70RUlPRuX7Ozw/s1600/Mask1.jpg" imageanchor="1" style="margin-left: 1em; margin-right: 1em;"><img border="0" data-original-height="512" data-original-width="916" height="178" src="https://blogger.googleusercontent.com/img/b/R29vZ2xl/AVvXsEhd_f6BkUhMo-ql7V9gFLVrBOlyWBWTwLdrx2zmSZP63T7wRu5KNVt-PGbqJLyWNn9rVC-DOjBcTZWkEjSa0t4Op1Kd-MSKhhQqEhtpe7a_XqXvwGCjLpG3Rf_Dj70RUlPRuX7Ozw/s320/Mask1.jpg" width="320" /></a></div>
<div class="separator" style="clear: both; text-align: center;">
</div>
<div class="separator" style="clear: both; text-align: center;">
</div>
<div style="text-align: center;">
<b>[ಮಾಸ್ಕ್-ರಹಿತ ಬ್ಯುರೋದಿಂದ]</b></div>
<b>ಬೊಗಳೂರು:</b> ಮಾಸ್ಕ್ ಡೇ ವಿರುದ್ಧ ಆಂಟಿ ಮಾಸ್ಕ್ ಡೇ ಆಚರಿಸಿ ಪ್ರತಿಭಟನೆ ನಡೆಸಿರುವ ವಿರೋಧೀ ಪಕ್ಷಗಳ ಬಗ್ಗೆ ಸುದ್ದಿ ಕೇಳಿದ್ದೇವೆ. ಆದರೆ, ಇತ್ತೀಚೆಗೆ ನಡೆದ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಪರೀಕ್ಷೆ ಬರೆಯಲು, ಮಾರ್ಕ್ ಜಾಸ್ತಿ ತೆಗೆಯಲು ಈ ಮಾಸ್ಕ್ ತೊಡಕಾದ ಘಟನೆಯನ್ನು ಅನ್ವೇಷಿ ನೇತೃತ್ವದ ಬೊಗಳೂರು ಏಕ ಸದಸ್ಯ ಬ್ಯುರೋದ ಸಮಸ್ತ ಸಿಬ್ಬಂದಿ ಪತ್ತೆ ಮಾಡಿದ್ದಾರೆ.<br />
<br />
ಎಸ್ಸೆಸ್ಸೆಲ್ಸಿ ಪರೀಕ್ಷೆ ನಡೆಯುತ್ತಿದ್ದ ಸ್ಥಳಕ್ಕೆ ಠಳಾಯಿಸಿದ ಬೊಗಳೂರು ವರದ್ದಿಗಾರರು, ಯಾರನ್ನೂ ಗುರುತು ಹಿಡಿಯದೆ ತಬ್ಬಿಬ್ಬಾದರು. ಆದರೂ ಸಾವರಿಸಿಕೊಂಡು, ಕೆಲವೊಂದು ವಿದ್ಯಾರ್ಥಿಗಳನ್ನು ಸಂ-ದರ್ಶನ ನಡೆಸಿದರು.<br />
<br />
ಬೊಗಳೆ ಜೊತೆ ಮಾತನಾಡಿದ, ಜೀವನದಲ್ಲೇ ಮೊದಲ ಬಾರಿ ಎಸ್ಸೆಸ್ಸೆಲ್ಸಿ ಪರೀಕ್ಷೆ ಎದುರಿಸಲು ಬಂದಿದ್ದ ವಿದ್ಯಾರ್ಥಿನಿ ಶಂಕಿತಾ ಚಟ್ಟರ್ಜಿ, ಸಾರ್, ಮಾಸ್ಕ್ ಇದೆ, ಆದರೆ ಮಾರ್ಕ್ ಇಲ್ಲ ಎಂದರು. ಈ ಕುರಿತು ವಿವರಣೆ ಕೇಳಿದಾಗ, ಸಮವಸ್ತ್ರ ಧರಿಸಿ ವಿಚಿತ್ರ ಬಣ್ಣದ ಮಾಸ್ಕ್ ಹಾಕಿಕೊಳ್ಳಬೇಕಿತ್ತು. ಮ್ಯಾಚಿಂಗ್ ಮಾಸ್ಕ್ ಬೇಕು ಅಂತ ಎಷ್ಟೇ ಹಠ ಹಿಡಿದರೂ ಕೊಡಿಸಿಲ್ಲ. ಹೀಗಾಗಿ ತಲೆನೋವು ಮತ್ತು ಖಿನ್ನತೆಯಿಂದಾಗಿ, ಮುಖದ ಮೇಲಿರಬೇಕಾದ ಮಾಸ್ಕು, ತಲೆಯೊಳಗೆ ಹೊಕ್ಕುಬಿಟ್ಟಿತ್ತು. ಹೀಗಾಗಿ ಓದಿದ್ದಕ್ಕೆಲ್ಲಾ ಮಾಸ್ಕ್ ಹಾಕಿಕೊಂಡಾಯಿತು. ಯಾವುದೂ ಕಾಣಿಸಲಿಲ್ಲ ಎಂದುತ್ತರಿಸಿ ತತ್ತರಿಸಿದರು.<br />
<br />
ಶಂಕಿತ್ ಬ್ಯಾನ್ಅರ್ಜಿ ಅವರು ತಮ್ಮ ಎಸ್ಸೆಸ್ಸೆಲ್ಸಿ ಪರೀಕ್ಷೆಯನ್ನು ನೆನಪಿಸಿಕೊಂಡೇ ಖಿನ್ನರಾದರು. ಈ ಖಿನ್ನತೆಗೆ ಕಾರಣ ಕೇಳಿದಾಗ, ಸಾರ್, ನನ್ನ ಸ್ನೇಹಿತೆಯರೆಲ್ಲರೂ ಮಾಸ್ಕ್ ಧರಿಸಿದ್ರು. ನನಗೆ ಅದರಲ್ಲಿದ್ದ ಆಪ್ತ ಸ್ನೇಹಿತೆಯ ಮುಖ ನೋಡಲೇ ಸಾಧ್ಯವಾಗಲಿಲ್ಲ. ಯಾಕೆಂದರೆ ಗುರುತೇ ಆಗಲಿಲ್ಲ. ಈ ಮಾಸ್ಕ್ನ ಅವಾಂತರ ಹೇಳತೀರದು. ಅವಳ ಮುಖ ನೋಡದಿದ್ದರೆ ನನಗೆ ಓದಿದ್ದು ಯಾವುದೂ ನೆನಪಿಗೆ ಬರುತ್ತಿರಲಿಲ್ಲ. ಓದುವ ದಿನಗಳಲ್ಲೂ ಸದಾ ಕಾಲ ಅವಳದ್ದೇ ನೆನಪು ಎಂದುತ್ತರಿಸಿದರು.<br />
<br />
ಮಾಸ್ಕೇಂದ್ರ ಎಂಬ ವಿದ್ಯಾರ್ಥಿಯ ಚಿಂತೆಯೇ ಬೇರೆಯದು. "ಸಾರ್, ನಮ್ಮ ಕೈಗೆ ಸ್ವಲ್ಪೇ ಸ್ವಲ್ಪ ಸ್ಯಾನಿಟೈಝರ್ ಹಾಕಿದರು. ಅದು ಕೈಗಳಿಗೇ ಸಾಲುತ್ತಿರಲಿಲ್ಲ" ಎಂದು ಹೇಳಿ ತಮ್ಮ ಸಂಕಷ್ಟ ತೋಡಿಕೊಂಡರು. "ಯಾಕೆ" ಎಂದು ಬೆಪ್ಪು ತಕ್ಕಡಿಯಂತೆ ಕೇಳಿದ ವರದ್ದಿಗಾರರೆದುರು ತಮ್ಮ ಸಂಕಷ್ಟ ತೋಡಿಕೊಂಡ ಅವರು, "ಅಲ್ಲಾ ಸಾರ್, ಈ ಸರ್ಕಾರದೋರು ಎಂಆರ್ಪಿ ಶಾಪುಗಳನ್ನು ತೆರೆದಿಟ್ಟಿದ್ದಾರೆ, ಅಲ್ಲಿಂದ ತಂದಿದ್ದ ಲಿಕ್ಕರೆಲ್ಲವನ್ನೂ ನಮ್ಮಪ್ಪನೇ ಕುಡಿದುಬಿಟ್ರು. ಸ್ಯಾನಿಟೈಝರಲ್ಲೂ ಆಲ್ಕೋಹಾಲಿರುವುದರಿಂದ, ಪರೀಕ್ಷಾ ಹಾಲ್ಗೆ ಹೋಗೋ ಮೊದ್ಲು ಆಲ್ಕೋಹಾಲ್ ಬೇಕಿತ್ತು. ಅದಿದ್ದರಷ್ಟೇ ಬರೆಯುವ ಕಿಕ್ ದೊರಕುವುದು. ಆದರೆ, ಈ ಮೇಷ್ಟ್ರೇ ಎಲ್ಲ ಸ್ಯಾನಿಟೈಝರ್ ಖಾಲಿ ಮಾಡಿ, ನಮ್ಮ ಕೈ ಬೆರಳುಗಳಿಗೆ ಆಲ್ಕೋಹಾಲ್-ರಹಿತವಾದ, ನೀರನ್ನು ಕಲಬೆರಕೆ ಮಾಡಿದ್ದ ಸ್ಯಾನಿಟೈಝರನ್ನು ಸಿಂಪಡಿಸುತ್ತಿದ್ದರು. ಅದು ಕೈಗಳಿಗೇ ಸಾಲುತ್ತಿರಲಿಲ್ಲ, ಇನ್ನು ಹೊಟ್ಟೆಗೆಲ್ಲಿ?" ಎಂದು ಬಾಯಿ ಚಪ್ಪರಿಸುತ್ತಾ ಅಲವತ್ತುಕೊಂಡು ಮುಂದೆ ಸಾಗಿದರು.<br />
<br />
ಕೋವಿಡಾಕ್ಷಿ ಈ ಕುರಿತು ತಮ್ಮ ಅಭಿಪ್ರಾಯ ಮುಂದಿಟ್ಟರು. ನಾನು ಲಿಪ್-ಸ್ಟಿಕ್ ಹಾಕಿಕೊಂಡಿದ್ದೆಲ್ಲ ಮಾಸ್ಕ್ನಿಂದಾಗಿ ಮರೆಯಾಯಿತು ಎಂದು ಶುರುಹಚ್ಚಿಕೊಂಡ ಆಕೆ, ಪರೀಕ್ಷಾ ಹಾಲ್ಗೆ ಹೋಗುವ ಮುನ್ನ ಗೆಳೆಯರೊಂದಿಗೆ ಮಾತನಾಡುವಾಗ ಆತ ಹಲ್ಕಿರಿಯುತ್ತಿದ್ದನೋ, ಅಳುತ್ತಿದ್ದನೋ, ನಗುತ್ತಿದ್ದನೋ ಒಂದೂ ತಿಳಿಯದು. ಆತನ ಮುಖಭಾವ ಗೊತ್ತಾಗದೆ ಮತ್ತಷ್ಟು ಗೊಂದಲಕ್ಕೀಡಾಗಿಬಿಟ್ಟೆ. ಈ ಗೊಂದಲವೇ ತಲೆಯಲ್ಲಿ ಹುಳದಂತೆ ಕೊರೆಯುತ್ತಿತ್ತು. ಹೀಗಾಗಿ, ಮಾಸ್ಕ್ನಿಂದಾಗಿ ಮಾರ್ಕು ಬರದಂತಾಯಿತು ಎಂದು ತನ್ನ ಪಾಡಿಗೆ ಮಾಸ್ಕನ್ನು ಬಿಸಾಕುತ್ತಾ ಬಿರಬಿರನೇ ಮುಂದೆ ಸಾಗಿದರು.</div>
Anveshihttp://www.blogger.com/profile/04356401566159202899noreply@blogger.com2tag:blogger.com,1999:blog-25346734.post-81370801667377151512020-07-02T13:17:00.000+05:302020-07-02T13:21:02.472+05:30ಬೊಗಳೆ Bar-King News: ಕೊರೊನಾವನ್ನು ಉಸಿರುಗಟ್ಟಿ ಸಾಯಿಸುವ ತಂತ್ರ!<div dir="ltr" style="text-align: left;" trbidi="on">
<div class="separator" style="clear: both; text-align: center;">
<img border="0" data-original-height="442" data-original-width="753" height="233" src="https://blogger.googleusercontent.com/img/b/R29vZ2xl/AVvXsEgNwms_2SG_CK_99oLUnb29LHHxWW7VhAuJaY8j1cfuumgqr7iwkO0_aDKEdF79t5Vef4cZ0tKHko2PQJZ0dT1aLlEPFiGvOUWJQtxy5noMulbOj_MKjcBGbFfnxU8VhMoOwj8fgA/s400/Kasaragodu+bus.JPG" width="400" /></div>
<div class="separator" style="clear: both; text-align: center;">
</div>
<div style="text-align: center;">
<b><br /></b></div>
<div style="text-align: center;">
<b>[ಕೊರೊನಾ ಶಂಕಿತ ಬ್ಯುರೋದಿಂದ]</b></div>
<b>ಬೊಗಳೂರು: </b>ದೇಶಾದ್ಯಂತ ಇಂದು ಸಂಭ್ರಮ ಸಡಗರ. ಎಲ್ಲೆಲ್ಲೂ ಕೇಸರಿ-ಬಿಳಿ-ಹಸಿರು ಬಾವುಟಗಳು ಕಾಣಿಸುತ್ತಿದ್ದು, ಮಧ್ಯೆ ಮಧ್ಯೆ ಕೈಗಳೂ ಇಣುಕುತ್ತಿದ್ದವು. ಇದಕ್ಕೆ ಕಾರಣವೆಂದರೆ, ಇಂದು ಬೊಗಳೂರಿನ ವಿರೋಧಿ ಪಕ್ಷದ ಮುಖಂಡನ ಕೋರೋನೇಷನ್ (Coronation), ಅಂದರೆ ಪಟ್ಟಾಭಿಷೇಕ ಕಾರ್ಯಕ್ರಮ.<br />
<br />
ಈ ಕಾರ್ಯಕ್ರಮದ ಹೆಸರಿನಲ್ಲೇ ಕೊರೊನಾ ಇರುವುದರಿಂದಾಗಿ, ಈ ಕಾರ್ಯಕ್ರಮಕ್ಕೆ ಎಲ್ಲಿಲ್ಲದ ಮಹತ್ವ. ಬಸ್ಸುಗಳು, ಲಾರಿ, ಬೈಕುಗಳಲ್ಲಿ ಎಲ್ಲೆಲ್ಲೂ ಭಾರತದ ತ್ರಿವರ್ಣ ಧ್ವಜವನ್ನೇ ಹೋಲುವ ಬಾವುಟಗಳು ಹಾಗೂ ಜನರು ಕೂಡ ಗುಂಪುಗುಂಪಾಗಿ, ಪಟಾಕಿ ಸಿಡಿಸಿ, ಸಿಹಿ ಹಂಚಿಕೊಂಡು, ಕೈಕುಲುಕಿ ಸಂಭ್ರಮಿಸುತ್ತಿದ್ದರು.<br />
<br />
ಇತ್ತೀಚೆಗೆ ವಿರೋಧಿ ಪಕ್ಷಗಳೆಲ್ಲವೂ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸುವಾಗ ಕಂಡುಬಂದ ಪರಿಸ್ಥಿತಿಯೇ ಇಲ್ಲೂ ಕಾಣಿಸುತ್ತಿತ್ತು. ಬಂದ ಅತಿಥಿಗಳೆಲ್ಲರನ್ನೂ ಕೈಕುಲುಕಿ, ಮುಖದ ಮಾಸ್ಕ್ ತೆಗೆದು, ತಾವ್ಯಾರು ಎಂದು ತೋರಿಸಿಕೊಳ್ಳುತ್ತಾ, ಅಂತರ ಕಾಯ್ದುಕೊಂಡೇ ಕೊರೊನಾ ಹಾವಳಿಗೆ ಕಡಿವಾಣ ಹಾಕಲು ಪ್ರಯತ್ನಿಸುತ್ತಿದ್ದರು.<br />
<br />
ಸರ್ಕಾರದ ಸೂಚನೆಯ ಅನುಸಾರವೇ ಎಲ್ಲವನ್ನೂ ಮಾಡಿದರೆ ತಮ್ಮನ್ನು ಯಾರು ವಿರೋಧಿ ಪಕ್ಷಗಳು ಅಂತ ಕರೀತಾರೆ ಎಂದು ಘೋಷಿಸಿದ ಮುಖಂಡರೆಲ್ಲರೂ ಒಟ್ಟು ಸೇರಿ, ಕೊರೊನಾ ಹರಡಲು, ಚೀನಾ ಸೈನಿಕರ ಸಾವಿಗೆ ಪ್ರಧಾನಿಯೇ ಕಾರಣ ಎಂದರು. ತಾಕತ್ತಿದ್ದರೆ ಚೀನಾದ ಆ್ಯಪ್ಗಳನ್ನು ನಿಷೇಧಿಸಿ ಅಂತ ಕೇಳುವವರಿದ್ದರು. ಅಷ್ಟರಲ್ಲಿ, ಈಗಾಗಲೇ ನಿಷೇಧಿಸಲಾಗಿದೆ ಎಂದು ಪಕ್ಕದಲ್ಲಿ ಕೂತವರು ಹೇಳಿದ ಕಾರಣ, ಆ್ಯಪ್ ನಿಷೇಧಿಸಿ ಏನು ಸಾಧನೆ ಮಾಡಿದಂತಾಯಿತು ಎಂದು ಪ್ರಶ್ನಿಸಿದರು.<br />
<br />
ಈ ಕುರಿತು, ಕೊರೋನೇಷನ್ ಕಾರ್ಯಕ್ರಮಕ್ಕೆ ತುಂಬಿ ತುಳುಕಾಡುತ್ತಿದ್ದ ಆಟೋರಿಕ್ಷಾ, ಬಸ್ಸುಗಳಲ್ಲಿ ಹೋಗುತ್ತಿದ್ದರು. ಅದೇ ರೀತಿ, ಇತ್ತೀಚೆಗೆ ಪ್ರಜಾಪ್ರಭುತ್ವದ ಪ್ರಭುಗಳು ತಮ್ಮ ಬರ್ತಡೇ ಪಾರ್ಟಿಯನ್ನೂ ಭರ್ಜರಿಯಾಗಿ ಆಚರಿಸಿಕೊಂಡಿದ್ದರು. ಇದಕ್ಕೆಲ್ಲ ಹೋದವರನ್ನು ಪಕ್ಕಕ್ಕೆ ಕರೆದು ಮಾತನಾಡಿಸಿದಾಗ, ಕೊರೊನಾಗೆ ಯಾರೂ ಕಂಡುಹಿಡಿಯಲಾಗದ ಔಷಧಿಯ ರಹಸ್ಯವೂ, ರಾಜಕೀಯ ಪಕ್ಷಗಳ ಜನಕಲ್ಯಾಣ ಮನಸ್ಥಿತಿಯೂ ಹೊರಬಿತ್ತು. ಅದೆಂದರೆ, ಕೊರೊನಾಗೆ ಯಾವುದೇ ಔಷಧಿಯಿಂದ ಆಗಲಾರದ ಒಂದು ಹೊಸ ಐಡಿಯಾವನ್ನು ಕಂಡುಹಿಡಿಯಲಾಗಿದೆ ಎಂದು ಹೆಸರು ಬಹಿರಂಗಪಡಿಸಲು ಇಚ್ಛಿಸದ ಆ ವ್ಯಕ್ತಿ ಹೇಳಿದರು.<br />
<br />
ಏನು ಹೇಳಿರಲ್ಲಾsssss ಎಂದು ಪದೇ ಪದೇ ಪೀಡಿಸಿದಾಗ <b>ಅವರಿಂದ ಹೊರಬಂದ ಮಾತು:</b><br />
"ಸಭೆ ಸಮಾರಂಭ ನಡೆಸಿದರೆ, ಜನಜಂಗುಳಿ ಸೇರಿದರೆ, ಬಸ್ಸುಗಳಲ್ಲಿಯೂ ಉಸಿರುಕಟ್ಟುವಷ್ಟು ಮಂದಿಯನ್ನು ತುರುಕಿಕೊಂಡು ಹೋದರೆ, ಕೊರೊನಾ ವೈರಸ್ಸೇನು, ಅದರಪ್ಪ ಬಂದರೂ ಈ ಜನದಟ್ಟಣೆಯ ಮಧ್ಯೆ ಉಸಿರುಗಟ್ಟಿ ಸಾಯಬೇಕು. ಕೈಕುಲುಕಿದರೂ ಕೂಡ, ಎರಡು ಕೈಗಳ ಮಧ್ಯೆ ಸಿಲುಕಿಕೊಂಡು ಕೊರೊನಾ ವೈರಸ್ ಸಾಯುತ್ತದೆ. ಮಾಸ್ಕ್ ಇದ್ದರಲ್ಲವೇ ನಮ್ಮ ಹತ್ತಿರಕ್ಕೆ ವೈರಸ್ ಬರುವುದು? ಮಾಸ್ಕ್ ಇರುವಂತೆ ಮಾಡಿ, ಅದು ಬರುವಾಗ ಮೆಲ್ಲನೇ ಕೆಳಗೆ ಸರಿಸಿದಾಗ, ಕೊರೊನಾ ವೈರಸ್ಸಿಗೇ ಗಲಿಬಿಲಿಯಾಗಿ, ಮಾಸ್ಕ್ ಇಲ್ಲದಿರುವುದನ್ನು ನೋಡಿ ಅದುವೇ ಓಡಿಹೋಗುತ್ತದೆ. ಈ ರೀತಿಯಾಗಿ ಕೊರೊನಾ ವಿರುದ್ಧ ನಾವೂ ಸಮರ ಸಾರಿದ್ದೇವೆ" ಎಂದು ಹೇಳಿದ ಅವರು, ಏದುಸಿರು ಬಿಡುತ್ತಾ ಓಡಿದರು.<br />
<br />
ಇಷ್ಟೇ ಅಲ್ಲ, ಆನ್ಲೈನ್ನಲ್ಲಿಯೂ ಲಕ್ಷಾಂತರ ಮಂದಿಯನ್ನು ವಿಡಿಯೊ ಮೂಲಕ ಒಂದುಗೂಡಿಸಿ, ಕೊರೊನಾ ವೈರಸ್ ಆನ್ಲೈನ್ನಲ್ಲೂ ಹರಡದಂತೆ ಕ್ರಮ ಕೈಗೊಂಡಿರುವುದನ್ನು ಏಕಸದಸ್ಯ ಬೊಗಳೆ ಬ್ಯುರೋದ ಸಮಸ್ತ ಸಿಬ್ಬಂದಿಗಳು ವರದ್ದಿ ಮಾಡಿದ್ದಾರೆ. ಆದರೂ, ಕೆಲವರು ಇದನ್ನು ವಿರೋಧಿಸಿ, ಸರ್ಕಾರದ ನಿಯಮಾವಳಿಗಳ ಪ್ರಕಾರವೇ ಅಂತರ ಕಾಯ್ದುಕೊಂಡು, ಇದ್ದಲ್ಲಿಂದಲೇ ಶುಭ ಹಾರೈಸಿ, ಸಂಭ್ರಮಿಸಿದ್ದಾರೆ. ಅಂಥವರ ವಿರುದ್ಧ ಯಾವ ಕ್ರಮ ಕೈಗೊಳ್ಳಲಾಗುತ್ತದೆ ಎಂಬುದು ಯಾರಿಗೂ ತಿಳಿದಿಲ್ಲ.</div>
Anveshihttp://www.blogger.com/profile/04356401566159202899noreply@blogger.com3tag:blogger.com,1999:blog-25346734.post-36242802987876721842020-06-30T08:20:00.003+05:302020-06-30T08:20:50.917+05:30ಬೊಗಳೆ BarKing: Tik-Tak ಭಾರತದೊಳಕ್ಕೆ ಬರಲು ಮತ್ತು ನಿಷೇಧಕ್ಕೆ ಕಾರಣ ಪತ್ತೆ!<div dir="ltr" style="text-align: left;" trbidi="on">
<div class="separator" style="clear: both; text-align: center;">
</div>
<div class="separator" style="clear: both; text-align: center;">
<a href="https://blogger.googleusercontent.com/img/b/R29vZ2xl/AVvXsEiacQAQq57FFmenNfI1G0ANXwAsZ40X9Im0tbNgvFkdK7iCv884FJXYkJXEe02_Gcii4oIQWjU-NURK3Q3IN-a_8iGE_5uizGNIPUZB4mgXc4n5QbI-J-y8Y506lQn9_C4wciDjvg/s1600/Tik-tok.jpg" imageanchor="1" style="margin-left: 1em; margin-right: 1em;"><img border="0" data-original-height="582" data-original-width="712" height="326" src="https://blogger.googleusercontent.com/img/b/R29vZ2xl/AVvXsEiacQAQq57FFmenNfI1G0ANXwAsZ40X9Im0tbNgvFkdK7iCv884FJXYkJXEe02_Gcii4oIQWjU-NURK3Q3IN-a_8iGE_5uizGNIPUZB4mgXc4n5QbI-J-y8Y506lQn9_C4wciDjvg/s400/Tik-tok.jpg" width="400" /></a></div>
<div class="separator" style="clear: both; text-align: center;">
<b><br /></b></div>
<div class="separator" style="clear: both; text-align: center;">
<b>[ಟಿಕ್-ಟಾಕ್ ಬ್ಯುರೋದಿಂದ]</b></div>
<div class="separator" style="clear: both; text-align: left;">
<b>ಬೊಗಳೂರು:</b> ದೇಶದಾದ್ಯಂತ ಟಿಕ್-ಟಾಕ್, ಶೇರ್ಇಟ್, ಕ್ಯಾಮ್ಸ್ಕ್ಯಾನರ್ ಮುಂತಾದ ಚೈನೀಸ್ ಆ್ಯಪ್ಗಳನ್ನು ಸರ್ಕಾರ ನಿಷೇಧಿಸಿದೆ. ಆದರೆ, ನಿಷೇಧಿಸಿದ ಹೊರತಾಗಿಯೂ, ಟಿಕ್-ಟಾಕ್ ಭಾರತದೊಳಕ್ಕೆ ಬಂದಿರುವ ಉದ್ದೇಶವು ಇನ್ನೂ ಮುಂದುವರಿಯುತ್ತಿದೆ ಎಂಬುದನ್ನು ಬೊಗಳೆ ಬ್ಯುರೋ ಪತ್ತೆ ಮಾಡಿದೆ.</div>
<div class="separator" style="clear: both; text-align: left;">
<br /></div>
<div class="separator" style="clear: both; text-align: left;">
ಟಿಕ್-ಟಾಕ್ ನಿಷೇಧದಿಂದಾಗಿ ರೋಸಿ ಹೋಗಿ, ಖಿನ್ನರಾಗಿರುವ ಯುವಜನತೆಯಿಂದಾಗಿ ದೇಶಾದ್ಯಂತ ಆತ್ಮಹತ್ಯೆ ಹೆಚ್ಚಾಗುವ ಸಾಧ್ಯತೆಗಳನ್ನು ಕೂಡ ಪತ್ತೆ ಮಾಡಿರುವ ಬೊಗಳೆ ಬ್ಯುರೋ, ದಿಢೀರ್ ನಿಷೇಧಕ್ಕೆ ಕಾರಣವೇನೆಂದು ಅರಸುತ್ತಾ ಹೊರಟಿರುವುದಾಗಿ ವರದ್ದಿಯಾಗಿದೆ.</div>
<div class="separator" style="clear: both; text-align: left;">
<br /></div>
<div class="separator" style="clear: both; text-align: left;">
ಟಿಕ್-ಟಾಕ್ ಎಂಬ ವೈರಸ್ಸನ್ನು ಚೀನಾವೇ ಹಲವು ವರ್ಷಗಳ ಹಿಂದೆ ಭಾರತದೊಳಕ್ಕೆ ಬಿಟ್ಟಿತ್ತು. ಇದಕ್ಕೆ ಪ್ರಮುಖ ಕಾರಣವೆಂದರೆ, ಎರಡು ವಲಯಗಳಲ್ಲಿ ಭಾರತವು ನಂ.1 ಆಗುತ್ತಿದೆಯೆಂಬ ಆತಂಕ, ಭೀತಿ, ಅಸೂಯೆ ಎಂಬುದು ಈಗ ಪತ್ತೆಯಾಗಿದೆ. ಆ ಎರಡು ಉದ್ದೇಶಗಳು ವಿಫಲವಾದ ಬಳಿಕ, ಇದೀಗ ಹೊಚ್ಚ ಹೊಸದಾಗಿ ಕೊರೊನಾ ವೈರಸ್ಸನ್ನು ಚೀನಾವು ಭಾರತದೊಳಕ್ಕೆ ನುಸುಳಿಸಿದೆ. ಇದಕ್ಕೆ ಎಲ್ಲೆಂದರಲ್ಲಿ ಉಗುಳುವ, ಉಗುಳುವಾಗ ಅಥವಾ ಸೀನುವಾಗ ಮುಖಕ್ಕೆ ಹಾಕಿಕೊಳ್ಳಬೇಕಾದ ಮಾಸ್ಕನ್ನು ಎಲ್ಲೆಲ್ಲೋ ಹಾಕಿಕೊಳ್ಳುವ, ವೈರಸ್ಸು ತಗುಲಿದರೂ ನಮಗೇನೂ ಆಗುವುದಿಲ್ಲ ಎನ್ನುತ್ತಾ ಕೊರೊನಾ ವಾರಿಯರ್ಸ್ ಮೇಲೆ ಹಲ್ಲೆ ನಡೆಸಲು ತರಬೇತಿ ಪಡೆದಿರುವ, ಅಲ್ಲಲ್ಲಿ ಅಡಗಿ ಕುಳಿತುಕೊಂಡು, ಸೀಲ್ ಡೌನ್ ಮಾಡಿದರೂ ಕಾಂಪೌಂಡ್ ಹಾರಿ, ಊರೆಲ್ಲಾ ತಿರುಗಾಡಿ ಕೊರೊನಾ ಪ್ರಸಾದವನ್ನು ಹಂಚುವ ಜನರ ಸಹಕಾರವೂ ಇತ್ತು ಎಂಬುದನ್ನು ಈಗಾಗಲೇ ಪ್ರತಿಸ್ಫರ್ಧಿ ಪತ್ರಿಕೆಗಳು ಸಾಕಷ್ಟು ಬೆಳಕಿಗೆ ತಂದಿವೆ.</div>
<div class="separator" style="clear: both; text-align: left;">
<br /></div>
<div class="separator" style="clear: both; text-align: left;">
ಆದರೆ, ಇಡೀ ಜಗತ್ತಿನಲ್ಲಿ ಒಬ್ಬನೇ ಓದುಗ, ಒಬ್ಬನೇ ಸಂಪಾದಕ, ಒಬ್ಬನೇ ವರದಿಗಾರ, ಒಬ್ಬನೇ ವಿತರಕ, ಒಬ್ಬನೇ ಮುದ್ರಕರನ್ನು ಹೊಂದಿರುವ ಬೊಗಳೆ ಪತ್ರಿಕೆಯು ಪ್ರತಿಸ್ಫರ್ಧಿಗಳು ಯಾರೂ ಬರೆಯಲಾಗದ ವರದಿಯೊಂದನ್ನು ಹೆಕ್ಕಿ ತಂದಿದೆ. ಅದರ ತನಿಖಾ ವರದಿ ಇಲ್ಲಿದೆ.</div>
<div class="separator" style="clear: both; text-align: left;">
<br /></div>
<div class="separator" style="clear: both; text-align: left;">
ಈ ಮೊದಲು, ಟಿಕ್-ಟಾಕ್ನಿಂದಾಗಿಯೇ ಭಾರತದಲ್ಲಿ ಸಾಕಷ್ಟು ಜನಸಂಖ್ಯೆ, ಅದರಲ್ಲಿಯೂ ಯುವಜನ ಸಂಖ್ಯೆ ಕಡಿಮೆಯಾಗಿತ್ತು. ಅಪಾಯಕಾರಿ ಪ್ರದೇಶಗಳಲ್ಲಿ, ಅತ್ಯಪಾಯಕಾರಿ ರೀತಿಯಲ್ಲಿ ವಿಡಿಯೊ ಮಾಡುವುದು, ಆತ್ಮಹತ್ಯೆ ಹೇಗೆ ಮಾಡಿಕೊಳ್ಳುವುದೆಂಬುದನ್ನು ತೋರಿಸಲು ವಿಡಿಯೊ ಮಾಡುವುದು, ಸ್ನೇಹಿತರು ಹುಡುಗಿ ಜೊತೆ ಟಿಕ್-ಟಾಕ್ ಮಾಡುವುದರ ಕುರಿತು ಜಗಳವಾಗಿ ಹೊಡೆದಾಟ-ಕೊಲೆ - ಇತ್ಯಾದಿ ವಿಧಾನಗಳ ಮೂಲಕವಾಗಿ ಭಾರತದ ಏರುತ್ತಿರುವ ಜನಸಂಖ್ಯೆಗೆ ಚೀನಾ ಕಡಿವಾಣ ಹಾಕಿತ್ತು. ಇದರ ಜೊತೆಜೊತೆಗೆ, ಭಾರತೀಯರ ಬೌದ್ಧಿಕ ಸಾಮರ್ಥ್ಯವನ್ನೂ ಟಿಕ್-ಟಾಕ್ನತ್ತ ಹರಿಸಿ, ಅವರು ಯಾವುದೇ ರೀತಿಯಲ್ಲಿಯೂ ಜಾಗತಿಕ ವಲಯದಲ್ಲಿ ಮಿಂಚದಂತೆ ಕಡಿವಾಣ ಹಾಕುವ ವೈರಸ್ಸೂ ಇದಾಗಿತ್ತು.</div>
<div class="separator" style="clear: both; text-align: left;">
<br /></div>
<div class="separator" style="clear: both; text-align: left;">
ಹಿಂದಿನ ಸರ್ಕಾರಗಳ ಅವಧಿಯಲ್ಲಿ ಚೀನಾದ ಮೊಬೈಲ್ ಫೋನುಗಳು, ಎಲೆಕ್ಟ್ರಾನಿಕ್ ಸಾಧನಗಳು, ಬಲ್ಬು, ದೇವರ ಮೂರ್ತಿಗಳೇ ಮುಂತಾದವುಗಳ ರೂಪದಲ್ಲಿ ವೈರಸ್ಸುಗಳು ದೇಶಾದ್ಯಂತ ಹರಡಿದ್ದವು. ದೇಶದಲ್ಲೇ ಉತ್ಪಾದನೆಯಾಗುತ್ತಿದ್ದ ಉತ್ಪನ್ನಗಳೆಲ್ಲವುಗಳ ಬೇಡಿಕೆ ಕುಸಿಯಿತು. ಚೀನಾ ವಸ್ತುಗಳಿಗೆ ಬೇಡಿಕೆಯಿಂದಾಗಿ ದೇಶದ ಆರ್ಥಿಕತೆಯಂತೂ ರಸಾತಳಕ್ಕಿಳಿದು, ಜನರ ದುಡ್ಡೆಲ್ಲ ಚೀನಾದ ಸಾಧನಗಳಿಗೆ ವ್ಯಯವಾಗಿ, ಚೀನಾವಂತೂ ಭಾರತೀಯರ ದುಡ್ಡಿನಲ್ಲಿ ಮೆರೆದು ಮೆರೆದು, ಭಾರತೀಯ ಭೂಭಾಗ ಕಬಳಿಸಿ, ನಮ್ಮ ಸೈನಿಕರ ಮೇಲೆ ದಾಳಿ ನಡೆಸುವಷ್ಟರ ಮಟ್ಟಿಗೆ ವರ್ಧಿಸಿತು. ಯುವಜನರ ಬುದ್ಧಿಗಳೆಲ್ಲವೂ ಟಿಕ್-ಟಾಕ್ಗೆ ಸೀಮಿತವಾಗಿ, ಪ್ರತಿಭೆಗಳೆಲ್ಲವೂ ಕುಗ್ಗಿ ಹೋಗಿದ್ದವು. ಹೊಸ ಪ್ರಧಾನಿ ಬಂದು ಕೂತಾಗ, ಅದಾಗಲೇ ಟಿಕ್-ಟಾಕ್ ಸಹಿತ ಈ ವೈರಸ್ಸುಗಳು ಹರಡಿಯಾಗಿತ್ತು.</div>
<div class="separator" style="clear: both; text-align: left;">
<br /></div>
<div class="separator" style="clear: both; text-align: left;">
ಒಂದೆಡೆ, ಭಾರತದಲ್ಲಿ ಬೆಳೆಯುತ್ತಿದ್ದ ಬುದ್ಧಿಶಕ್ತಿಗೂ ಕಡಿವಾಣ ಹಾಕಬೇಕಿತ್ತು; ಮತ್ತೊಂದೆಡೆಯಿಂದ, ಜನಸಂಖ್ಯೆಯಲ್ಲೂ ಭಾರತವು ತನ್ನ ಹೆಸರಿನಲ್ಲಿದ್ದ ನಂ.1 ಸ್ಥಾನವನ್ನು ಕಿತ್ತುಕೊಳ್ಳಲು ಮುಂದಾಗಿತ್ತು ಎಂದು ಯೋಚಿಸಿದ ಚೀನಾ, ಟಿಕ್-ಟಾಕ್ ಸಹಿತ ಎಲ್ಲ ರೀತಿಯ ವೈರಸ್ಸುಗಳನ್ನೂ ಭಾರತದೊಳಕ್ಕೆ ರವಾನಿಸಿತ್ತು. ಜನರ ಬುದ್ಧಿಗೂ ಟಿಕ್-ಟಾಕ್ನಂತಹಾ ವ್ಯಸನಕಾರಿ ಆ್ಯಪ್ಗಳು ಕಡಿವಾಣ ಹಾಕಿ, ಬುದ್ಧಿವಂತಿಕೆಯಲ್ಲೂ ನಂ.1 ಆಗದಂತೆ ಭಾರತವನ್ನು ತಡೆಯುವ ಉದ್ದೇಶವಿತ್ತು ಎಂದು ಅನ್ವೇಷಿ ಜೊತೆ ಮಾತನಾಡುತ್ತಿದ್ದ ಚೀನಾದ ನಿಧಾನಿ ಶೀಶೀ ಚಿನ್ ಪಿಂಗ್-ಪಾಂಗ್ ಅವರು ದೂರದ ವಾಣಿಯ ಮೂಲಕ ತಿಳಿಸಿದ್ದಾರೆ. ಆದರೂ ಕೆಲವು ಪ್ರಾಜ್ಞರು ಟಿಕ್-ಟಾಕ್ಗೆ ಸೊಪ್ಪು ಹಾಕದಿದ್ದ ಕಾರಣ, ಅದರ ಉದ್ದೇಶ ಈಡೇರಿರಲಿಲ್ಲ. ಈ ಕಾರಣಕ್ಕಾಗಿಯೇ ಕೊರೊನಾ ವೈರಸ್ಸನ್ನು ಚೀನಾವು ಭಾರತ ಮತ್ತಿತರ ದೇಶಗಳಿಗೂ ರವಾನಿಸಿತು ಎಂದು ಬೊಗಳೆ ಬ್ಯುರೋ ಕಂಡುಹಿಡಿದಿದೆ.</div>
<div class="separator" style="clear: both; text-align: left;">
<br /></div>
<div class="separator" style="clear: both; text-align: left;">
ಈ ಮಧ್ಯೆ, ಕರ್ನಾಟಕಟಕದ ವಿರೋಧಿ ಪಕ್ಷದ ಮುಖ್ಯಸ್ಥ ಟೀಕೇಶಿ ಅವರ ಕೊರೋನೇಷನ್ಗೂ ಕೊರೊನಾ ಎಂಬ ಮಾರಿಯು ಅಡ್ಡಿ ಮಾಡಿತ್ತು. ಆದರೂ, ವಿರೋಧಿ ಪಕ್ಷವಾದುದರಿಂದ, ಸರ್ಕಾರದ ನಿಯಮಗಳನ್ನೆಲ್ಲ ವಿರೋಧಿಸುವುದು, ಟೀಕಿಸುವುದು ಜನ್ಮಸಿದ್ಧ ಹಕ್ಕು. ಅಂತರ ಕಾಯ್ದುಕೊಂಡರೆ ಕೊರೊನಾ ಬರುವುದಿಲ್ಲ ಎಂಬುದು ಸುಳ್ಳು. ದೊಡ್ಡ ದೊಡ್ಡ ಪ್ರತಿಭಟನೆ ಮಾಡುತ್ತಲೇ, ಭರ್ಜರಿ ಜನಬಲ ಪ್ರದರ್ಶಿಸಬೇಕು. ಟಿಕ್-ಟಾಕ್ ಬಳಸುವವರಿಗೆ 1 ಲಕ್ಷ ರೂ. ಬಹುಮಾನ ಘೋಷಿಸಿಯೇ ಅಧಿಕಾರಕ್ಕೆ ಗ್ರಹಣ ಹಿಡಿಯಬೇಕು ಎಂದು ಪ್ಲ್ಯಾನ್ ಮಾಡಿದ್ದರು. ಇದೀಗ ಅದೇ ಹಳೆಯ ಟಿಕ್-ಟಾಕ್ ಬಳಸಲು ಕರೆ ನೀಡಿದಾಕ್ಷಣವೇ ಅದನ್ನು ನಿಷೇಧಿಸಿರುವುದು, ನಮ್ಮ ಏಳಿಗೆ ಸಹಿಸದ ಸರ್ಕಾರದ ಕುತಂತ್ರ ಎಂದು ಅವರು ಗೋಷ್ಠಿಯ ಮೂಲಕ ವರದ್ದಿಗಾರರಿಗೆ ಸ್ಪಷ್ಟಪಡಿಸಿದ್ದಾರೆ.</div>
</div>
Anveshihttp://www.blogger.com/profile/04356401566159202899noreply@blogger.com2tag:blogger.com,1999:blog-25346734.post-43225538752508441142020-06-26T08:58:00.001+05:302020-06-26T08:58:16.379+05:30BARKING ನ್ಯೂಸ್: ಆಸ್ಪತ್ರೆಯಿಂದಲೇ ಪರಾರಿಯಾದ ಕೊರೊನಾ!<div class="separator" style="clear: both; text-align: center;">
<a href="https://blogger.googleusercontent.com/img/b/R29vZ2xl/AVvXsEi6fL026JENveC58BxcN9KKGBGjQF7FIDRHLvGhZdIAEJmF-LjhxA-sehTjqcYvL5YGZfeRCLX345bbE02dGYSP1XdGY55cFj_BNHJKpDstCt3ciKKhGnexee0uFKs9IRRhc4tV7w/s1600/Bogale+Light+Red.jpg" imageanchor="1" style="margin-left: 1em; margin-right: 1em;"><img border="0" data-original-height="500" data-original-width="1182" height="135" src="https://blogger.googleusercontent.com/img/b/R29vZ2xl/AVvXsEi6fL026JENveC58BxcN9KKGBGjQF7FIDRHLvGhZdIAEJmF-LjhxA-sehTjqcYvL5YGZfeRCLX345bbE02dGYSP1XdGY55cFj_BNHJKpDstCt3ciKKhGnexee0uFKs9IRRhc4tV7w/s320/Bogale+Light+Red.jpg" width="320" /></a></div>
<br />
<div class="separator" style="clear: both; text-align: center;">
</div>
<div style="text-align: center;">
<b>[ಬೊಗಳೂರು ಶಂಕಿತ ಬ್ಯುರೋದಿಂದ]</b></div>
<b>ಬೊಗಳೂರು:</b> ಜಾಗತಿಕವಾಗಿ ಕೊರೊನಾ ವೈರಸ್ಸನ್ನು ಬೇಕು ಬೇಕೆಂದೇ, ತಾವಾಗಿಯೇ ಅಂಟಿಸಿಕೊಳ್ಳುತ್ತಿರುವವರ ಸಂಖ್ಯೆ ಹೆಚ್ಚಾಗುತ್ತಿರುವಂತೆಯೇ, ಆಸ್ಪತ್ರೆಗಳೂ ನಿಧಾನವಾಗಿ ತುಂಬಿ ತುಳುಕಾಡಲಾರಂಭಿಸಿದೆ. ಇದಕ್ಕೆ ಪ್ರಮುಖ ಕಾರಣವೆಂದರೆ, "ನಮಗೇನೂ ಚಿಕಿತ್ಸೆ ಬೇಕಾಗಿಲ್ಲ, ನಮ್ಮನ್ನು ದೇವ್ರೇ ರಕ್ಷಿಸ್ತಾರೆ" ಅಂದುಕೊಂಡವರೆಲ್ಲಾ ಬಲವಂತವಾಗಿ ಆಸ್ಪತ್ರೆ ಸೇರುತ್ತಿದ್ದಾರೆ. ಅಷ್ಟೇ ಅಲ್ಲ, ತಮ್ಮನ್ನು ರಕ್ಷಿಸಲು ಬಂದ ದೇವರ ಮೇಲೆಯೇ ಉಗಿದವರೆಲ್ಲರನ್ನೂ ಬಲವಂತವಾಗಿ ಆಸ್ಪತ್ರೆಗೆ ಸೇರಿಸಿ, ಅವರು ಮತ್ತಷ್ಟು ಮಂದಿಗೆ ವೈರಸ್ ಹರಡಂತೆ ಬೊಗಳೂರು ಸರ್ಕಾರವೂ ಕ್ರಮ ಕೈಗೊಳ್ಳುತ್ತಿದೆ.<br />
<br />
ಇದೀಗ ಆಸ್ಪತ್ರೆ ಸೇರಿರುವ ಕೋವಿಡ್-19 ರೋಗಿಗಳು, ತಮಗಿನ್ನೂ ಯಾವುದೇ ಕಾಯಿಲೆ ಇಲ್ಲ ಎಂದು ಹೇಳುತ್ತಾ, ಊರಿಗೆ ಪ್ರಸಾದ ಹಂಚಲು ಹೊರಡುತ್ತಿದ್ದಾರೆ. ಇವರ ಆಟಾಟೋಪಗಳನ್ನು ನೋಡಿದ ಕೊರೊನಾಗೆ ತಲೆಕೆಟ್ಟುಹೋಗಿರುವುದಾಗಿ ವರದ್ದಿಯಾಗಿದೆ.<br />
<br />
ಈ ಕುರಿತು <a href="https://bangaloremirror.indiatimes.com/bangalore/others/covid-19-patient-spits-on-security-personnel-flees-bengaluru-hospital/articleshow/76553510.cms" target="_blank">ಉಗುಳಿ ಪರಾರಿಯಾದವನನ್ನು ಬೊಗಳೆ ಬ್ಯುರೋ</a> ಪತ್ತೆ ಹಚ್ಚಿ ಮಾತನಾಡಿದಾಗ ಆತ ಹೇಳಿದ್ದೇನೆಂದರೆ, ನಮಗೆ ಚಿಕ್ಕಂದಿನಿಂದಲೂ ಸಂಗೀತ ಕಲಿಯುವ ಆಸೆಯಿತ್ತು. ಉಗುಳಿ ಉಗುಳಿ ರಾಗ ಅಂತ ಯಾರೋ ಹೇಳಿದ್ರು ಅಂತ, ತಾನು ತಿಳಿದುಕೊಂಡಿದ್ದೇ ಸರಿ ಎಂಬ ಮನೋಭಾವ ಪ್ರದರ್ಶಿಸಿ, ಮತ್ತಷ್ಟು ಮುಂದಕ್ಕೆ ಪರಾರಿಯಾಗಿರುವುದಾಗಿ ಮೂಲಗಳು ವರದ್ದಿ ಮಾಡಿವೆ.<br />
<br />
ಈ ಎಲ್ಲ ಚಟುವಟಿಕೆಗಳಿಂದ ತಲೆಕೆಟ್ಟು ಮತ್ತು ಕೆಡದೆಯೂ ರೋಸಿ ಹೋದ ಕೊರೊನಾ ವೈರಸ್ಸೇ ಈಗ, ಆಸ್ಪತ್ರೆಯಿಂದ ಪರಾರಿಯಾಗಿರುವ ಅಘಟಿತ ಘಟನೆಯೊಂದನ್ನು ಬೊಗಳೆ ವರದ್ದಿಗಾರರು ಹೆಕ್ಕಿ ತಂದಿದ್ದಾರೆ.Anveshihttp://www.blogger.com/profile/04356401566159202899noreply@blogger.com2tag:blogger.com,1999:blog-25346734.post-62770878885764404272020-06-22T12:20:00.000+05:302020-06-22T12:20:08.117+05:30BARKING NEWS | ಕೊರೊನಾ ನಿಮ್ಹಾನ್ಸ್ಗೆ ದಾಖಲಾಗಿದ್ದೇಕೆ ಗೊತ್ತೇ?<div class="separator" style="clear: both; text-align: center;">
<a href="https://blogger.googleusercontent.com/img/b/R29vZ2xl/AVvXsEiOvwuaO7pvl1Z9NKg5alKVnL5XN_hDDRc_dGNUbyv1M6mamfQIrZZ2ipDHtDe5iSqJ4PL4TlYvrnNJoq4312pmqqgjKhb9Kcrhl9rsFJGXTrLhAQrj2djovN61WvScczGqvfJgug/s1600/Anveshi+Blue.png" imageanchor="1" style="margin-left: 1em; margin-right: 1em;"><img border="0" data-original-height="450" data-original-width="800" height="225" src="https://blogger.googleusercontent.com/img/b/R29vZ2xl/AVvXsEiOvwuaO7pvl1Z9NKg5alKVnL5XN_hDDRc_dGNUbyv1M6mamfQIrZZ2ipDHtDe5iSqJ4PL4TlYvrnNJoq4312pmqqgjKhb9Kcrhl9rsFJGXTrLhAQrj2djovN61WvScczGqvfJgug/s400/Anveshi+Blue.png" width="400" /></a></div>
<div style="text-align: center;">
<b><br /></b></div>
<div style="text-align: center;">
<b>[ಸೋಂಕಿತರ ಬ್ಯುರೋದಿಂದ]</b></div>
<span style="font-size: large;"><b>ಬೊಗಳೂರು:</b> 'ಮೇಡ್ ಇನ್ ಚೀನಾ' ಕೊರೊನಾ ವೈರಸ್ ಜಗತ್ತಿನಾದ್ಯಂತ ಹಾರಾಡಿ, ಹರಡಿ ಬೊಗಳೂರಿಗೆ ಕಾಲಿಟ್ಟಿದ್ದು ಇತಿಹಾಸಕ್ಕೆ ಸೇರಿದೆ. ಆದರೆ, ಇಲ್ಲಿನ ಜನ ಕೊರೊನಾ ರಣಕೇಕೆಗೆ ಸ್ಪಂದಿಸಿದ ವಿಚಾರ ಮಾತ್ರ ದೇಶಾದ್ಯಂತ ಚರ್ಚೆಗೆ ಗ್ರಾಸವಾಗಿದೆ, ಪೊಲೀಸರು ಕೂಡ ಬಿದ್ದು ಬಿದ್ದು ನಕ್ಕಿದ್ದಾರೆ ಮತ್ತು ಅಪಹಾಸ್ಯಕ್ಕೂ ಕಾರಣವಾಗಿದೆ. ಆದರೆ, ಕೊರೊನಾ ವೈರಸ್ <a href="https://www.deccanherald.com/city/top-bengaluru-stories/nimhans-high-intensive-psychiatry-observation-ward-temporarily-shifted-after-three-patients-test-covid-19-positive-852183.html" target="_blank">ನಿಮ್ಹಾನ್ಸ್ಗೂ ವಕ್ಕರಿಸಿದೆ ಎಂಬ ವರದ್ದಿಯ</a> ಹಿಂದೆ ಬಿದ್ದ ಬೊಗಳೆ ಬ್ಯುರೋ, ಇದರ ಹಿಂದಿರುವ ಕಾರಣವನ್ನು ಪತ್ತೆ ಮಾಡಿ ರಣಕೇಕೆ ಹಾಕಿದೆ.</span><br />
<span style="font-size: large;"><br /></span>
<span style="font-size: large;">ಬೊಗಳೂರಿನೆಲ್ಲೆಡೆ ಸಾಮಾನ್ಯ ದಿನಗಳಲ್ಲಿ ಸರಿಯಾಗಿಯೇ ಇದ್ದ ಜನತೆ, ಲಾಕ್ಡೌನ್ ಆದಾಗ ಮಾತ್ರವಲ್ಲ, ಸೀಲ್ಡೌನ್ ಆದಾಗ ತಮ್ಮ ಚಟುವಟಿಕೆಯ ವೇಗವನ್ನು ಹೆಚ್ಚಿಸಿಕೊಂಡಿದ್ದರು. ಬೊಗಳೂರಿನ ಸೋಂಕುರಾಯನಪುರದಲ್ಲಂತೂ ಸೀಲ್ಡೌನ್ ಮಾಡಿದ್ದರೂ, ಕೊರೊನಾ ವಾರಿಯರ್ಸ್ ಮೇಲೆ ಹಲ್ಲೆ ನಡೆಸಿದ ಈ ಜನರು ರಣಕೇಕೆ ಹಾಕಿದ್ದರು. ಸೀಲ್ಡೌನ್ ಮಾಡಿದ್ದ ಕೋಟೆ ಕೊತ್ತಳಗಳನ್ನೆಲ್ಲಾ ಸೀಳು ಮಾಡಿದ್ದರು. ಇದನ್ನು ಕಂಡು ಆಕ್ರೋಶಗೊಂಡ ಕೊರೊನಾ ವೈರಸ್ ಕೂಡ, ತನ್ನ ರಣಕೇಕೆಯನ್ನು ಹೆಚ್ಚಿಸಿಕೊಂಡಿತು. ಯಾರನ್ನೂ ಬಿಡದೆ ಬಹುತೇಕರನ್ನು ಹಗ್ ಮಾಡಿ, ಕಿಸ್ ಮಾಡಿ ಕಳುಹಿಸಿತು.</span><br />
<span style="font-size: large;"><br /></span>
<span style="font-size: large;">ಸೋಂಕುರಾಯನ ಪುರದ ಕಾರ್ಪೊರೇಟರನ್ನೇ ಹಗ್ ಮಾಡಿದ ಕೊರೊನಾ, ಆತ ಆಸ್ಪತ್ರೆಗೆ ದಾಖಲಾಗುವಂತೆ ಮಾಡಿತು. ಆದರೆ ಈ ಸಂದರ್ಭದಲ್ಲೂ ಕೊರೊನಾಗೆ ಸೆಡ್ಡು ಹೊಡೆದ ಈ ವಾರ್ಡ್ನ ಜನರು ತಮ್ಮ ನಾಯಕನನ್ನು ಯುದ್ಧಕ್ಕೆ ಕಳುಹಿಸುವ ಮಾದರಿಯಲ್ಲಿ ಅಂತರ ಕಾಯ್ದುಕೊಳ್ಳದೆ, ರಣಕೇಕೆ ಹಾಕುತ್ತಾ, ಆರತಿ ಎತ್ತಿ, ಮೆರವಣಿಗೆಯಲ್ಲೇ ಕಳುಹಿಸಿಕೊಟ್ಟಿದ್ದರು. ಈ ಸಂದರ್ಭ ಈ ಜನರು ಹಾಗೂ ಕೊರೊನಾ ವೈರಸ್ ಮಧ್ಯೆ ಭೀಕರ ಯುದ್ಧ ನಡೆದು, ಹಲವರು ಕೋವಿಡ್-19 ಮೆತ್ತಿಕೊಂಡು ಆಸ್ಪತ್ರೆ ಸೇರಿದ್ದರೆ, ಇನ್ನು ಕೆಲವರು ಮನೆಯೊಳಗೇ ಅಡಗಿ ಕುಳಿತಿದ್ದರು.</span><br />
<span style="font-size: large;"><br /></span>
<span style="font-size: large;">ಸೀಲ್ಡೌನ್ ಮಾಡಲಾದ ಪ್ರದೇಶಗಳಲ್ಲಿ ಮಕ್ಕಳು, ಮಹಿಳೆಯರೆನ್ನದೆ ಕಾಂಪೌಂಡ್ ಹಾರಿಯೂ ಹೊರ ಪ್ರದೇಶಗಳಿಗೆ ಹೋಗಿ, ಊರೆಲ್ಲಾ ಆರಾಮವಾಗಿ ಪಾರ್ಕ್, ಶಾಪಿಂಗ್ ಅಂತ ಸುತ್ತಾಡಿದ್ದರು. ಆದರೆ ಈ ಕೊರೊನಾ ವೈರಸ್ ಮಾತ್ರ ವೇಷ ಮರೆಸಿಕೊಂಡು, ಇವರ ಜೊತೆಗೂ ಸುತ್ತಾಡಲಾರಂಭಿಸಿತ್ತು. ಕಾಂಪೌಂಡ್ ಹಾರಿ ಸೀರೆ, ಡ್ರೆಸ್ ಖರೀದಿಗೆ, ಪಾನಿಪುರಿ-ಗೋಬಿ ಮಂಚೂರಿ ತಿನ್ನಲು, ಶಾಪಿಂಗ್ ಮಾಲುಗಳಿಗೆ ತೆರಳಿದ್ದ ಈ ಮಂದಿ, ತಮಗರಿವಿಲ್ಲದಂತೆಯೇ ಕೋವಿಡ್ ಪ್ರಸಾದವನ್ನೂ ಹಂಚಿಬಿಟ್ಟಿದ್ದರು.</span><br />
<span style="font-size: large;"><br /></span>
<span style="font-size: large;">ಲಾಕ್ಡೌನ್ ಇಲ್ಲದಿರುವ ಅವಧಿಯಲ್ಲೇ ಗರಿಷ್ಠ ಓಡಾಟ, ಸುತ್ತಾಟ, ತಿನ್ನಾಟ, ಕಿತ್ತಾಟ, ಊಟ-ಆಟದಲ್ಲಿ ತೊಡಗಿದ್ದ ಇಂಥಾ ಜನರ ಪರಿಸ್ಥಿತಿ ಕಂಡು ಇದೀಗ ಕಳವಳಗೊಂಡು, ಗೊಂದಲಕ್ಕೀಡಾಗಿ, ಏನು ಮಾಡಬೇಕೆಂದೆಲ್ಲಾ ತಿಳಿಯದೆ ಕೊರೊನಾ ವೈರಸ್, ಕೊನೆಗೆ ಮಾನಸಿಕ ಅಸ್ವಸ್ಥಗೊಂಡು, <b>ಖಿನ್ನತೆಯಿಂದ</b> ಬೊಗಳೂರಿನ ಪ್ರಸಿದ್ಧ ಮಾನಸಿಕ ರೋಗ ಆಸ್ಪತ್ರೆಯಾಗಿರುವ ನಿಮ್ಹಾನ್ಸ್ಗೆ ಸ್ವಯಂಪ್ರೇರಣೆಯಿಂದ ದಾಖಲಾಗಿದೆ ಎಂದು ಬೊಗಳೆಯ ಏಕಸದಸ್ಯ ಬ್ಯುರೋದ ಮುಖ್ಯಸ್ಥ ಅನ್ವೇಷಿ ನೇತೃತ್ವದ ರದ್ದಿಗಾರರ ತಂಡವು ಪತ್ತೆ ಹಚ್ಚಿದೆ.</span>Anveshihttp://www.blogger.com/profile/04356401566159202899noreply@blogger.com1tag:blogger.com,1999:blog-25346734.post-59822331061069651572020-06-20T14:04:00.001+05:302020-06-20T14:04:53.321+05:30BarKing News: Corona Virus ಬಂಧಿಸಲು ಹೋದ ಪೊಲೀಸರು ಬಿದ್ದು ಬಿದ್ದು ನಕ್ಕಿದ್ದೇಕೆ?<div><br /></div><div><br /></div><div style="text-align: center;"><div class="separator" style="clear: both; text-align: center;"><a href="https://blogger.googleusercontent.com/img/b/R29vZ2xl/AVvXsEjWT0LEwt3Ye78PaXOF9lZlMd7KILPtZvrArPAiO7fOLJUtTvjUJfBlZKeSwERr53xQOy3Vcz5E1hsNx-VxG6SwcUU5gfPuJp46RCpjfaqPXMgh3XjBUq3hEaw8i50eBoNh73jASw/s1182/MaskDay+bogale.png" style="margin-left: 1em; margin-right: 1em;"><img border="0" data-original-height="500" data-original-width="1182" height="169" src="https://blogger.googleusercontent.com/img/b/R29vZ2xl/AVvXsEjWT0LEwt3Ye78PaXOF9lZlMd7KILPtZvrArPAiO7fOLJUtTvjUJfBlZKeSwERr53xQOy3Vcz5E1hsNx-VxG6SwcUU5gfPuJp46RCpjfaqPXMgh3XjBUq3hEaw8i50eBoNh73jASw/w400-h169/MaskDay+bogale.png" width="400" /></a></div><div class="separator" style="clear: both; text-align: center;"><br /></div><div class="separator" style="clear: both; text-align: center;"><br /></div><b>😀😀😀😀😃😃😃</b></div><div style="text-align: center;"><b>[ಕೋವಿದ ಬ್ಯುರೋದಿಂದ]</b></div><font size="5"><b>ಬೊಗಳೂರು:</b> ಜೂ. 19ರಿಂದ ಪ್ರತಿ ಗುರುವಾರ ಮಾಸ್ಕ್ ಡೇ ಆಚರಣೆಗೆ ಪ್ರತಿಯಾಗಿ ಪ್ರತೀ ಪ್ರತಿಪಕ್ಷಗಳು ಆಂಟಿ ಮಾಸ್ಕ್ ದಿನಾಚರಣೆ ಮಾಡಿರುವುದು ನಿಮಗೆ ಗೊತ್ತೇ ಇದೆ. ಆದರೆ, ಮಾಸ್ಕ್ ದಿನಾಚರಣೆಯ ಸ್ಲೋಗನ್ನಲ್ಲಿದ್ದಂತೆ ಕೊರೊನಾ ಬಂಧಿಸಲು ತೆರಳಿದ ಪೊಲೀಸರು ಬಿದ್ದು ಬಿದ್ದು ನಕ್ಕ ಅಘಟಿತ ಘಟನೆಯೊಂದನ್ನು ಬೊಗಳೆ ಬ್ಯುರೋ ಕ್ಷಿಪ್ರವಾಗಿ, ಬ್ರೇಕಿಂಗ್ ಸುದ್ದಿಯನ್ನು ತಡವಾಗಿ ವರದ್ದಿ ಮಾಡಿದೆ.</font><div><font size="5"><br /></font></div><div><font size="5">ದೇಶಾದ್ಯಂತ ರಣಕೇಕೆ ಹಾಕುತ್ತಾ, ರಣಚಂಡಿಯಾಗಿ, ಕ್ರೂರಿಯಾಗಿ, ರಕ್ತಪಿಪಾಸುವಾಗಿ, ರಕ್ಕಸನಾಗಿ, ಮಹಾಮಾರಿಯಾಗಿ, ರಣಚಂಡಿಯಾಗಿ- ಪುಂಡಿಯಾಗಿ, ಹೆಮ್ಮಾರಿಯಾಗಿ, ಕಿಲ್ಲರ್ ಆಗಿ, ಮರ್ಡರರ್ ಆಗಿ, ರಾಕ್ಷಸರೂಪಿಯಾಗಿ, ಪ್ರಳಯಾಂತಕನಾಗಿ, ಡೆಡ್ಲೀಯಾಗಿ, ಕೊಲೆಪಾತಕನಾಗಿ, ಆಗಿ, ಹೀಗಿ, ಹೋಗಿ.... ರಕ್ಕಸ ರಣತಾಂಡವವಾಡುತ್ತಾ ಭಯ ಉತ್ಪಾದನೆಯ ಜೊತೆಗೆ ಅಕ್ಷರ ಭಯವನ್ನೂ ಉತ್ಪಾದಿಸಿ, ಡಿಕ್ಷನರಿಯಲ್ಲಿದ್ದ ಎಲ್ಲ ಪದಗಳನ್ನೂ ಕುಕ್ಕಿ ಕುಕ್ಕಿ ತಂದು ಸುರುವಿದ ಬುದ್ಧಿ ವಾಹಿನಿಗಳ ಬಗ್ಗೆ ನಮ್ಮ ರದ್ದಿಗಾರರು ಪೊಲೀಸರಿಗೆ ಮೊದಲೇ ಆ ವಿಡಿಯೊಗಳನ್ನು ತೋರಿಸಿದ್ದರು.</font></div><div><font size="5"><br /></font></div><div><font size="5">ಜೊತೆಗೆ ಈ ಚಾnull ಗಳಲ್ಲಿ ಪ್ರಸಾರವಾದ ಕೊರೊನಾ ವೈರಸ್ನ ಭಾವಚಿತ್ರವನ್ನೂ ತೋರಿಸಿ, ಪತ್ತೆ ಮಾಡಲು ವಿನಂತಿಸಲಾಗಿತ್ತು.</font></div><div><font size="5"><br /></font></div><div><font size="5">ಹೀಗೆ, ಪೊಲೀಸರ ಮೇಲೆ ದಾಳಿ ನಡೆಸಿದ, ಗರ್ಭಿಣಿಯರನ್ನು ಪೀಡಿಸಿದ, ಮಕ್ಕಳ ಒಳಹೊಕ್ಕ, ಕೊರೊನಾ ವಾರಿಯರ್ಸನ್ನೂ ಬಿಡದ, ಬೀದಿ ಬೀದಿಯಲ್ಲಿ ಅಟ್ಯಾಕ್ ಮಾಡುತ್ತಿದ್ದ, ಮಕ್ಕಳಿಂದ ವೃದ್ಧರವರೆಗೂ ಜೀವ ಹಿಂಡುತ್ತಿದ್ದ ಕೊರೊನಾ ವೈರಸ್ ಅನ್ನು ಹಿಡಿಯಲು ಹೋದ ಪೊಲೀಸರು ಬೇಸ್ತು ಬಿದ್ದಿದ್ದು ವರದ್ದಿಯಾಗಿದೆ.</font></div><div><font size="5"><br /></font></div><div><font size="5">ಇಂಥ ರಾಕ್ಷಸ, ಕೊಲೆಗಾರ, ಪಾತಕಿ, ಹಂತಕನನ್ನು ಹೇಗಪ್ಪಾ ಹಿಡಿಯುವುದು ಎಂಬ ಚಿಂತೆಯಲ್ಲಿದ್ದ ಬೊಗಳೂರು ಪೊಲೀಸರ ಕೈಗೆ ಸಿಲುಕದೆ ಈ ವೈರಸ್ ಸ್ವಲ್ಪದರಲ್ಲೇ ತಪ್ಪಿಸಿಕೊಂಡಿತ್ತು.</font></div><div><font size="5"><br /></font></div><div><font size="5">ಆದರೆ ಯಾವ ಕೊರೊನಾ ವೈರಸ್ಸನ್ನು ಹಿಡಿಯುವುದು ಎಂಬುದೇ ಪೊಲೀಸರಿಗೆ ತಲೆನೋವಿನ ಸಂಗತಿ. ಯಾಕೆಂದರೆ ಎಲ್ಲ ವೈರಸ್ಸುಗಳೂ ಚೀನಾದಲ್ಲೇ ಹುಟ್ಟಿದವುಗಳಾಗಿದ್ದರಿಂದ, ನೋಡುವುದಕ್ಕೆ ಒಂದೇ ರೀತಿಯಾಗಿದ್ದವು.</font></div><div><font size="5"><br /></font></div><div><font size="5">ಅವುಗಳಲ್ಲಿ ಒಂದನ್ನು ಬಂಧಿಸಿ, ಗುದ್ದಿ ಗುದ್ದಿ ಕೊಲ್ಲಲುದ್ಯುಕ್ತವಾದಾಗ, "ಅದನ್ನು ಹರಡಿದ್ದು ನಾನಲ್ಲ, ನಾನು ಎಷ್ಟೋ ವರ್ಷಗಳಿಂದ ಇಲ್ಲೇ ನೆಲೆಯೂರಿದ್ದೆ. ಅದು ಓ ಅವನು" ಎಂದು ದೇಶದೊಳಗಿದ್ದುಕೊಂಡೇ, ಸರ್ಕಾರವನ್ನು, ಸರ್ಕಾರದ ಎಲ್ಲ ಕ್ರಮಗಳನ್ನೂ ಟೀಕಿಸುತ್ತಿದ್ದ ಮತ್ತೊಂದು ವೈರಸ್ಸನ್ನು ತೋರಿಸಿತು. ಅದು ಕೂಡ ಸೇಮ್ ಟು ಸೇಮ್ ಆರೋಪ ಮಾಡಿತು. ಅಲ್ಲಿಗೆ ಗುಲಾಮರು ಮತ್ತು ಭಕ್ತರು ಹೆಸರಿನ ಎರಡು ಪಂಗಡಗಳು ಪರಸ್ಪರ ಕೆಸರು ಚೆಲ್ಲಿಕೊಳ್ಳಲಾರಂಭಿಸಿದವು.</font></div><div><font size="5"><br /></font></div><div><font size="5">ಈ ವೈರಸ್ಗಳ ಆಟಾಟೋಪ ನೋಡಲಾರದೆ, ಪೊಲೀಸರಿಗೆ ನಗು ತಡೆದುಕೊಳ್ಳಲಾಗದೆ, "ಓ ಇದು ಯಾವಾಗಲೂ ಹೇಳಿದ್ದನ್ನೇ ಹೇಳುವ, ಆಗಾಗ್ಗೆ ರೂಪ ಬದಲಿಸುವ, ಚುನಾವಣೆ ಬಂದಾಗ ಜೋರಾಗಿಯೇ ಸೀನುವ ವೈರಸ್ಸು" ಎಂದು ಬಿದ್ದರು, ಮತ್ತೆ ಬಿದ್ದರು, ಮತ್ತು ಮತ್ತೇರಿ ನಕ್ಕರು ಎಂದು ಬೊಗಳೆ ಬ್ಯುರೋ ವರದ್ದಿ ಮಾಡಿದೆ.</font></div>Anveshihttp://www.blogger.com/profile/04356401566159202899noreply@blogger.com0